ಆ್ಯಪ್ನಗರ

ನೇರಳಕಟ್ಟೆ: ಬಾವಿಗೆ ಬಿದ್ದ ಚಿರತೆ ರಕ್ಷ ಣೆ

ಗುಲ್ವಾಡಿ ಗ್ರಾಮದ ಮದಗ ಶೀನ ಪೂಜಾರಿಯವರ ಮನೆಯಂಗಳದಲ್ಲಿರುವ ಬಾವಿಗೆ ಶುಕ್ರವಾರ ರಾತ್ರಿ ಚಿರತೆ ಬಿದ್ದಿದ್ದು, ಶನಿವಾರ ಬೆಳಗ್ಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌ ಹಾಗೂ ಕರ್ಕುಂಜೆ ಉಪ ವಲಯ ಅರಣ್ಯಾಧಿಕಾರಿ ಹೇಮಾ ಅವರ ತಂಡ ಸ್ಥಳಕ್ಕಾಗಮಿಸಿ ಬೋನಿನ ಮೂಲಕ ಚಿರತೆ ಹಿಡಿಯುವಲ್ಲಿ ಯಶಸ್ವಿಯಾದರು.

Vijaya Karnataka 17 Mar 2019, 5:00 am
ವಂಡ್ಸೆ: ಗುಲ್ವಾಡಿ ಗ್ರಾಮದ ಮದಗ ಶೀನ ಪೂಜಾರಿಯವರ ಮನೆಯಂಗಳದಲ್ಲಿರುವ ಬಾವಿಗೆ ಶುಕ್ರವಾರ ರಾತ್ರಿ ಚಿರತೆ ಬಿದ್ದಿದ್ದು, ಶನಿವಾರ ಬೆಳಗ್ಗೆ ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌ ಹಾಗೂ ಕರ್ಕುಂಜೆ ಉಪ ವಲಯ ಅರಣ್ಯಾಧಿಕಾರಿ ಹೇಮಾ ಅವರ ತಂಡ ಸ್ಥಳಕ್ಕಾಗಮಿಸಿ ಬೋನಿನ ಮೂಲಕ ಚಿರತೆ ಹಿಡಿಯುವಲ್ಲಿ ಯಶಸ್ವಿಯಾದರು.
Vijaya Karnataka Web KDP-16vnd chirate


ಬೆಳಗ್ಗೆ 7ರ ಸುಮಾರಿಗೆ ಮಾಹಿತಿ ಬಂದ ತಕ್ಷ ಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯವರು ಸತತ 2 ಗಂಟೆ ವರೆಗೆ ಕಾರ್ಯಾಚರಣೆ ನಡೆಸಿ ಚಿರತೆ ಹಿಡಿದರು. ಸುಮಾರು 20 ಅಡಿಗಳಷ್ಟು ಆಳದ ಬಾವಿಯಲ್ಲಿ ಬೋನನ್ನು ಇಳಿಸಿ ಸ್ಥಳೀಯರ ಸಹಕಾರದಲ್ಲಿ ಸುಮಾರು 4ರ ಹರೆಯದ ಚಿರತೆ ಬಂಧಿಸಲಾಯಿತು. ನಂತರ ಮೀಸಲು ಅರಣ್ಯಕ್ಕೆ ಚಿರತೆ ಬಿಡಲಾಯಿತು. ಅರಣ್ಯ ರಕ್ಷ ಕರಾದ ಶಿವು, ನಯನ , ಬಸವರಾಜ್‌, ಬಂಗಾರಪ್ಪ, ಹರಿಪ್ರಸಾದ್‌, ಶಂಕರ್‌, ವಿ. ಮಂಜು, ಮಂಜುನಾಥ, ಉದಯ, ಶ್ರುತಿ, ಉಪ ವಲಯ ಅರಣ್ಯಾಧಿಕಾರಿ ದಿಲೀಪ ಕುಮಾರ್‌, ಸ್ಥಳೀಯರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹೆಚ್ಚಿದ ಚಿರತೆ ಕಾಟ: ಕಾಡು ಪ್ರದೇಶ ಬಿಟ್ಟು ಊರಿನ ಒಳಗೆ ನುಸುಳುತ್ತಿರುವ ಚಿರತೆಗಳು ಇಂದು ಗ್ರಾಮೀಣ ಭಾಗದ ಮನೆಯಂಗಳಕ್ಕೆ ಆಗಮಿಸುತ್ತಿದ್ದು ಭಯದಲ್ಲಿ ಜನರು ಬದುಕುವ ಪರಿಸ್ಥಿತಿ ಎದುರಾಗಿದೆ. ಸಾಕುಪ್ರಾಣಿಗಳ ಮೇಲೆ ಅಲ್ಲದೆ, ಮನುಷ್ಯರ ಮೇಲೂ ಕೂಡ ಚಿರತೆ ದಾಳಿ ಮಾಡುತ್ತಿದ್ದು, ಕಾಡಿನಂಚಿನಲ್ಲಿರುವ ಜನರು ರಾತ್ರಿ-ಹಗಲು ಭಯ ಪಡುವಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ