ಆ್ಯಪ್ನಗರ

ಬಟ್ಟೆ ತೊಳೆಯಲು ಹೋದ ಯುವತಿ ನಿಗೂಢ ಕಣ್ಮರೆ;ವಾರಾಹಿ ಹೊಳೆಯಲ್ಲಿ ಮುಂದುವರಿದ ಹುಡುಕಾಟ

21 ವರ್ಷದ ಯುವತಿಯ ನಾಪತ್ತೆ ಪ್ರಕರಣ ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.

Vijaya Karnataka 5 Jul 2019, 9:55 am
ಸಿದ್ದಾಪುರ: ಕುಂದಾಪುರ ತಾಲೂಕಿನ ಶಂಕರನಾರಾಯಣ ಕುಳ್ಳುಂಜೆ ಗ್ರಾಮದ ಶಾಡಿಗುಂಡಿ ವಾರಾಹಿ ಹೊಳೆಯಲ್ಲಿ ಬುಧವಾರ ಬೆಳಗ್ಗೆ ಬಟ್ಟೆ ತೊಳೆಯಲೆಂದು ತೆರಳಿದ್ದ ಅಮಿತಾ(21) ಎಂಬ ಯುವತಿ ಇದುವರೆಗೂ ಪತ್ತೆಯಾಗದ ಕಾರಣ ವಾರಾಹಿ ಹೊಳೆಯಲ್ಲಿ ಹುಡುಕಾಟ ಮುಂದುವರಿದಿದೆ.
Vijaya Karnataka Web River


ಹೊಳೆಯ ದಡದಲ್ಲಿ ತೊಳೆಯಲೆಂದು ಕೊಂಡು ಹೋದ ಬಟ್ಟೆ ಪತ್ತೆಯಾಗಿದ್ದು, ಬುಧವಾರ ಅಗ್ನಿಶಾಮಕ ದಳ ಹಾಗೂ ದೋಣಿಯ ಮೂಲಕ ಸ್ಥಳೀಯರು ಹಗಲು ರಾತ್ರಿಯೆನ್ನದೆ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರು.

ಶಾಡಿಗುಂಡಿಯಿಂದ ಹೊಳೆಯಲ್ಲೆ ಹಲವಾರು ಕಿ.ಮೀ. ದೂರದವರೆಗೆ ಹುಡುಕಾಟ ನಡೆಸಲಾಗುತ್ತಿದೆ. ಒಂದೆಡೆ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನೀರಿನ ರಭಸ ಹೆಚ್ಚುತ್ತಿದೆ. ಸ್ಪೀಡ್‌ ಬೋಟ್‌ ವ್ಯವಸ್ಥೆ ಕೂಡ ಮಾಡಲಾಗಿದೆ. ಆದರೂ ಇದುವರೆಗೂ ಯುವತಿಯ ಸುಳಿವು ಪತ್ತೆಯಾಗಿಲ್ಲ.

ಸ್ಥಳಕ್ಕೆ ಶಂಕರನಾರಾಯಣ ಪೊಲೀಸ್‌ ಠಾಣಾಧಿಕಾರಿ ಸುದರ್ಶನ್‌ ಹಾಗೂ ಸಿಬ್ಬಂದಿ, ಜಿಪಂ ಸದಸ್ಯ ರೋಹಿತ್‌ ಶೆಟ್ಟಿ, ತಾಪಂ ಸದಸ್ಯ ಉಮೇಶ್‌ ಶೆಟ್ಟಿ , ಗ್ರಾಪಂ ಅಧ್ಯಕ್ಷ ರವಿ ಕುಲಾಲ್‌ ಮತ್ತಿತರರು ಭೇಟಿ ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ