ಆ್ಯಪ್ನಗರ

ಕುಮಾರಸ್ವಾಮಿ, ದೇವೇಗೌಡ ಜತೆಗೆ ರೆಸಾರ್ಟ್‌ ಸೇರಿದ ನಿಖಿಲ್‌

ಕೊಪ್ಪದಲ್ಲಿ ನಡೆಯುವ ಪೂಜೆ, ಹೋಮ ಹವನದ ಬಳಿಕ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್‌ ಬೆಂಗಳೂರಿಗೆ ತೆರಳಲಿದ್ದಾರೆ. ಆದರೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ಸಾಯಿರಾಧಾ ಹೆಲ್ತ್‌ ರೆಸಾರ್ಟ್‌ಗೆ ವಾಪಸಾಗಲಿದ್ದಾರೆ.

Vijaya Karnataka Web 3 May 2019, 9:19 pm
ಉಡುಪಿ: ಐದು ದಿನಗಳ ಆಯುರ್ವೇದ ಪಂಚಕರ್ಮ ಚಿಕಿತ್ಸೆ ಮುಗಿಸಿದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೊಪ್ಪಕ್ಕೆ ತೆರಳಲಿದ್ದು, ಪುತ್ರ ನಿಖಿಲ್‌ ಕುಮಾರಸ್ವಾಮಿ ಜತೆಯಾಗಲಿದ್ದಾರೆ.
Vijaya Karnataka Web ನಿಖಿಲ್‌ ಕುಮಾರಸ್ವಾಮಿ
ನಿಖಿಲ್‌ ಕುಮಾರಸ್ವಾಮಿ


ಉಡುಪಿಯ ಮೂಳೂರಿನ ಸಾಯಿರಾಧಾ ಹೆಲ್ತ್‌ ರೆಸಾರ್ಟ್‌ಗೆ ಶುಕ್ರವಾರ ಬೆಳಗ್ಗೆ ಆಗಮಿಸಿದ ನಿಖಿಲ್‌, ಅಪ್ಪ ಕುಮಾರಸ್ವಾಮಿ ಪಡೆದ ಪಂಚಕರ್ಮ ಚಿಕಿತ್ಸೆ ಹಾಗೂ ಅಜ್ಜ ಎಚ್‌.ಡಿ. ದೇವೇಗೌಡರಿಗೆ ನಡೆಸಿದ ಮಸಾಜ್‌ನಿಂದ ಆರೋಗ್ಯದ ಮೇಲೆ ಬೀರಿದ ಪರಿಣಾಮದ ಕುರಿತು ವಿಚಾರಿಸಿದ್ದಾರೆ.

ಕೊಪ್ಪದಲ್ಲಿ ನಡೆಯುವ ಪೂಜೆ, ಹೋಮ ಹವನದ ಬಳಿಕ ಸಿಎಂ ಕುಮಾರಸ್ವಾಮಿ ಹಾಗೂ ನಿಖಿಲ್‌ ಬೆಂಗಳೂರಿಗೆ ತೆರಳಲಿದ್ದಾರೆ. ಆದರೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಸಾಯಿರಾಧಾ ಹೆಲ್ತ್‌ ರೆಸಾರ್ಟ್‌ಗೆ ವಾಪಸಾಗಲಿದ್ದಾರೆ.

ಎಚ್‌.ಡಿ. ದೇವೇಗೌಡ ಅವರಿಗೆ ಮೇ 7ರ ಅಕ್ಷಯ ತೃತೀಯಾ ತನಕ ಮೊಣಕಾಲಿನ ಗಂಟಿಗೆ ಮಸಾಜ್‌ ಮುಂದುವರಿಯಲಿದೆ. ದೇವೇಗೌಡರು ಮೇ 7ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ತೆರಳಿ ಪೂಜೆ, ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರನ್ನು ಭೇಟಿ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ