ಆ್ಯಪ್ನಗರ

ಉಡುಪಿ: ಶ್ರೀಕೃಷ್ಣಮಠದಲ್ಲಿ ಯತಿಗಳಿಗೆ ಮಾತ್ರ ತಪ್ತ ಮುದ್ರಾ ಧಾರಣೆ

ತಪ್ತ ಮುದ್ರಾಧಾರಣೆಗೆ ಸಂಬಂಧಿಸಿದ ಸಕಲ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು ಮುಂದಿನ ಯಾವುದಾದರೂ ಶುಭ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾ ಧಾರಣೆಗೆ ಅವಕಾಶ ಕಲ್ಪಿಸಲಾಗುವುದು.

Vijaya Karnataka Web 24 Jun 2020, 7:16 pm
ಉಡುಪಿ: ಚಾತುರ್ಮಾಸ್ಯ ವ್ರತಾಚರಣೆ ಹಿನ್ನೆಲೆಯಲ್ಲಿ ಜು. 1ರಂದು (ಏಕಾದಶಿ) ಶ್ರೀಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ ಯತಿಗಳಿಗಷ್ಟೇ ಸೀಮಿತವಾಗಿ ನಡೆಯಲಿದೆ ಎಂದು ಪರ್ಯಾಯ ಅದಮಾರು ಶ್ರೀಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web ಮುದ್ರಾ ಧಾರಣೆ
ಮುದ್ರಾ ಧಾರಣೆ


ತಪ್ತ ಮುದ್ರಾಧಾರಣೆಗೆ ಸಂಬಂಧಿಸಿದ ಸಕಲ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನಡೆಯಲಿದ್ದು ಮುಂದಿನ ಯಾವುದಾದರೂ ಶುಭ ದಿನಗಳಲ್ಲಿ ಸಾರ್ವಜನಿಕರಿಗೆ ಮುದ್ರಾ ಧಾರಣೆಗೆ ಅವಕಾಶ ಕಲ್ಪಿಸಲಾಗುವುದು.

ವಾರ್ಷಿಕ ಮಹಾಭಿಷೇಕ

ಜೂ. 30ಕ್ಕೆ ಶ್ರೀಕೃಷ್ಣನಿಗೆ ವಾರ್ಷಿಕ ಮಹಾಭಿಷೇಕ (ಸೀಯಾಳ ಅಭಿಷೇಕ) ನೆರವೇರಲಿದೆ. ಕೋವಿಡ್19 ನಿಂದಾಗಿ ಶ್ರೀಕೃಷ್ಣಮಠಕ್ಕೆ ಭಕ್ತರಿಗೆ ಪ್ರವೇಶವಿಲ್ಲ. ಶ್ರೀಕೃಷ್ಣ ದೇವರಿಗೆ ಅಭಿಷೇಕ ಮಾಡಲು ಸೀಯಾಳಗಳನ್ನು ಭಕ್ತರು ರಾಜಾಂಗಣದ ಉತ್ತರ ದ್ವಾರದ ಬಳಿ ಜೂ.28ರ ಸಂಜೆಯೊಳಗೆ ನೀಡಬಹುದು ಎಂದು ಶ್ರೀಕೃಷ್ಣಮಠ, ಪರ್ಯಾಯ ಅದಮಾರು ಮಠದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ