ಆ್ಯಪ್ನಗರ

ಮೋದಿ ಪ್ರಚಾರಕ್ಕೆ ಯೋಜನೆಗಳ ಶೇ.51ರಷ್ಟು ಅನುದಾನ: ಡಾ. ಜಯಮಾಲ ಆರೋಪ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಚಾರಕ್ಕಾಗಿಯೇ ಯೋಜನೆಗಳ ಶೇ.51ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ಹೀಗಾದಲ್ಲಿ ರೂಪಿಸಿದ ಯೋಜನೆಗಳಿಂದ ಬಡವರಿಗೆ ನ್ಯಾಯ ಸಿಗಲು ಸಾಧ್ಯವೇ? ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದ್ದಾರೆ.

Vijaya Karnataka 6 Apr 2019, 5:00 am
ಕಾರ್ಕಳ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಚಾರಕ್ಕಾಗಿಯೇ ಯೋಜನೆಗಳ ಶೇ.51ರಷ್ಟು ಅನುದಾನವನ್ನು ಬಳಕೆ ಮಾಡಲಾಗಿದೆ. ಹೀಗಾದಲ್ಲಿ ರೂಪಿಸಿದ ಯೋಜನೆಗಳಿಂದ ಬಡವರಿಗೆ ನ್ಯಾಯ ಸಿಗಲು ಸಾಧ್ಯವೇ? ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಹೇಳಿದ್ದಾರೆ.
Vijaya Karnataka Web modi offers 51 per cent of projects for promotion dr jayamala accused
ಮೋದಿ ಪ್ರಚಾರಕ್ಕೆ ಯೋಜನೆಗಳ ಶೇ.51ರಷ್ಟು ಅನುದಾನ: ಡಾ. ಜಯಮಾಲ ಆರೋಪ


ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಬೇಟಿ ಬಚಾವೋ, ಬೇಟಿ ಪಡಾವೋ' ಎನ್ನುವುದು 280 ಕೋಟಿ ರೂ. ಪ್ರಾಜೆಕ್ಟ್. ಆದರೆ ಅದರ ಪೈಕಿ 145 ಕೋಟಿ ರೂ.ವನ್ನು ಮೋದಿ ಅವರ ಜಾಹೀರಾತಿಗಾಗಿ ಖರ್ಚು ಮಾಡಲಾಗಿದೆ. ಹೀಗಾದಲ್ಲಿ ಯೋಜನೆಯ ಮೂಲ ಉದ್ದೇಶ ಈಡೇರಿಕೆಯಾಗಿದೆಯೇ? ಎಂದು ಪ್ರಶ್ನಿಸಿದರು.

ನೈತಿಕ ಹಕ್ಕಿಲ್ಲ: ಬಿಜೆಪಿಗೆ ಮತ ಯಾಚಿಸಲು ನೈತಿಕ ಹಕ್ಕಿಲ್ಲ. ಚುನಾವಣೆ ಸಂದರ್ಭ ಕೊಟ್ಟ ಆಶ್ವಾಸನೆಗಳನ್ನು ಇನ್ನೂ ಈಡೇರಿಸಿಲ್ಲ. ಪ್ರಸ್ತುತ ಅಭ್ಯಥಿಯ ಹೆಸರು ಮರೆ ಮಾಚಿ ಮೋದಿ ಹೆಸರಿನಲ್ಲಿ ಮತಯಾಚನೆ ಮಾಡಲಾಗುತ್ತಿದೆ. ಸತ್ಯ ಮತ್ತು ಸುಳ್ಳಿನ ನಡುವೆ ನಡೆಯುವ ಚುನಾವಣೆ ಇದಾಗಿದ್ದು, ದೇವರ ನಾಡಾಗಿರುವ ಈ ಜಿಲ್ಲೆಯ ಪ್ರಜ್ಞಾವಂತ ಜನತೆ ಸತ್ಯಾಸತ್ಯತೆ ಅವಲೋಕಿಸಿ ಮತ ಚಲಾಯಿಸುತ್ತಾರೆ ಎನ್ನುವ ಆತ್ಮವಿಶ್ವಾಸ ನನಗಿದೆ ಎಂದರು.

ಕೇಂದ್ರದ ವೈಫಲ್ಯ: ಉಡುಪಿ ಜಿಲ್ಲೆಯ 7 ಮೀನುಗಾರರು ನಾಪತ್ತೆಯಾದ ಪ್ರಕರಣ ಇನ್ನು ಭೇದಿಸಿಲ್ಲ. ಇದು ಕೇಂದ್ರ ಸರಕಾರದ ವೈಫಲ್ಯವಾಗಿದ್ದು, ಈ ಬಗ್ಗೆ ರಾಜ್ಯ ಸರಕಾರದಿಂದ ಸಂಪೂರ್ಣ ತನಿಖೆ ನಡೆಸಿಯಾಗಿದೆ. ಜತೆಗೆ ಗೋವಾ, ಮಹಾರಾಷ್ಟ್ರದಲ್ಲೂ ತನಿಖೆ ನಡೆಸಿದ್ದೇವೆ. ಯುಸ್ರೋ ಮೂಲಕ ಟಚ್‌ ಮಾಡಿದ್ದೇವೆ. ಉಡುಪಿಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತಯಾಚನೆಗೆ ಬರುತ್ತಿದ್ದು, ಮುಂದಿನ ತನಿಖೆಯ ಜವಾಬ್ದಾರಿ ಅವರದ್ದಲ್ಲವೇ?. ಪ್ರಸ್ತುತ ಈ ಮೀನುಗಾರರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ, ಆ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿಯೂ ಕಾನೂನಿನ ತೊಡಕು ಎದುರಾಗಿದೆ. ಹಾಗಾದರೆ ಆ ಕುಟುಂಬಗಳಿಗೆ ನ್ಯಾಯ ಒದಗಿಸುವರಾರು? ಎಂದು ಪ್ರಶ್ನಿಸಿದರು.

ಕೇಸ್‌ ಪ್ರೂವ್‌ ಮಾಡಿದ್ದೀರಾ?: ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸರಕಾರದ ವಿರುದ್ಧ ಅಪಪ್ರಚಾರ ಮಾಡಿ ಅಧಿಕಾರ ಹಿಡಿದಿದ್ದೀರಿ. ಆದರೆ ಐದು ವರ್ಷಗಳ ಅವಧಿಯಲ್ಲಿ ಈ ಹಿಂದಿನ ಸರಕಾರದ ಮೇಲೆ ಹೊರಿಸಿದ ಯಾವ ಕೇಸನ್ನು ಪ್ರೂವ್‌ ಮಾಡಿದ್ದೀರಿ?. ಹಾಗಾದರೆ ನೀವು ಹೇಳಿದ್ದು ಬರೇ ಸುಳ್ಳಲ್ಲವೇ?. ಪ್ರತಿಯೊಂದು ಹಂತದಲ್ಲೂ ಜನರ ಸಹಾಯಕ್ಕೆ ರಾಜ್ಯ ಸರಕಾರ ಧಾವಿಸುತ್ತಿದೆ. ಹಾಗಾದರೆ ಕೇಂದ್ರ ಸರಕಾರದ ಕೊಡುಗೆ ಏನು? ಎಂದರು.

2000 ಸಾವಿರ ಕೋಟಿ: ಪ್ರಮೋದ್‌ ಮಧ್ವರಾಜ್‌ ಉಡುಪಿ ಶಾಸಕತ್ವದ ಅವಧಿಯಲ್ಲಿ 2 ಸಾವಿರ ರೂ. ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಹೊರ ಜಿಲ್ಲೆಯಿಂದ ಬಂದು ಗೆದ್ದವರು ಮಾಡಿದ ಸಾಧನೆ ಏನು? ಎನ್ನುವುದನ್ನು ನೀವೇ ತಿಳಿದುಕೊಳ್ಳಿ ಎಂದರು.

ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶೇಖರ್‌ ಮಡಿವಾಳ, ಮಾಜಿ ಅಧ್ಯಕ್ಷ ರಾದ ನೀರೆ ಕೃಷ್ಣ ಶೆಟ್ಟಿ, ಸುಧಾಕರ ಕೋಟ್ಯಾನ್‌, ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು, ನಗರ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸುಭಿತ್‌ ಕುಮಾರ್‌, ವಕ್ತಾರ ಬಿಪಿನ್‌ಚಂದ್ರಪಾಲ್‌ ನಕ್ರೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ