ಆ್ಯಪ್ನಗರ

ಸರಕಾರಕ್ಕೆ ಪ್ರತಿಯೊಬ್ಬರಲ್ಲೂ ಕೇಳಲು ಸಾಧ್ಯವಿಲ್ಲ, ಡಿಕೆಶಿಗೆ ಕಟೀಲ್ ತಿರುಗೇಟು

ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ ಕೈಗೊಂಡಿರುವ ಉಚಿತ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಡಿಕೆಶಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

Vijaya Karnataka Web 25 May 2020, 1:29 pm
ಉಡುಪಿ: ಜಗತ್ತನ್ನು ಬಾಧಿಸುತ್ತಿರುವ ಕೊರೊನಾ ಅಟ್ಟಹಾಸ ರಾಜ್ಯದಲ್ಲೂ ಜೋರಾಗಿರುವುದರಿಂದ ಪಂಚಾಯಿತಿ ಚುನಾವಣೆ ಮಾಡುವ ಪರಿಸ್ಥಿತಿ ಇಲ್ಲ. ಸದ್ಯ ಸಮಿತಿ ರಚನೆಗೆ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದೆ. ಸರಕಾರಕ್ಕೆ ಎಲ್ಲವನ್ನೂ ಪ್ರತಿಯೊಬ್ಬರಲ್ಲಿ ಕೇಳಿ ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
Vijaya Karnataka Web udupi
ಉಚಿತ ಬಸ್ ಸೇವೆಗೆ ಚಾಲನೆ ನೀಡಿದ ಕಟೀಲ್


ಉಡುಪಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ ಕೈಗೊಂಡಿರುವ ಉಚಿತ ಬಸ್ ಸೇವೆಗೆ ಸೋಮವಾರ ಸಿಟಿ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ಪಂಚಾಯಿತಿಗಳಿಗೆ ನಾಮ ನಿರ್ದೇಶನ ಬೇಡವೆಂದು ಮಾಜಿ ಸಚಿವ ಡಿಕೆಶಿ ಹೇಳಿಕೆ ಕೊಟ್ಟಿದ್ದಾರೆ. ಪ್ರತಿಯೊಂದು ಕೇಳಿಯೇ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಕೂಡಾ ರಾಜ್ಯದಲ್ಲಿ ಸರಕಾರ ನಡೆಸಿದೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕೆಂಬುವುದು ಸರಕಾರಕ್ಕೆ ಗೊತ್ತಿದೆ. ಕೆಲ ಪಂಚಾಯಿತಿಗಳಿಗೆ ಡಿಸೆಂಬರ್ ತನಕ ಆಳ್ವಿಕೆ ಅವಧಿ ಇದೆ. ಅವಧಿ ಮುಗಿದ ಪಂಚಾಯಿತಿಗಳಿಗೆ ಜಿಲ್ಲಾಕಾರಿಗಳು ಸಮಿತಿ ನೇಮಕ ಮಾಡುತ್ತಾರೆ ಎಂದರು.

ಜನರ ಹಿತ ಕಾಯುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲ, ಡಿಕೆಶಿ

ಮುಂಬೈ ಕನ್ನಡಿಗರ ಒತ್ತಡ ಸಹಜವಾಗಿದೆ. ಊರಿಗೆ ಕರೆಸುವಂತೆ ಕೇಳುವುದು, ರಾಜಕಾರಣಿಗಳಿಗೆ ಬೈಯುವುದು ಸಾಮಾನ್ಯ. ಮುಂಬಯಿಯಲ್ಲಿ ಇರುವವರು ನಮ್ಮವವರೇ. ಅವರ ಸಂಕಷ್ಟದ ಅರಿವಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಮತ್ತಷ್ಟು ಕೊರೊನಾ ಪಾಸಿಟಿವ್ ಬರುವ ಸಾಧ್ಯತೆ ಇದೆ. ಇದನ್ನು ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದರು.

21,000ಕ್ಕೂ ಅಧಿಕ ಮಂದಿ ಉಡುಪಿಗೆ, ಜಿಲ್ಲಾಡಳಿತಕ್ಕೆ ಕ್ವಾ...

ದೇಶೀಯ ವಿಮಾನ ಆರಂಭಿಸುವುದು ಅನಿವಾರ್ಯವಾಗಿದ್ದು, ಇನ್ನೂ ಮುಂದೆ ಕೋವಿಡ್ ಕೂಡಾ ನ್ಮಮ ಜೀವನದ ಒಂದು ಭಾಗವಾಗಲಿದೆ. ಸಾಮಾಜಿಕ ಅಂತರ್, ಮಾಸ್ಕ್ ಧರಿಸುವ ಜತೆಗೆ ಆರೋಗ್ಯ ತಪಾಸಣೆ ಮಾಡಿಯೇ ವಿಮಾನ ಹತ್ತಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ