ಎಸ್. ಜಿ. ಕುರ್ಯ
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಬರೋಬ್ಬರಿ 34,173 ಪ್ರಕರಣಗಳ ಹೊರೆ ಇಳಿಸಲು ರಾಜಿ ಸಂಧಾನ, ಲೋಕ ಅದಾಲತ್ ಮದ್ದು ಆಗಾಗ ಅರೆಯುವುದು ಅನಿವಾರ್ಯವಾಗಿದೆ. 2021ರ ಆಗಸ್ಟ್ 31ಕ್ಕೆ ಚೆಕ್ ಬೌನ್ಸ್ನ 7,528 ಪ್ರಕರಣ ಸಹಿತ ಸಿವಿಲ್ ಪ್ರಕರಣಗಳು 14,512 ಹಾಗೂ ಕ್ರಿಮಿನಲ್ ಪ್ರಕರಣಗಳು 19,661 ಬಾಕಿ ಇದ್ದು, ಕಷ್ಟದ ದಣಿವು ಆರುವ ಮುನ್ನವೇ ಮತ್ತಷ್ಟು ಪ್ರಕರಣಗಳ ಸೇರ್ಪಡೆಯಾಗುತ್ತಿವೆ.
ಆಗಸ್ಟ್ 14ಕ್ಕೆ ಉಡುಪಿ, ಕುಂದಾಪುರ, ಕಾರ್ಕಳದ ನ್ಯಾಯಾಲಯದಲ್ಲಿ 3,065 ಪ್ರಕರಣ ಹಾಗೂ 179 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥವಾಗಿದೆ. 5 ರಿಂದ 7 ವರ್ಷ: 42, 8 ರಿಂದ 10 ವರ್ಷ: 2, 10 ರಿಂದ 15 ವರ್ಷ: 2, ಹಿರಿಯ ನಾಗರಿಕರ ಪ್ರಕರಣ: 77 ಇತ್ಯರ್ಥವಾಗಿದ್ದು, ಚೆಕ್ ಬೌನ್ಸ್ ಪ್ರಕರಣಗಳ ರಾಜಿ ಇತ್ಯರ್ಥ ಕಕ್ಷಿದಾರರಿಗೆ ಅನುಕೂಲಕರವಾಗಿದೆ.
ದಾರಿ ಜಗಳ, ಕಾಲು ಕೆರೆದು ಜಗಳ, ಸ್ನೇಹಿತರ ಜಗಳ, ಕೋಳಿ ಅಂಕ, ಜುಗಾರಿ, ವೇಶ್ಯಾವಾಟಿಕೆ, ಹೆಲ್ಮೆಟ್, ಡಿಎಲ್ ಹೀಗೆ ಕೇಸ್ಗಳು ಬಾಕಿ ಪ್ರಕರಣಗಳ ಸಾಲಲ್ಲಿ ಶೇ.50ಕ್ಕೂ ಅಧಿಕವಿದೆ. ಸಂಕುಚಿತ ಮನೋಭಾವ, ವಿನಾಕಾರಣ ದ್ವೇಷ ಸಾಧನೆಯ ಪ್ರವೃತ್ತಿ ಸಂಬಂಧ, ಸಮಯ, ಹಣ ಹಾಳು ಮಾಡುತ್ತಿದೆ.
ಬ್ಯಾಂಕ್ ಸಾಲದ ಅಸಲು, ಬಡ್ಡಿ ಕಟ್ಟದವರನ್ನು ಕೋರ್ಟ್ಗೆಳೆದ ಬ್ಯಾಂಕ್ಗಳು ಬಡ್ಡಿ ಮನ್ನಾ, ಅಸಲಿನಲ್ಲೂ ರಿಯಾಯಿತಿ ಅವಕಾಶವನ್ನು ನೀಡಿದರೂ ವ್ಯವಹಾರಸ್ಥರಿಗೆ ಸಿಬಿಲ್ ರೇಟಿಂಗ್ ಸಮಸ್ಯೆಯಾಗುತ್ತಿದೆ. ಹೀಗಾಗಿ ಬ್ಯಾಂಕ್ನ ಋುಣಮುಕ್ತರಾಗಲು ಹಾಗೂ ಹೀಗೂ ಒದ್ದಾಡಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ.
ಪ್ರತಿಯೊಬ್ಬ ನ್ಯಾಯಾಧೀಶರಿಗೂ ಇಂತಿಷ್ಟು ಪ್ರಕರಣ ಇತ್ಯರ್ಥದ ಗುರಿ ಜತೆಗೆ ನ್ಯಾಯಾಂಗ ವ್ಯವಸ್ಥೆಗೆ ತಲೆನೋವಾದ ಬಾಕಿ ಪ್ರಕರಣಗಳ ಇತ್ಯರ್ಥದ ಹಾದಿಯಲ್ಲಿ 12 ಸೂತ್ರಗಳಿವೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ವಾದಿ, ಪ್ರತಿವಾದಿಗಳ ಸಹಿತ ನ್ಯಾಯವಾದಿಗಳಿಗೆ ಆನ್ಲೈನ್, ವಿಡಿಯೋ ಕಾನ್ಛರೆನ್ಸ್, ವಾಟ್ಸ್ಯಾಪ್ನಲ್ಲೂ ಹಾಜರಾಗುವ ಅವಕಾಶವಿದೆ.
ಬರಬೇಕಿದೆ 4 ತಾಲೂಕು ಕೋರ್ಟ್: ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಗೆ ಹೆಚ್ಚುವರಿಯಾಗಿ ನಾಲ್ಕು ತಾಲೂಕು ರಚನೆಯಾಗಿದ್ದು ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ ತಾಲೂಕು ನ್ಯಾಯಾಲಯ ಸ್ಥಾಪನೆ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯ ವಿವಿಧ ಪ್ರಕ್ರಿಯೆಗಳೊಂದಿಗೆ ಪ್ರಗತಿಯಲ್ಲಿದೆ.
ಮಧ್ಯಸ್ಥಿಕೆಯಿಂದ ಉಳಿಯಿತು 3 ದಾಂಪತ್ಯ!: ಆಗಸ್ಟ್ 14ರಂದು ನಡೆದ ಲೋಕ ಅದಾಲತ್ನಲ್ಲಿ 3 ವಿಚ್ಛೇದನ ಪ್ರಕರಣವನ್ನು ನ್ಯಾಯಾಧೀಶರ ವಿಶೇಷ ಮುತುವರ್ಜಿಯ ಫಲವಾಗಿ ಮಧ್ಯಸ್ಥಿಕೆ ನಡೆಸಿ ಹಿಂತೆಗೆದುಕೊಳ್ಳಲಾಗಿದೆ. ವಿಚ್ಛೇದನದಿಂದ ಒಡೆದು ಹೋಗಬೇಕಿದ್ದ ದಾಂಪತ್ಯ ಮುಂದುವರಿಯಲು ನ್ಯಾಯಾಲಯ ಅನುಕೂಲ ಮಾಡಿಕೊಟ್ಟಿದೆ.
30ರಂದು ಲೋಕ ಅದಾಲತ್: ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಹಾಗೂ ಉಡುಪಿ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 30ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ತಾಲೂಕು, ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಚಿತ ಕಾನೂನಿನ ನೆರವು, ಅರಿವು ಪಡೆದುಕೊಳ್ಳಬಹುದು.
ಉಡುಪಿ: ಉಡುಪಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಬರೋಬ್ಬರಿ 34,173 ಪ್ರಕರಣಗಳ ಹೊರೆ ಇಳಿಸಲು ರಾಜಿ ಸಂಧಾನ, ಲೋಕ ಅದಾಲತ್ ಮದ್ದು ಆಗಾಗ ಅರೆಯುವುದು ಅನಿವಾರ್ಯವಾಗಿದೆ.
ಆಗಸ್ಟ್ 14ಕ್ಕೆ ಉಡುಪಿ, ಕುಂದಾಪುರ, ಕಾರ್ಕಳದ ನ್ಯಾಯಾಲಯದಲ್ಲಿ 3,065 ಪ್ರಕರಣ ಹಾಗೂ 179 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥವಾಗಿದೆ. 5 ರಿಂದ 7 ವರ್ಷ: 42, 8 ರಿಂದ 10 ವರ್ಷ: 2, 10 ರಿಂದ 15 ವರ್ಷ: 2, ಹಿರಿಯ ನಾಗರಿಕರ ಪ್ರಕರಣ: 77 ಇತ್ಯರ್ಥವಾಗಿದ್ದು, ಚೆಕ್ ಬೌನ್ಸ್ ಪ್ರಕರಣಗಳ ರಾಜಿ ಇತ್ಯರ್ಥ ಕಕ್ಷಿದಾರರಿಗೆ ಅನುಕೂಲಕರವಾಗಿದೆ.
ದಾರಿ ಜಗಳ, ಕಾಲು ಕೆರೆದು ಜಗಳ, ಸ್ನೇಹಿತರ ಜಗಳ, ಕೋಳಿ ಅಂಕ, ಜುಗಾರಿ, ವೇಶ್ಯಾವಾಟಿಕೆ, ಹೆಲ್ಮೆಟ್, ಡಿಎಲ್ ಹೀಗೆ ಕೇಸ್ಗಳು ಬಾಕಿ ಪ್ರಕರಣಗಳ ಸಾಲಲ್ಲಿ ಶೇ.50ಕ್ಕೂ ಅಧಿಕವಿದೆ. ಸಂಕುಚಿತ ಮನೋಭಾವ, ವಿನಾಕಾರಣ ದ್ವೇಷ ಸಾಧನೆಯ ಪ್ರವೃತ್ತಿ ಸಂಬಂಧ, ಸಮಯ, ಹಣ ಹಾಳು ಮಾಡುತ್ತಿದೆ.
ಬ್ಯಾಂಕ್ ಸಾಲದ ಅಸಲು, ಬಡ್ಡಿ ಕಟ್ಟದವರನ್ನು ಕೋರ್ಟ್ಗೆಳೆದ ಬ್ಯಾಂಕ್ಗಳು ಬಡ್ಡಿ ಮನ್ನಾ, ಅಸಲಿನಲ್ಲೂ ರಿಯಾಯಿತಿ ಅವಕಾಶವನ್ನು ನೀಡಿದರೂ ವ್ಯವಹಾರಸ್ಥರಿಗೆ ಸಿಬಿಲ್ ರೇಟಿಂಗ್ ಸಮಸ್ಯೆಯಾಗುತ್ತಿದೆ. ಹೀಗಾಗಿ ಬ್ಯಾಂಕ್ನ ಋುಣಮುಕ್ತರಾಗಲು ಹಾಗೂ ಹೀಗೂ ಒದ್ದಾಡಿ ಪ್ರಮಾಣ ಪತ್ರ ಪಡೆದುಕೊಳ್ಳುತ್ತಿದ್ದಾರೆ.
ಪ್ರತಿಯೊಬ್ಬ ನ್ಯಾಯಾಧೀಶರಿಗೂ ಇಂತಿಷ್ಟು ಪ್ರಕರಣ ಇತ್ಯರ್ಥದ ಗುರಿ ಜತೆಗೆ ನ್ಯಾಯಾಂಗ ವ್ಯವಸ್ಥೆಗೆ ತಲೆನೋವಾದ ಬಾಕಿ ಪ್ರಕರಣಗಳ ಇತ್ಯರ್ಥದ ಹಾದಿಯಲ್ಲಿ 12 ಸೂತ್ರಗಳಿವೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ವಾದಿ, ಪ್ರತಿವಾದಿಗಳ ಸಹಿತ ನ್ಯಾಯವಾದಿಗಳಿಗೆ ಆನ್ಲೈನ್, ವಿಡಿಯೋ ಕಾನ್ಛರೆನ್ಸ್, ವಾಟ್ಸ್ಯಾಪ್ನಲ್ಲೂ ಹಾಜರಾಗುವ ಅವಕಾಶವಿದೆ.
ಬರಬೇಕಿದೆ 4 ತಾಲೂಕು ಕೋರ್ಟ್: ಉಡುಪಿ ಜಿಲ್ಲೆಯ ಮೂರು ತಾಲೂಕುಗಳಿಗೆ ಹೆಚ್ಚುವರಿಯಾಗಿ ನಾಲ್ಕು ತಾಲೂಕು ರಚನೆಯಾಗಿದ್ದು ಬೈಂದೂರು, ಕಾಪು, ಹೆಬ್ರಿ, ಬ್ರಹ್ಮಾವರ ತಾಲೂಕು ನ್ಯಾಯಾಲಯ ಸ್ಥಾಪನೆ ಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯ ವಿವಿಧ ಪ್ರಕ್ರಿಯೆಗಳೊಂದಿಗೆ ಪ್ರಗತಿಯಲ್ಲಿದೆ.
ಮಧ್ಯಸ್ಥಿಕೆಯಿಂದ ಉಳಿಯಿತು 3 ದಾಂಪತ್ಯ!: ಆಗಸ್ಟ್ 14ರಂದು ನಡೆದ ಲೋಕ ಅದಾಲತ್ನಲ್ಲಿ 3 ವಿಚ್ಛೇದನ ಪ್ರಕರಣವನ್ನು ನ್ಯಾಯಾಧೀಶರ ವಿಶೇಷ ಮುತುವರ್ಜಿಯ ಫಲವಾಗಿ ಮಧ್ಯಸ್ಥಿಕೆ ನಡೆಸಿ ಹಿಂತೆಗೆದುಕೊಳ್ಳಲಾಗಿದೆ. ವಿಚ್ಛೇದನದಿಂದ ಒಡೆದು ಹೋಗಬೇಕಿದ್ದ ದಾಂಪತ್ಯ ಮುಂದುವರಿಯಲು ನ್ಯಾಯಾಲಯ ಅನುಕೂಲ ಮಾಡಿಕೊಟ್ಟಿದೆ.
ಲೋಕ ಅದಾಲತ್ ಮೂಲಕ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಪಡೆದುಕೊಳ್ಳಬಹುದು. ಸಂಬಂಧ, ಸಮಯ, ಹಣ ಉಳಿತಾಯ ಸಾಧ್ಯವಿದ್ದು ರಾಜಿ ಸಂಧಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 3 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯವುಳ್ಳ ಅರ್ಹರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನಿನ ನೆರವು ನೀಡಲಾಗುತ್ತಿದೆ.
30ರಂದು ಲೋಕ ಅದಾಲತ್: ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ ಹಾಗೂ ಉಡುಪಿ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 30ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ. ತಾಲೂಕು, ಜಿಲ್ಲಾ ನ್ಯಾಯಾಲಯಗಳಲ್ಲಿ ಅರ್ಜಿ ಸಲ್ಲಿಸಿ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಉಚಿತ ಕಾನೂನಿನ ನೆರವು, ಅರಿವು ಪಡೆದುಕೊಳ್ಳಬಹುದು.