ಆ್ಯಪ್ನಗರ

ಮೀನುಗಾರರು ಮರಳಿ ಬರಲೆಂದು ನಾಗರಿಕ ಸಮಿತಿ ಪ್ರಾರ್ಥನೆ

ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿ. 15ರಿಂದ ಕಾಣೆಯಾದ ಸುವರ್ಣ ತ್ರಿಭುಜ ದೋಣಿ ಸಹಿತ ಏಳು ಮೀನುಗಾರರು ಮರಳಿ ಬರಲೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು.

Vijaya Karnataka 5 Jan 2019, 5:00 am
ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿ. 15ರಿಂದ ಕಾಣೆಯಾದ ಸುವರ್ಣ ತ್ರಿಭುಜ ದೋಣಿ ಸಹಿತ ಏಳು ಮೀನುಗಾರರು ಮರಳಿ ಬರಲೆಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಗುರುವಾರ ಪ್ರಾರ್ಥನೆ ಸಲ್ಲಿಸಲಾಯಿತು.
Vijaya Karnataka Web 3


ಉಡುಪಿ ಸೋದೆ ಮಠದ ಭೂತರಾಜರ ಗುಡಿಯಲ್ಲಿ ಪ್ರಾರ್ಥನಾ ವಿಧಿಯನ್ನು ವೆಂಕಟೇಶ ಆಚಾರ್ಯ, ಸೋದೆ ಮಠದ ಉಸ್ತುವಾರಿ ಮಧ್ವೇಶ ತಂತ್ರಿ ನಡೆಸಿಕೊಟ್ಟರು. ನಾಗರಿಕ ಸಮಿತಿ ವತಿಯಿಂದ ಸಂಕಲ್ಪ ಕೈಗೊಳ್ಳಲಾಯಿತು.

ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು, ಉದ್ಯಮಿ ಮುರಳೀಧರ ಬಲ್ಲಾಳ್‌, ಸುಧಾಕರ, ಡೇವಿಡ್‌, ರಾಘವೇಂದ್ರ ಪ್ರಭು ಕರ್ವಾಲು, ಬಸಂತ್‌ ಮಲ್ಪೆ, ಐಸಿರಿ ಸುರೇಂದ್ರ ಕುಕ್ಯಾನ್‌, ಬೋರ್ಕರ್‌, ಪುತ್ರಾಯ, ಸವಿತಾ ಶೆಟ್ಟಿ ಉಪಸ್ಥಿತರಿದ್ದರು.

ದೋಣಿ ಮತ್ತು ಏಳು ಮೀನುಗಾರರು ಕಾಣೆಯಾಗಿ 19 ದಿನಗಳು ಸಂದಿವೆ. ಸಂಬಂಧಿತ ಇಲಾಖೆಗಳು ಶೋಧ ನಡೆಸಿದ್ದರೂ ಯಾವುದೇ ಸುಳಿವು ದೊರೆಯದೆ ಮೀನುಗಾರರ ಕುಟುಂಬ ಆತಂಕದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ