ಕೋಟ: ಯಕ್ಷ ಗಾನಲೋಕದ ದಂತಕಥೆಯಾಗಿದ್ದ ಉಪ್ಪೂರರ ಬಗ್ಗೆ ಮೂರು ಕೃತಿಗಳು ಬಂದಿರುವುದು ನಿಜಕ್ಕೂ ಶ್ಲಾಘನೀಯ. ಕೇವಲ ರಂಗನಿರ್ವಾಹಕರಾಗಿ ಅಲ್ಲದೇ ಹೊಸ ಸವಾಲುಗಳನ್ನು ಸ್ವೀಕರಿಸುವ ಒಳ್ಳೆಯ ಗುಣ ಅವರು ಹೊಂದಿದ್ದರು. ಕಾರಂತರ ಚಿಂತನೆಯನ್ನು ತನ್ನೊಳಗೆ ಇಟ್ಟುಕೊಂಡು ಯಕ್ಷ ಲೋಕದಲ್ಲಿ ವಿಸ್ತರಣೆ ಹಾಗೂ ವಿಕಾಸಕ್ಕೆ ಅಮೂಲ್ಯ ಕೊಡುಗೆ ನೀಡಿದ್ದರು ಎಂದು ಯಕ್ಷ ಗಾನ ವಿಮರ್ಶಕ ಡಾ.ಪ್ರಭಾಕರ ಜೋಷಿ ಹೇಳಿದರು.
ಸಾಲಿಗ್ರಾಮದ ಗುಂಡ್ಮಿಯ ಯಕ್ಷ ಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಯಕ್ಷ ಗಾನ ಅಕಾಡೆಮಿ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ ಶತಸ್ಮೃತಿ ಸಮಿತಿ ಆಶ್ರಯದಲ್ಲಿ ನಡೆದ ಭಾಗವತ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಬ್ಬ ವ್ಯಕ್ತಿಯಾಗಿ ಅನೇಕ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದ ಭಾಗವತ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಪ್ರಜ್ಞೆ ಎಲ್ಲ ಕಲಾವಿದರಲ್ಲಿ ಜಾಗೃತವಾಗಿರಲಿ ಎಂದರು.
ಯಕ್ಷ ಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷ ತೆ ವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಕೃಷ್ಣಮೂರ್ತಿ ಹೆಬ್ಬಾರ್ ಉಪಸ್ಥಿತರಿದ್ದರು. ಡಾ.ಶ್ರೀಧರ್ ಉಪ್ಪೂರ ಸ್ವಾಗತಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ವಂದಿಸಿದರು. ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಸಿದ್ಧ ಬಡಗು ಕಲಾವಿದರಿಂದ ವೀರಮಣಿ ಕಾಳಗ ಯಕ್ಷ ಗಾನ ಪ್ರದರ್ಶನ ನಡೆಯಿತು.
ಧನಸಹಾಯ ವಿತರಣೆ: ಸಮಾರಂಭದಲ್ಲಿ ಉಪ್ಪೂರರ ನೆನಪಿನಲ್ಲಿ ಉಪ್ಪೂರರ ಒಡನಾಡಿಗಳಾದ ತಿಮ್ಮಪ್ಪ ನಾಯ್ಕ, ದುರ್ಗಪ್ಪ ಗುಡಿಗಾರ ಕುಟುಂಬಕ್ಕೆ ಮತ್ತು ಹಾಲಾಡಿಯ ಕೃಷ್ಣರಾಜ ಗೋಳಿ ಅವರನ್ನು ಸನ್ಮಾನಿಸಿ ಧನಸಹಾಯ ನೀಡಲಾಯಿತು.
ಸಾಲಿಗ್ರಾಮದ ಗುಂಡ್ಮಿಯ ಯಕ್ಷ ಗಾನ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಬೆಂಗಳೂರಿನ ಕರ್ನಾಟಕ ಯಕ್ಷ ಗಾನ ಅಕಾಡೆಮಿ, ಪ್ರಾಚಾರ್ಯ ಮಾರ್ವಿ ನಾರ್ಣಪ್ಪ ಉಪ್ಪೂರ ಶತಸ್ಮೃತಿ ಸಮಿತಿ ಆಶ್ರಯದಲ್ಲಿ ನಡೆದ ಭಾಗವತ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಒಬ್ಬ ವ್ಯಕ್ತಿಯಾಗಿ ಅನೇಕ ಕಲಾವಿದರಿಗೆ ಮಾರ್ಗದರ್ಶಕರಾಗಿದ್ದ ಭಾಗವತ ಪ್ರಾಚಾರ್ಯ ನಾರ್ಣಪ್ಪ ಉಪ್ಪೂರರ ಪ್ರಜ್ಞೆ ಎಲ್ಲ ಕಲಾವಿದರಲ್ಲಿ ಜಾಗೃತವಾಗಿರಲಿ ಎಂದರು.
ಯಕ್ಷ ಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಅಧ್ಯಕ್ಷ ತೆ ವಹಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಕೃಷ್ಣಮೂರ್ತಿ ಹೆಬ್ಬಾರ್ ಉಪಸ್ಥಿತರಿದ್ದರು. ಡಾ.ಶ್ರೀಧರ್ ಉಪ್ಪೂರ ಸ್ವಾಗತಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ್ ಹೆಬ್ಬಾರ್ ವಂದಿಸಿದರು. ರಾಮಚಂದ್ರ ಐತಾಳ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪ್ರಸಿದ್ಧ ಬಡಗು ಕಲಾವಿದರಿಂದ ವೀರಮಣಿ ಕಾಳಗ ಯಕ್ಷ ಗಾನ ಪ್ರದರ್ಶನ ನಡೆಯಿತು.
ಧನಸಹಾಯ ವಿತರಣೆ: ಸಮಾರಂಭದಲ್ಲಿ ಉಪ್ಪೂರರ ನೆನಪಿನಲ್ಲಿ ಉಪ್ಪೂರರ ಒಡನಾಡಿಗಳಾದ ತಿಮ್ಮಪ್ಪ ನಾಯ್ಕ, ದುರ್ಗಪ್ಪ ಗುಡಿಗಾರ ಕುಟುಂಬಕ್ಕೆ ಮತ್ತು ಹಾಲಾಡಿಯ ಕೃಷ್ಣರಾಜ ಗೋಳಿ ಅವರನ್ನು ಸನ್ಮಾನಿಸಿ ಧನಸಹಾಯ ನೀಡಲಾಯಿತು.