ಕಪಿಚೇಷ್ಠೆಯಿಂದ ಕಂಗೆಟ್ಟಿದ್ದ ಕೃಷಿಕರ ಚಿಂತೆ ಹೆಚ್ಚಿಸಿದ ಮಂಗಗಳ ಸಾವು
ನಾಡಿನಲ್ಲೇ ಬೀಡುಬಿಟ್ಟ ಮಂಗಗಳು ಕೃಷಿ ನಷ್ಟ ಉಂಟು ಮಾಡಿ ಆತಂಕ ಹುಟ್ಟಿಸಿದ್ದರೆ ಇದೀಗ ಮಂಗಗಳ ಸಾವು ಮತ್ತು ಕಾಯಿಲೆ ಕುರಿತ ಸುದ್ದಿ ಹೊಸಗಂಡಿ ಹಾಗೂ ಸಿದ್ದಾಪುರ ಪರಿಸರದ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ಪರಿಸರದಲ್ಲಿ ಮಂಗನ ಕಾಯಿಲೆ ಇರುವ ಬಗ್ಗೆ ಇದುವರೆಗೆ ದೃಢಪಟ್ಟಿಲ್ಲ. ರೋಗದ ಬಗೆಗಿನ ಕಾಳಜಿಯೊಂದಿಗೆ ಧೈರ್ಯದಿಂದಿರಬೇಕು ಎಂದು ವಲಯ ಅರಣ್ಯಾಧಿಕಾರಿ ವಿನಂತಿಸಿದ್ದಾರೆ.
Vijaya Karnataka 13 Jan 2019, 9:26 pm
ನಾಗೇಶ್ ಸಿದ್ದಾಪುರ
ನಾಡಿನಲ್ಲೇ ಬೀಡುಬಿಟ್ಟ ಮಂಗಗಳು ಕೃಷಿ ನಷ್ಟ ಉಂಟು ಮಾಡಿ ಆತಂಕ ಹುಟ್ಟಿಸಿದ್ದರೆ ಇದೀಗ ಮಂಗಗಳ ಸಾವು ಮತ್ತು ಕಾಯಿಲೆ ಕುರಿತ ಸುದ್ದಿ ಹೊಸಗಂಡಿ ಹಾಗೂ ಸಿದ್ದಾಪುರ ಪರಿಸರದ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ಪರಿಸರದಲ್ಲಿ ಮಂಗನ ಕಾಯಿಲೆ ಇರುವ ಬಗ್ಗೆ ಇದುವರೆಗೆ ದೃಢಪಟ್ಟಿಲ್ಲ. ರೋಗದ ಬಗೆಗಿನ ಕಾಳಜಿಯೊಂದಿಗೆ ಧೈರ್ಯದಿಂದಿರಬೇಕು ಎಂದು ವಲಯ ಅರಣ್ಯಾಧಿಕಾರಿ ವಿನಂತಿಸಿದ್ದಾರೆ.
ಅರಣ್ಯ ಪ್ರದೇಶಕ್ಕೆ ಸನಿಹದಲ್ಲಿರುವ ಈ ಊರಿನ ತೆಂಗಿನ ತೋಟದಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ನೆಲೆಸಿರುವ ಮಂಗಗಳು ಕೃಷಿಕರು ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಲೇ ಇದ್ದವು. ಓಡಿಸಲು ಮಾಡಿದ್ದ ಎಲ್ಲ ಉಪಾಯಗಳೂ ನಿಷ್ೊ್ರಯೋಜಕವಾಗಿ ಕೃಷಿಕರು ಹತಾಷೆಯಿಂದ ಕೈಚೆಲ್ಲಿದ್ದರು.
ಮನೆಯೊಳಕ್ಕೂ ದಾಳಿ: ಮನೆಯಲ್ಲಿ ಯಾರೂ ಇಲ್ಲದಿರುವುದು ಗಮನಕ್ಕೆ ಬಂದರೆ ಉಪಾಯದಿಂದ ಹೆಂಚು ತೆಗೆದು ಒಳ ಪ್ರವೇಶಿಸಿ ಆಹಾರ, ಪಾತ್ರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ತನಗೆ ಬೇಕಾದ ವಸ್ತುಗಳಿದ್ದರೆ ಅವನ್ನೂ ಹೊತ್ತೊಯ್ಯುತ್ತಿದ್ದವು. ಈ ಉಪಟಳದ ತಡೆಗೆ ಮನೆಗೆ ಹಂಚಿನ ಬದಲು ತಗಡಿನ ಶೀಟನ್ನೇ ಹೊದೆಸಿದ್ದರು. ಹಗಲು ರಾತ್ರಿ ಎನ್ನದೆ ಕೃಷಿ ತೋಟಕ್ಕೆ ನುಗ್ಗಿ ಚೀರಾಡುವ ಮೂಲಕ ಜನರ ನೆಮ್ಮದಿ ಕೆಡಿಸುತ್ತಿವೆ. ಈ ದರ್ಬಾರಿನಿಂದಲೇ ಕಂಗೆಟ್ಟಿದ್ದ ಕೃಷಿಕರು ಇದೀಗ ಮಂಗಗಳ ಸಾವು ಮತ್ತು ಮಂಗನ ಕಾಯಿಲೆ ಸುದ್ದಿಯಿಂದ ಕಂಗಾಲಾಗಿದ್ದಾರೆ.
ಮೃತಪಟ್ಟ ಮಂಗಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮೇಲಾದಿಕಾರಿಯವರ ಗಮನಕ್ಕೆ ತರುವ ಮೂಲಕ ಗ್ರಾಮೀಣ ಭಾಗದ ನಾಡಿನಲ್ಲಿರುವ ಮಂಗಗಳನ್ನು ಒಡಿಸುವ ಅಥವಾ ಪರಾರಯಯ ವ್ಯವಸ್ಥೆ ಮಾಡಲಾಗುವುದು ಎಂದು ಶಂಕರನಾರಾಯಣ ಎ.ಎ.ಗೋಪಾಲ್ ವಲಯ ಅರಣ್ಯಾಧಿಕಾರಿ ಭರವಸೆ ನೀಡಿದ್ದಾರೆ.
ನಾಡಿನಲ್ಲೇ ಬೀಡುಬಿಟ್ಟ ಮಂಗಗಳು ಕೃಷಿ ನಷ್ಟ ಉಂಟು ಮಾಡಿ ಆತಂಕ ಹುಟ್ಟಿಸಿದ್ದರೆ ಇದೀಗ ಮಂಗಗಳ ಸಾವು ಮತ್ತು ಕಾಯಿಲೆ ಕುರಿತ ಸುದ್ದಿ ಹೊಸಗಂಡಿ ಹಾಗೂ ಸಿದ್ದಾಪುರ ಪರಿಸರದ ಜನರಲ್ಲಿ ಭೀತಿ ಹುಟ್ಟಿಸಿದೆ. ಈ ಪರಿಸರದಲ್ಲಿ ಮಂಗನ ಕಾಯಿಲೆ ಇರುವ ಬಗ್ಗೆ ಇದುವರೆಗೆ ದೃಢಪಟ್ಟಿಲ್ಲ. ರೋಗದ ಬಗೆಗಿನ ಕಾಳಜಿಯೊಂದಿಗೆ ಧೈರ್ಯದಿಂದಿರಬೇಕು ಎಂದು ವಲಯ ಅರಣ್ಯಾಧಿಕಾರಿ ವಿನಂತಿಸಿದ್ದಾರೆ.
ಅರಣ್ಯ ಪ್ರದೇಶಕ್ಕೆ ಸನಿಹದಲ್ಲಿರುವ ಈ ಊರಿನ ತೆಂಗಿನ ತೋಟದಲ್ಲಿ ಕಳೆದ ನಾಲ್ಕಾರು ವರ್ಷಗಳಿಂದ ನೆಲೆಸಿರುವ ಮಂಗಗಳು ಕೃಷಿಕರು ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಲೇ ಇದ್ದವು. ಓಡಿಸಲು ಮಾಡಿದ್ದ ಎಲ್ಲ ಉಪಾಯಗಳೂ ನಿಷ್ೊ್ರಯೋಜಕವಾಗಿ ಕೃಷಿಕರು ಹತಾಷೆಯಿಂದ ಕೈಚೆಲ್ಲಿದ್ದರು.
ಮನೆಯೊಳಕ್ಕೂ ದಾಳಿ: ಮನೆಯಲ್ಲಿ ಯಾರೂ ಇಲ್ಲದಿರುವುದು ಗಮನಕ್ಕೆ ಬಂದರೆ ಉಪಾಯದಿಂದ ಹೆಂಚು ತೆಗೆದು ಒಳ ಪ್ರವೇಶಿಸಿ ಆಹಾರ, ಪಾತ್ರೆಗಳನ್ನೆಲ್ಲ ಚೆಲ್ಲಾಪಿಲ್ಲಿ ಮಾಡುತ್ತಿದ್ದವು. ತನಗೆ ಬೇಕಾದ ವಸ್ತುಗಳಿದ್ದರೆ ಅವನ್ನೂ ಹೊತ್ತೊಯ್ಯುತ್ತಿದ್ದವು. ಈ ಉಪಟಳದ ತಡೆಗೆ ಮನೆಗೆ ಹಂಚಿನ ಬದಲು ತಗಡಿನ ಶೀಟನ್ನೇ ಹೊದೆಸಿದ್ದರು. ಹಗಲು ರಾತ್ರಿ ಎನ್ನದೆ ಕೃಷಿ ತೋಟಕ್ಕೆ ನುಗ್ಗಿ ಚೀರಾಡುವ ಮೂಲಕ ಜನರ ನೆಮ್ಮದಿ ಕೆಡಿಸುತ್ತಿವೆ. ಈ ದರ್ಬಾರಿನಿಂದಲೇ ಕಂಗೆಟ್ಟಿದ್ದ ಕೃಷಿಕರು ಇದೀಗ ಮಂಗಗಳ ಸಾವು ಮತ್ತು ಮಂಗನ ಕಾಯಿಲೆ ಸುದ್ದಿಯಿಂದ ಕಂಗಾಲಾಗಿದ್ದಾರೆ.
ಮೃತಪಟ್ಟ ಮಂಗಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವರದಿ ಬಂದ ಬಳಿಕ ಮೇಲಾದಿಕಾರಿಯವರ ಗಮನಕ್ಕೆ ತರುವ ಮೂಲಕ ಗ್ರಾಮೀಣ ಭಾಗದ ನಾಡಿನಲ್ಲಿರುವ ಮಂಗಗಳನ್ನು ಒಡಿಸುವ ಅಥವಾ ಪರಾರಯಯ ವ್ಯವಸ್ಥೆ ಮಾಡಲಾಗುವುದು ಎಂದು ಶಂಕರನಾರಾಯಣ ಎ.ಎ.ಗೋಪಾಲ್ ವಲಯ ಅರಣ್ಯಾಧಿಕಾರಿ ಭರವಸೆ ನೀಡಿದ್ದಾರೆ.