ಆ್ಯಪ್ನಗರ

ನೀಲಾವರ ಗೋಶಾಲೆ ಈ ನಾಡಿನ ನಂದಗೋಕುಲ: ಸೋಸಲೆ ಶ್ರೀ

ಕಲಿಯುಗದ ವರ್ತಮಾನದಲ್ಲಿ ಶ್ರೀ ಪೇಜಾವರ ಕಿರಿಯ ಶ್ರೀಗಳು ತಮ್ಮಗುರುಗಳ ಅನುಗ್ರಹದೊಂದಿಗೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸಾವಿರಾರು ಗೋವುಗಳಿಗೆ ಆಶ್ರಯ ನೀಡುತ್ತಿರುವ ನೀಲಾವರದ ಗೋಶಾಲೆ ಈ ನಾಡಿನ ನಂದಗೋಕುಲವಾಗಿದೆ ಎಂದು ನಾಡಿನ ಪ್ರಸಿದ್ಧ ಮಾಧ್ವ ಪೀಠಗಳಲ್ಲೊಂದಾಗಿರುವ ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.

Vijaya Karnataka 1 Apr 2019, 5:00 am
ಮಂದಾರ್ತಿ: ಕಲಿಯುಗದ ವರ್ತಮಾನದಲ್ಲಿ ಶ್ರೀ ಪೇಜಾವರ ಕಿರಿಯ ಶ್ರೀಗಳು ತಮ್ಮಗುರುಗಳ ಅನುಗ್ರಹದೊಂದಿಗೆ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸಾವಿರಾರು ಗೋವುಗಳಿಗೆ ಆಶ್ರಯ ನೀಡುತ್ತಿರುವ ನೀಲಾವರದ ಗೋಶಾಲೆ ಈ ನಾಡಿನ ನಂದಗೋಕುಲವಾಗಿದೆ ಎಂದು ನಾಡಿನ ಪ್ರಸಿದ್ಧ ಮಾಧ್ವ ಪೀಠಗಳಲ್ಲೊಂದಾಗಿರುವ ಶ್ರೀ ಸೋಸಲೆ ವ್ಯಾಸರಾಜ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
Vijaya Karnataka Web UDP-31mm neelavara


ನೀಲಾವರ ಗೋಶಾಲೆಯಲ್ಲಿ ಗುರುವಾರ ತಮ್ಮ ಪಟ್ಟದ ದೇವರಾದ ಶ್ರೀ ವೇಣುಗೋಪಾಲ ಕೃಷ್ಣ ದೇವರ ಪೂಜೆ ನಡೆಸಿ ಭಿಕ್ಷೆ ಸ್ವೀಕರಿಸಿ ಭಕ್ತರಿಗೆ ಸಂದೇಶ ನೀಡಿದರು.

ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂದೇಶ ನೀಡಿದರು.

ಮಠದ ದಿವಾನ ಎಂ. ರಘುರಾಮಾಚಾರ್ಯ, ಗೋವರ್ಧನಗಿರಿ ಟ್ರಸ್ಟ್‌ನ ವ್ಯವಸ್ಥಾಪಕ ರಘುರಾಮಾಚಾರ್ಯ, ವಿಶ್ವಸ್ಥ ಗುರುಗಳಾದ ಜಲಂಚಾರು ರಘುಪತಿ ತಂತ್ರಿ, ಎಂ. ಲಕ್ಷ್ಮೀನಾರಾಯಣ ರಾವ್‌, ಅರ್ಚಕ ಪವನಾಚಾರ್ಯ, ಶ್ರೀಗಳವರ ಕಾರ್ಯದರ್ಶಿ ಕೃಷ್ಣ ಭಟ್‌ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ