ಆ್ಯಪ್ನಗರ

ನಳಿನ್ ಕುಮಾರ್ ಶಿರವೇರಿದ ಬಡಗುತಿಟ್ಟಿನ ಕೇದಗೆ ಕಿರೀಟ

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ನಳಿನ್‌ ಕುಮಾರ್‌ ಕಟೀಲು ಅವರಿಗೆ ಉಡುಪಿಯಲ್ಲಿ ಅಭಿನಂದನೆ ಸಲ್ಲಿಸಲಾಯಿತು. ವಿಶೇಷ ಯಕ್ಷಗಾನ ಕಾರ್ಯಕ್ರಮದಲ್ಲಿ ಕಟೀಲ್‌ಗೆ ಕಿರೀಟ ಹಾಕಿ ಸನ್ಮಾನಿಸಲಾಯಿತು.

Vijaya Karnataka Web 10 Sep 2019, 6:20 pm
ಉಡುಪಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಯಕ್ಷ ನೃತ್ಯ, ಗಾಯನದ ಹೃದಯಸ್ಪರ್ಶಿ ಅಭಿನಂದನೆ ನೆರವೇರಿತು.
Vijaya Karnataka Web ನಳಿನ್‌ ಕುಮಾರ್‌ ಕಟೀಲ್‌
ನಳಿನ್‌ ಕುಮಾರ್‌ ಕಟೀಲ್‌


ಭಾರತ ದೇಶವ ಸತ್ಪಥದೊಳು ಮುನ್ನಡೆಸಲು ಬಂದಿಹ ಮೋದಿ....ಕೆ.ಜೆ. ಗಣೇಶ್ ಯಕ್ಷ ಗಾಯನಕ್ಕೆ (ಮೋಹನ ರಾಗ, ಏಕತಾಳ) ಚೆಂಡೆ, ಕೊಂಬು, ಕಹಳೆಯ ನಾದ ವೈಭವ ಸಭಾಂಗಣದಲ್ಲಿ ಮಾರ್ದನಿಸಿತು. ಕಡೆಗೋಲು ಕೃಷ್ಣನ ಸ್ಮರಣಿಕೆ ಶ್ರೀರಕ್ಷೆಯಾದರೆ, ಬಡಗುತಿಟ್ಟಿನ ಯಕ್ಷ ಕೇದಗೆ ಕಿರೀಟ ನಳಿನ್ ಕುಮಾರ್ ಕಟೀಲು ಶಿರವೇರಿ ಪಕ್ಷ ಮತ್ತು ಕಾರ್ಯಕರ್ತರ ಕ್ಷೇಮ ಜವಾಬ್ದಾರಿಯನ್ನು ನೆನಪಿಸಿತು.

ಕಾರ್ಯಕರ್ತರ ಪರವಾಗಿ ನಾಯಕರು ನಳಿನ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಬಳಿಕ ಮೋಹನ ರಾಗ, ಭಾಮಿನಿಯಲ್ಲಿ ಮೋದಿ ಗರಡಿಯೊಳು ಪಳಗಿದ ನಳಿನ್ ಕುಮಾರ್ ಕಟೀಲು....ಯುವ ಸಂಘಟಕ, ನವ ಸಂಘಟಕ ಕರಾವಳಿ ಜಿಲ್ಲೆಯ ಜನರ ಸಮಸ್ಯೆಯ ಪರಿಹರಿಸುವ ಬಡವರ ಭಾಗ್ಯನಿಧಿ ಕಟೀಲರು...ಸಂಸತ್ತಿನಲ್ಲಿ ಸಿಂಹಗರ್ಜನೆಗೈದ....ನಿಮಗಿದೋ ವಂದನೆ, ಅಭಿನಂದನೆ ಹಾಡು ಕೆ.ಜೆ. ಗಣೇಶರ ಕಂಚಿನ ಕಂಠದಲ್ಲಿ ಸಭಿಕರನ್ನು ಸೆಳೆಯಿತು.

ರಾಜ್ಯ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮರ್ಥ, ಸ್ವಾಭಿಮಾನಿ, ಶಕ್ತಿಶಾಲಿ ಭಾರತ ನಿರ್ಮಾಣವೇ ಬಿಜೆಪಿ, ಆರೆಸ್ಸೆಸ್ ಧ್ಯೇಯ. ಶ್ಯಾಮ್ ಪ್ರಸಾದ್ ಮುಖರ್ಜಿ ಕಂಡ ದೇಶಕ್ಕೆ ಒಂದೇ ಸಂವಿಧಾನ, ಒಂದೇ ಪ್ರಧಾನಿ, ಒಂದೇ ಧ್ವಜದ ಕನಸು ನನಸಾಗಿದ್ದು ಊಹಿಸಲಾಗುತ್ತಿಲ್ಲ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ