ಕುಂದಾಪುರ (ಉಡುಪಿ): ನವರಾತ್ರಿ ಉತ್ಸವ ಹಿನ್ನೆಲೆಯಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಕ್ತರ ಆಗಮನ ದಿನೇ ದಿನೇ ಹೆಚ್ಚುತ್ತಿದ್ದು, ಕೋವಿಡ್ ನಿಯಮಾವಳಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಸಾಮಾಜಿಕ ಅಂತರ ಕೇಳುವಂತಿಲ್ಲ: ನವರಾತ್ರಿ ಸಂದರ್ಭ ಕಳೆದೆರಡು ದಿನದಲ್ಲಿ ಸರಾಸರಿ ಭಕ್ತರ ಆಗಮನ 5 ಸಾವಿರ ದಾಟಿದ್ದು, ಕೋವಿಡ್ ನಿಯಮಾವಳಿಗಳ ಕಟ್ಟುನಿಟ್ಟಿನ ಪಾಲನೆಗೆ ದೇವಳದಲ್ಲಿ ಒತ್ತು ನೀಡಲಾಗಿದೆ. ದೇವಳದ ಹೆಬ್ಬಾಗಿಲು ಪ್ರವೇಶ ದ್ವಾರದಲ್ಲಿ ಭಕ್ತರನ್ನು ಥರ್ಮಲ್ ಸ್ಕ್ಯಾನಿಂಗ್ಗೆ ಒಳಪಡಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್ ಧರಿಸದೆ ಇದ್ದವರು ದೇವಳ ಪ್ರವೇಶಿಸುವಂತಿಲ್ಲ. ದೇವಳ ಪ್ರವೇಶಿಸಿದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕೆಂದು ದೇವಳ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಎಚ್ಚರಿಸುತ್ತಲೇ ಇದ್ದರೂ ಕೇಳುವ ಸ್ಥಿತಿಯಲ್ಲಿ ಭಕ್ತರಿಲ್ಲ. ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ದೇವರ ದರ್ಶನದ ಹಾದಿಯಲ್ಲಿ ಸಾಮಾಜಿಕ ಅಂತರ ಪೂರ್ಣ ಮಾಯವಾಗಿದೆ. ಗರ್ಭಗುಡಿ ಒಳಗಡೆ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಂಡು ದೇವರ ದರ್ಶನ ಪಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.
ಪುಷ್ಪ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧ: ಅ. 24ರಂದು ಸಂಜೆ ನವರಾತ್ರಿ ಹಿನ್ನೆಲೆಯಲ್ಲಿ ನಡೆಯಲಿರುವ ಪುಷ್ಪ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಸಂಜೆ 5 ಗಂಟೆ ನಂತರ ಭಕ್ತರು ದೇವಳ ಪ್ರವೇಶಿಸುವಂತಿಲ್ಲ.
ತೆರೆದ ಅಂಗಡಿ ಮುಂಗಟ್ಟುಗಳು: ಕೊರೊನಾ ಲಾಕ್ಡೌನ್ ಬಳಿಕ ಮುಚ್ಚಿದ್ದ ಬಹುತೇಕ ಅಂಗಡಿಗಳು ನವರಾತ್ರಿಯ ಶುಭಾವಸರದಲ್ಲಿ ಮತ್ತೆ ಬಾಗಿಲು ತೆರೆದಿವೆ. ದೇವಳ ರಥ ಬೀದಿ, ಪೇಟೆ ಪರಿಸರದ ಅಂಗಡಿಗಳು ಮತ್ತೆ ವಹಿವಾಟು ಆರಂಭಿಸಿವೆ.
ಭಕ್ತರ ಮುಗಿಬೀಳುವಿಕೆ ಇಲ್ಲ: ನವರಾತ್ರಿ ಸಂದರ್ಭ ಪ್ರತಿ ದಿನ ಕನಿಷ್ಠ 10 ಸಾವಿರಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆಯುವ ವಾಡಿಕೆ ಹಿಂದಿತ್ತು. ಅಗಾಧ ಸಂಖ್ಯೆಯಲ್ಲಿ ಬರುವ ವಾಹನಗಳ ಪಾರ್ಕಿಂಗ್ ಸವಾಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹಿಂದಿನ ಸಂಭ್ರಮ ಇಲ್ಲ. ಭಕ್ತರ ಮುಗಿ ಬೀಳುವಿಕೆ, ವಾಹನ ದಟ್ಟಣೆ ಎಲ್ಲಿಯೂ ಇಲ್ಲ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು ಸಾವಕಾಶದಿಂದ ದೇವರ ದರ್ಶನ ಪಡೆಯಬಹುದಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಅನ್ನಪ್ರಸಾದ ಸಹಿತ ಎಲ್ಲ ಸೇವೆ ಆರಂಭ
'ನವರಾತ್ರಿ ಉತ್ಸವ ನಿಮಿತ್ತ ಭಕ್ತರ ಅನುಕೂಲಕ್ಕಾಗಿ ಎಲ್ಲ ಏರ್ಪಾಟು ಮಾಡಿದ್ದೇವೆ. ಭಕ್ತರು ಕೋವಿಡ್ ನಿಯಮಾವಳಿ ಪಾಲಿಸಲು ಮುಂದಾಗಬೇಕು. ದೇವರ ದರ್ಶನ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯುವ ಬಗ್ಗೆ ಸ್ವಯಂ ಚಿಂತನೆ ಮಾಡಬೇಕು. ಮಾಸ್ಕ್ ಧರಿಸದೆ ಇದ್ದವರನ್ನು ಪ್ರವೇಶಿಸಲು ಬಿಡುತ್ತಿಲ್ಲ' ಎಂದು ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಹೇಳಿದ್ದಾರೆ.
ಕೊಲ್ಲೂರು ದೇವಳದ ಆನೆ ಇಂದಿರಾ ಇನ್ನಿಲ್ಲ
'ನಮ್ಮ ರಾಜ್ಯದ ನಾನಾ ಕಡೆಯ ಭಕ್ತರು ಆಗಮಿಸುತ್ತಿದ್ದಾರೆ. ಕೇರಳದಿಂದ ಅತಿ ಹೆಚ್ಚಿನ ಭಕ್ತರು ಬರುವ ಕ್ಷೇತ್ರ ಇದಾಗಿದೆ. ಆದರೆ ಕೇರಳದಿಂದ ಭಕ್ತರು ಬಾರದೆ ಇರುವುದರಿಂದ ವಹಿವಾಟು ಇನ್ನೂ ಚೇತರಿಕೆ ಕಂಡಿಲ್ಲ. ಲಾಕ್ಡೌನ್ ಮುಗಿದ ಬಳಿಕ ನಿಧಾನ ಒಂದೊಂದೇ ಅಂಗಡಿ ತೆರೆದುಕೊಳ್ಳುತ್ತಿದೆ. ಮುಂದೆ ಕಾದು ನೋಡಬೇಕು' ಎನ್ನುತ್ತಾರೆ, ಅಂಗಡಿ ವ್ಯಾಪಾರಿಗಳು.
ಇದೇ ವೇಳೆ ಮಾತನಾಡಿದ ಅರ್ಚಕ ಕುಟುಂಬದ ವಿಶ್ವನಾಥ ಅಡಿಗ ಅವರು, 'ಕೋವಿಡ್ನಿಂದಾಗಿ ನಿರೀಕ್ಷೆಯ ಭಕ್ತರ ಪ್ರಮಾಣ ಇಲ್ಲ. ಕೋವಿಡ್ ನಡುವೆಯೂ ಬರುತ್ತಿರುವ ಭಕ್ತರ ಸಂಖ್ಯೆ ಅವಲೋಕಿಸಿದಾಗ ದೊಡ್ಡದೆ ಎನ್ನಬೇಕು. ಅನ್ಯ ರಾಜ್ಯದ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇದರಿಂದ ಕೊಲ್ಲೂರಿನ ವಹಿವಾಟು ಸಹಿತ ಎಲ್ಲ ಚಟುವಟಿಕೆಗಳಿಗೆ ಏಟು ಬಿದ್ದಿದೆ. ಹಿಂದಿನ ದಿನಗಳು ಮತ್ತೆ ಬರಲಿ. ಕೋವಿಡ್ ಜಗತ್ತಿನಿಂದಲೇ ಮರೆಯಾಗಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ' ಎಂದು ಹಾರೈಸಿದರು.
ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ವಿಶೇಷ ಪ್ಯಾಕೇಜ್
ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್ ಧರಿಸದೆ ಇದ್ದವರು ದೇವಳ ಪ್ರವೇಶಿಸುವಂತಿಲ್ಲ. ದೇವಳ ಪ್ರವೇಶಿಸಿದ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆಯಬೇಕೆಂದು ದೇವಳ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ಎಚ್ಚರಿಸುತ್ತಲೇ ಇದ್ದರೂ ಕೇಳುವ ಸ್ಥಿತಿಯಲ್ಲಿ ಭಕ್ತರಿಲ್ಲ. ಭಕ್ತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ದೇವರ ದರ್ಶನದ ಹಾದಿಯಲ್ಲಿ ಸಾಮಾಜಿಕ ಅಂತರ ಪೂರ್ಣ ಮಾಯವಾಗಿದೆ. ಗರ್ಭಗುಡಿ ಒಳಗಡೆ ಸೋಶಿಯಲ್ ಡಿಸ್ಟೆನ್ಸ್ ಕಾಯ್ದುಕೊಂಡು ದೇವರ ದರ್ಶನ ಪಡೆಯಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ.
ಪುಷ್ಪ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧ: ಅ. 24ರಂದು ಸಂಜೆ ನವರಾತ್ರಿ ಹಿನ್ನೆಲೆಯಲ್ಲಿ ನಡೆಯಲಿರುವ ಪುಷ್ಪ ರಥೋತ್ಸವಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಸಂಜೆ 5 ಗಂಟೆ ನಂತರ ಭಕ್ತರು ದೇವಳ ಪ್ರವೇಶಿಸುವಂತಿಲ್ಲ.
ತೆರೆದ ಅಂಗಡಿ ಮುಂಗಟ್ಟುಗಳು: ಕೊರೊನಾ ಲಾಕ್ಡೌನ್ ಬಳಿಕ ಮುಚ್ಚಿದ್ದ ಬಹುತೇಕ ಅಂಗಡಿಗಳು ನವರಾತ್ರಿಯ ಶುಭಾವಸರದಲ್ಲಿ ಮತ್ತೆ ಬಾಗಿಲು ತೆರೆದಿವೆ. ದೇವಳ ರಥ ಬೀದಿ, ಪೇಟೆ ಪರಿಸರದ ಅಂಗಡಿಗಳು ಮತ್ತೆ ವಹಿವಾಟು ಆರಂಭಿಸಿವೆ.
ಭಕ್ತರ ಮುಗಿಬೀಳುವಿಕೆ ಇಲ್ಲ: ನವರಾತ್ರಿ ಸಂದರ್ಭ ಪ್ರತಿ ದಿನ ಕನಿಷ್ಠ 10 ಸಾವಿರಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆಯುವ ವಾಡಿಕೆ ಹಿಂದಿತ್ತು. ಅಗಾಧ ಸಂಖ್ಯೆಯಲ್ಲಿ ಬರುವ ವಾಹನಗಳ ಪಾರ್ಕಿಂಗ್ ಸವಾಲಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಹಿಂದಿನ ಸಂಭ್ರಮ ಇಲ್ಲ. ಭಕ್ತರ ಮುಗಿ ಬೀಳುವಿಕೆ, ವಾಹನ ದಟ್ಟಣೆ ಎಲ್ಲಿಯೂ ಇಲ್ಲ. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರು ಸಾವಕಾಶದಿಂದ ದೇವರ ದರ್ಶನ ಪಡೆಯಬಹುದಾಗಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ಅನ್ನಪ್ರಸಾದ ಸಹಿತ ಎಲ್ಲ ಸೇವೆ ಆರಂಭ
'ನವರಾತ್ರಿ ಉತ್ಸವ ನಿಮಿತ್ತ ಭಕ್ತರ ಅನುಕೂಲಕ್ಕಾಗಿ ಎಲ್ಲ ಏರ್ಪಾಟು ಮಾಡಿದ್ದೇವೆ. ಭಕ್ತರು ಕೋವಿಡ್ ನಿಯಮಾವಳಿ ಪಾಲಿಸಲು ಮುಂದಾಗಬೇಕು. ದೇವರ ದರ್ಶನ ವೇಳೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ದರ್ಶನ ಪಡೆಯುವ ಬಗ್ಗೆ ಸ್ವಯಂ ಚಿಂತನೆ ಮಾಡಬೇಕು. ಮಾಸ್ಕ್ ಧರಿಸದೆ ಇದ್ದವರನ್ನು ಪ್ರವೇಶಿಸಲು ಬಿಡುತ್ತಿಲ್ಲ' ಎಂದು ದೇವಳದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಹೇಳಿದ್ದಾರೆ.
ಕೊಲ್ಲೂರು ದೇವಳದ ಆನೆ ಇಂದಿರಾ ಇನ್ನಿಲ್ಲ
'ನಮ್ಮ ರಾಜ್ಯದ ನಾನಾ ಕಡೆಯ ಭಕ್ತರು ಆಗಮಿಸುತ್ತಿದ್ದಾರೆ. ಕೇರಳದಿಂದ ಅತಿ ಹೆಚ್ಚಿನ ಭಕ್ತರು ಬರುವ ಕ್ಷೇತ್ರ ಇದಾಗಿದೆ. ಆದರೆ ಕೇರಳದಿಂದ ಭಕ್ತರು ಬಾರದೆ ಇರುವುದರಿಂದ ವಹಿವಾಟು ಇನ್ನೂ ಚೇತರಿಕೆ ಕಂಡಿಲ್ಲ. ಲಾಕ್ಡೌನ್ ಮುಗಿದ ಬಳಿಕ ನಿಧಾನ ಒಂದೊಂದೇ ಅಂಗಡಿ ತೆರೆದುಕೊಳ್ಳುತ್ತಿದೆ. ಮುಂದೆ ಕಾದು ನೋಡಬೇಕು' ಎನ್ನುತ್ತಾರೆ, ಅಂಗಡಿ ವ್ಯಾಪಾರಿಗಳು.
ಇದೇ ವೇಳೆ ಮಾತನಾಡಿದ ಅರ್ಚಕ ಕುಟುಂಬದ ವಿಶ್ವನಾಥ ಅಡಿಗ ಅವರು, 'ಕೋವಿಡ್ನಿಂದಾಗಿ ನಿರೀಕ್ಷೆಯ ಭಕ್ತರ ಪ್ರಮಾಣ ಇಲ್ಲ. ಕೋವಿಡ್ ನಡುವೆಯೂ ಬರುತ್ತಿರುವ ಭಕ್ತರ ಸಂಖ್ಯೆ ಅವಲೋಕಿಸಿದಾಗ ದೊಡ್ಡದೆ ಎನ್ನಬೇಕು. ಅನ್ಯ ರಾಜ್ಯದ ಭಕ್ತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಇದರಿಂದ ಕೊಲ್ಲೂರಿನ ವಹಿವಾಟು ಸಹಿತ ಎಲ್ಲ ಚಟುವಟಿಕೆಗಳಿಗೆ ಏಟು ಬಿದ್ದಿದೆ. ಹಿಂದಿನ ದಿನಗಳು ಮತ್ತೆ ಬರಲಿ. ಕೋವಿಡ್ ಜಗತ್ತಿನಿಂದಲೇ ಮರೆಯಾಗಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ' ಎಂದು ಹಾರೈಸಿದರು.
ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ವಿಶೇಷ ಪ್ಯಾಕೇಜ್