ಮುಂಡ್ಕೂರು: ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಾನಾ ನೂತನ ಕಾಮಗಾರಿಗಳ ಜತೆ ನವೀಕರಣಗೊಂಡ ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ಧ ಭಾರ್ಗವ ಪ್ರತಿಷ್ಠಿತ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅಷ್ಟಬಂಧ, ಸಹಸ್ರ ಕಲಶ ಸಹಿತ ಬ್ರಹ್ಮಕಲಶಾಭಿಶೇಕ ಮಹೋತ್ಸವ ಫೆಬ್ರವರಿ 11ರ ಬೆಳಿಗ್ಗೆ 8.40ಕ್ಕೆ ವಿಜೃಂಭಣೆಯಿಂದ ನಡೆಯಲಿದೆ.
ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲಗುತ್ತು ವಾದಿರಾಜ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಫೆ.6ರಂದು ಉಗ್ರಾಣ ಮುಹೂರ್ತದೊಂದಿಗೆ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, ಕ್ಷೇತ್ರದಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.11ರ ಬೆಳಿಗ್ಗೆ 5ಕ್ಕೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನಿಗೆ 25 ದ್ರವ್ಯ ಮಿಳಿತ ಪರಿಕಲಶಾಭಿಶೇಕಪೂರ್ವಕ ಬ್ರಹ್ಮಕಲಶಾಭಿಶೇಕ ಪ್ರಾರಂಭಗೊಳ್ಳÜಲಿದ್ದು 8.40ಕ್ಕೆ ಪ್ರಧಾನ ಕಲಶಾಭಿಶೇಕ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಮದಾಸ ಆಚಾರ್ಯ ತಿಳಿಸಿದರು.
ಯತಿವರ್ಯರು ಹಾಗ ಗಣ್ಯರ ಉಪಸ್ಥಿಯಲ್ಲಿ ಪ್ರತಿ ದಿನ ಸಂಜೆ 6ರಿಂದ ಶ್ರೀ ದುರ್ಗಾ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಈ ಸಂದರ್ಭ ಫೆ. 9ರಂದು ವಾದಿರಾಜ ಕಲಾಮಂದಿರದ ಉದ್ಘಾಟನೆ, ಫೆ.10ರಂದು ದಿ.ಸುನಂದ ಯಂ.ಕರ್ಕೇರಾ ಸ್ಮರಣಾರ್ಥ ಮಹಾಬಲ ಕರ್ಕೇರಾ ಹಾಗೂ ಮಕ್ಕಳ ಕೊಡುಗೆಯ ಕಟ್ಟಡ , ತಡ್ಯಾರು ಸದಾಶಿವ ಶೆಟ್ಟಿ ಮತ್ತು ಸಹೋದರರ ಕೊಡುಗೆಯ ಸಭಾಗೃಹ, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ನ ಕೊಡುಗೆಯ ಸಭಾಗೃಹದ ಉದ್ಘಾಟನೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿಯ ಸದಸ್ಯ ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ ತಿಳಿಸಿದರು.
ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಿತ್ಯ ಅನ್ನದಾನ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವ ಸಂದರ್ಭ ಫೆ.6ರಿಂದ ಫೆ.18ರಂದು ನಡೆಯುವ ವರ್ಷಾವಧಿ ಜಾತ್ರೆಯ ಪರ್ಯಂತ ವಿಶೇಷ ಅನ್ನದಾನ ನಡೆಯಲಿದೆ ಎಂದೂ ವಾದಿರಾಜ ಶೆಟ್ಟಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಫೆ.6ರಂದು ಸಂಜೆ 6ರಿಂದ ಕಿನ್ನಿಗೋಳಿಯ ಸ್ವರಾಂಜಲಿ ಸಂಗೀತ ಶಾಲೆಯ ಶೋಭಿತಾ ಭಟ್ ಹಾಗೂ ಅಶ್ವಿಜಾ ಉಡುಪ ಅವರಿಂದ ಭಕ್ತಿ ಸಂಗೀತ, ರಾತ್ರಿ 9.30ರಿಂದ ಉಡುಪಿಯ ಅಭಿನಯ ಕಲಾವಿದರಿಂದ ಒಂಚಿ ತೂಪಿನಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 7ರಂದು ಸಂಜೆ 6ರಿಂದ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಕಲಾವಿದರಿಂದ ನೃತ್ಯಾರ್ಪಣ ನೃತ್ಯ ಕಾರ್ಯಕ್ರಮ, ರಾತ್ರಿ 9.30ರಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಬæೖರಾಸ್ ಬಾಸ್ಕರೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 8ರಂದು ಸಂಜೆ 6ಕ್ಕೆ ಮಂಗಳೂರಿನ ರಂಗ ಸಂಗಾತಿ ತಂಡದಿಂದ ನೆಮ್ಮದಿ ಅಪಾರ್ಟ್ಮೆಂಟ್ ಕನ್ನಡ ನಾಟಕ, ರಾತ್ರಿ 9.30ರಿಂದ ಮಂಗಳೂರಿನ ಲಕುಮಿ ತಂಡದಿಂದ ಒವುಲ ಒಂತೆ ದಿನನೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.9ರ ಸಂಜೆ 6ಕ್ಕೆ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಂಡ್ಕೂರು ಭಾರ್ಗವ ಜೇಸಿಐನ ಸಹಭಾಗಿತ್ವದಲ್ಲಿ ಅನಿತಾ ಬೋಳ ಹಾಗೂ ಬಳಗದಿಂದ ಭಕ್ತಿ ಸಂಗೀತ, ಹಿರಿಯಡ್ಕ ಸೌಮ್ಯಾ ಹೆಗ್ಡೆಯವರಿಂದ ಭರತನಾಟ್ಯ ನಡೆಯಲಿದ್ದು , ರಾತ್ರಿ 9.30ರಿಂದ ಮಂಗಳೂರಿನ ಕಲಾ ಸಂಗಮದ ಕಲಾವಿದರಿಂದ ಮಣಿಕಂಠ ಮಹಿಮೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.10ರ ಸಂಜೆ 6ಕ್ಕೆ ಬಜಪೆಯ ಥಂಡರ್ ಗೈಸ್ ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ 9.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ತಂಡದಿಂದ ಶ್ರೀಮತಿ ವೈಫ್ ಆಫ್ ಚಂದು ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.11ರ ಮಧ್ಯಾಹ್ನ 1ರಿಂದ ಬೆಂಗಳೂರಿನ ಜ್ಯೂನಿಯರ್ ಅಂಬರೀಶ್, ದೂರದರ್ಶನ ಖ್ಯಾತಿಯ ಅಂಧ ಕಲಾವಿದ ಬಸವರಾಜ್ ಹುಬ್ಬಳ್ಳಿ ಹಾಗೂ ಪ್ರಕಾಶ್ ಕಿನ್ನಿಗೋಳಿ ತಂಡದಿಂದ ಭಕ್ತಿ, ಭಾವ ಸಂಗೀತ ನಡೆಯಲಿದೆ. ಸಂಜೆ 4ರಿಂದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಯಕ್ಷ -ಗಾನ-ನಾಟ್ಯ ವೈಭವ ನಡೆಯಲಿದೆ. ರಾತ್ರಿ 9.30ರಿಂದ ಮಂಗಳೂರಿನ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ಇಮಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಕ್ಷೇತ್ರದಲ್ಲಿ ಫೆ.13ರಂದು ಧ್ವಜಾರೋಹಣ ನಡೆಯಲಿದ್ದು ಫೆ.18ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಮುಂಡ್ಕೂರು ನಡಿಗುತ್ತು ವಿನಯಕುಮಾರ್ ಶೆಟ್ಟಿಯವರ ನಿರ್ವಹಣೆಯ ತಂಡ ಬ್ರಹ್ಮಕಲಶೋತ್ಸವದಂದು ಆಗಮಿಸಲಿರುವ ಭಕ್ತಾದಿಗಳ ಆತಿಥ್ಯದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ ಎಂದು ವಾದಿರಾಜ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರಾಮದಾಸ ಆಚಾರ್ಯ, ಸುರೇಂದ್ರ ಶೆಟ್ಟಿ, ಕೃಷ್ಣ ಪೂಜಾರಿ, ಸಂಜೀವ ಕರ್ಕೇರ, ಪ್ರಮುಖರಾದ ಅಶೋಕ ಶೆಟ್ಟಿ, ಸ್ವರಾಜ್ ಶೆಟ್ಟಿ, ಶೇಖರ ಶೆಟ್ಟಿ, ಅರುಣ್ ರಾವ್, ಮಾಧ್ಯಮ ಸಮಿತಿಯ ಸಂಚಾಲಕ ಶರತ್ ಶೆಟ್ಟಿ ಮತ್ತಿತರರಿದ್ದರು.
ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಮುಂಡ್ಕೂರು ಸಾಂತ್ರಾಲಗುತ್ತು ವಾದಿರಾಜ ಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಫೆ.6ರಂದು ಉಗ್ರಾಣ ಮುಹೂರ್ತದೊಂದಿಗೆ ಬ್ರಹ್ಮಕಲಶೋತ್ಸವದ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದ್ದು, ಕ್ಷೇತ್ರದಲ್ಲಿ ನಾನಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಫೆ.11ರ ಬೆಳಿಗ್ಗೆ 5ಕ್ಕೆ ಶ್ರೀ ದುರ್ಗಾಪರಮೇಶ್ವರೀ ಅಮ್ಮನಿಗೆ 25 ದ್ರವ್ಯ ಮಿಳಿತ ಪರಿಕಲಶಾಭಿಶೇಕಪೂರ್ವಕ ಬ್ರಹ್ಮಕಲಶಾಭಿಶೇಕ ಪ್ರಾರಂಭಗೊಳ್ಳÜಲಿದ್ದು 8.40ಕ್ಕೆ ಪ್ರಧಾನ ಕಲಶಾಭಿಶೇಕ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಅರ್ಚಕ ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಮದಾಸ ಆಚಾರ್ಯ ತಿಳಿಸಿದರು.
ಯತಿವರ್ಯರು ಹಾಗ ಗಣ್ಯರ ಉಪಸ್ಥಿಯಲ್ಲಿ ಪ್ರತಿ ದಿನ ಸಂಜೆ 6ರಿಂದ ಶ್ರೀ ದುರ್ಗಾ ವೇದಿಕೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು ಈ ಸಂದರ್ಭ ಫೆ. 9ರಂದು ವಾದಿರಾಜ ಕಲಾಮಂದಿರದ ಉದ್ಘಾಟನೆ, ಫೆ.10ರಂದು ದಿ.ಸುನಂದ ಯಂ.ಕರ್ಕೇರಾ ಸ್ಮರಣಾರ್ಥ ಮಹಾಬಲ ಕರ್ಕೇರಾ ಹಾಗೂ ಮಕ್ಕಳ ಕೊಡುಗೆಯ ಕಟ್ಟಡ , ತಡ್ಯಾರು ಸದಾಶಿವ ಶೆಟ್ಟಿ ಮತ್ತು ಸಹೋದರರ ಕೊಡುಗೆಯ ಸಭಾಗೃಹ, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್ನ ಕೊಡುಗೆಯ ಸಭಾಗೃಹದ ಉದ್ಘಾಟನೆ ನಡೆಯಲಿದೆ ಎಂದು ವ್ಯವಸ್ಥಾಪನ ಸಮಿತಿಯ ಸದಸ್ಯ ಕೋರಿಬೆಟ್ಟುಗುತ್ತು ಸುರೇಂದ್ರ ಶೆಟ್ಟಿ ತಿಳಿಸಿದರು.
ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ನಿತ್ಯ ಅನ್ನದಾನ ನಡೆಯುತ್ತಿದ್ದು ಬ್ರಹ್ಮಕಲಶೋತ್ಸವ ಸಂದರ್ಭ ಫೆ.6ರಿಂದ ಫೆ.18ರಂದು ನಡೆಯುವ ವರ್ಷಾವಧಿ ಜಾತ್ರೆಯ ಪರ್ಯಂತ ವಿಶೇಷ ಅನ್ನದಾನ ನಡೆಯಲಿದೆ ಎಂದೂ ವಾದಿರಾಜ ಶೆಟ್ಟಿ ತಿಳಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಫೆ.6ರಂದು ಸಂಜೆ 6ರಿಂದ ಕಿನ್ನಿಗೋಳಿಯ ಸ್ವರಾಂಜಲಿ ಸಂಗೀತ ಶಾಲೆಯ ಶೋಭಿತಾ ಭಟ್ ಹಾಗೂ ಅಶ್ವಿಜಾ ಉಡುಪ ಅವರಿಂದ ಭಕ್ತಿ ಸಂಗೀತ, ರಾತ್ರಿ 9.30ರಿಂದ ಉಡುಪಿಯ ಅಭಿನಯ ಕಲಾವಿದರಿಂದ ಒಂಚಿ ತೂಪಿನಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 7ರಂದು ಸಂಜೆ 6ರಿಂದ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರದ ಕಲಾವಿದರಿಂದ ನೃತ್ಯಾರ್ಪಣ ನೃತ್ಯ ಕಾರ್ಯಕ್ರಮ, ರಾತ್ರಿ 9.30ರಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ ಬæೖರಾಸ್ ಬಾಸ್ಕರೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ. 8ರಂದು ಸಂಜೆ 6ಕ್ಕೆ ಮಂಗಳೂರಿನ ರಂಗ ಸಂಗಾತಿ ತಂಡದಿಂದ ನೆಮ್ಮದಿ ಅಪಾರ್ಟ್ಮೆಂಟ್ ಕನ್ನಡ ನಾಟಕ, ರಾತ್ರಿ 9.30ರಿಂದ ಮಂಗಳೂರಿನ ಲಕುಮಿ ತಂಡದಿಂದ ಒವುಲ ಒಂತೆ ದಿನನೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.9ರ ಸಂಜೆ 6ಕ್ಕೆ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮುಂಡ್ಕೂರು ಭಾರ್ಗವ ಜೇಸಿಐನ ಸಹಭಾಗಿತ್ವದಲ್ಲಿ ಅನಿತಾ ಬೋಳ ಹಾಗೂ ಬಳಗದಿಂದ ಭಕ್ತಿ ಸಂಗೀತ, ಹಿರಿಯಡ್ಕ ಸೌಮ್ಯಾ ಹೆಗ್ಡೆಯವರಿಂದ ಭರತನಾಟ್ಯ ನಡೆಯಲಿದ್ದು , ರಾತ್ರಿ 9.30ರಿಂದ ಮಂಗಳೂರಿನ ಕಲಾ ಸಂಗಮದ ಕಲಾವಿದರಿಂದ ಮಣಿಕಂಠ ಮಹಿಮೆ ಭಕ್ತಿ ಪ್ರಧಾನ ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.10ರ ಸಂಜೆ 6ಕ್ಕೆ ಬಜಪೆಯ ಥಂಡರ್ ಗೈಸ್ ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ 9.30ರಿಂದ ತುಳುವೆರೆ ಉಡಲ್ ಜೋಡುಕಲ್ಲು ತಂಡದಿಂದ ಶ್ರೀಮತಿ ವೈಫ್ ಆಫ್ ಚಂದು ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಫೆ.11ರ ಮಧ್ಯಾಹ್ನ 1ರಿಂದ ಬೆಂಗಳೂರಿನ ಜ್ಯೂನಿಯರ್ ಅಂಬರೀಶ್, ದೂರದರ್ಶನ ಖ್ಯಾತಿಯ ಅಂಧ ಕಲಾವಿದ ಬಸವರಾಜ್ ಹುಬ್ಬಳ್ಳಿ ಹಾಗೂ ಪ್ರಕಾಶ್ ಕಿನ್ನಿಗೋಳಿ ತಂಡದಿಂದ ಭಕ್ತಿ, ಭಾವ ಸಂಗೀತ ನಡೆಯಲಿದೆ. ಸಂಜೆ 4ರಿಂದ ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಬಳಗದಿಂದ ಯಕ್ಷ -ಗಾನ-ನಾಟ್ಯ ವೈಭವ ನಡೆಯಲಿದೆ. ರಾತ್ರಿ 9.30ರಿಂದ ಮಂಗಳೂರಿನ ಚಾಪರ್ಕ ಕಲಾವಿದರಿಂದ ಪುಷ್ಪಕ್ಕನ ಇಮಾನ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಕ್ಷೇತ್ರದಲ್ಲಿ ಫೆ.13ರಂದು ಧ್ವಜಾರೋಹಣ ನಡೆಯಲಿದ್ದು ಫೆ.18ರಂದು ಬ್ರಹ್ಮ ರಥೋತ್ಸವ ನಡೆಯಲಿದೆ. ಮುಂಡ್ಕೂರು ನಡಿಗುತ್ತು ವಿನಯಕುಮಾರ್ ಶೆಟ್ಟಿಯವರ ನಿರ್ವಹಣೆಯ ತಂಡ ಬ್ರಹ್ಮಕಲಶೋತ್ಸವದಂದು ಆಗಮಿಸಲಿರುವ ಭಕ್ತಾದಿಗಳ ಆತಿಥ್ಯದ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ ಎಂದು ವಾದಿರಾಜ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ರಾಮದಾಸ ಆಚಾರ್ಯ, ಸುರೇಂದ್ರ ಶೆಟ್ಟಿ, ಕೃಷ್ಣ ಪೂಜಾರಿ, ಸಂಜೀವ ಕರ್ಕೇರ, ಪ್ರಮುಖರಾದ ಅಶೋಕ ಶೆಟ್ಟಿ, ಸ್ವರಾಜ್ ಶೆಟ್ಟಿ, ಶೇಖರ ಶೆಟ್ಟಿ, ಅರುಣ್ ರಾವ್, ಮಾಧ್ಯಮ ಸಮಿತಿಯ ಸಂಚಾಲಕ ಶರತ್ ಶೆಟ್ಟಿ ಮತ್ತಿತರರಿದ್ದರು.