ಆ್ಯಪ್ನಗರ

ತೈಲ ಜಿಡ್ಡು ಮಾದರಿ ಸುರತ್ಕಲ್‌ ಎನ್‌ಐಟಿಕೆಗೆ ರವಾನೆ

ಕರಾವಳಿ ಕಡಲ ತೀರದಲ್ಲಿ ಕಳೆದೊಂದು ವಾರದಿಂದ ಪತ್ತೆಯಾಗುತ್ತಿರುವ ತೈಲ ಜಿಡ್ಡು (ಟಾರ್‌ ಬಾಲ್ಸ್‌) ಮಾದರಿಯನ್ನು ಪಡುಬಿದ್ರಿಯಲ್ಲಿ ಸಂಗ್ರಹಿಸಿ ಅಧ್ಯಯನಕ್ಕಾಗಿ ಸುರತ್ಕಲ್‌ ಎನ್‌ಐಟಿಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

Vijaya Karnataka 31 May 2019, 5:00 am
ಉಡುಪಿ: ಕರಾವಳಿ ಕಡಲ ತೀರದಲ್ಲಿ ಕಳೆದೊಂದು ವಾರದಿಂದ ಪತ್ತೆಯಾಗುತ್ತಿರುವ ತೈಲ ಜಿಡ್ಡು (ಟಾರ್‌ ಬಾಲ್ಸ್‌) ಮಾದರಿಯನ್ನು ಪಡುಬಿದ್ರಿಯಲ್ಲಿ ಸಂಗ್ರಹಿಸಿ ಅಧ್ಯಯನಕ್ಕಾಗಿ ಸುರತ್ಕಲ್‌ ಎನ್‌ಐಟಿಕೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
Vijaya Karnataka Web 2


ಮಂಗಳೂರಿನಿಂದ ಕಾರವಾರದ ತನಕ ಕಡಲ ತೀರದ ಅಲ್ಲಲ್ಲಿ ಅಪಾಯಕಾರಿ ತೈಲ ಜಿಡ್ಡು ಕಂಡು ಬರುತ್ತಿದ್ದು ಸ್ಥಳೀಯರು, ಮೀನುಗಾರರು, ಪ್ರವಾಸಿಗರಲ್ಲಿ ಪರಿಸರ ಸಹಿತ ಆರೋಗ್ಯದ ಮೇಲೆ ಪರಿಣಾಮದ ಆತಂಕ ಎದುರಾಗಿದೆ.

ಮಲ್ಪೆಯ ವಡಭಾಂಡೇಶ್ವರ ಕಡಲತೀರದಲ್ಲಿ ಅಪಾರ ಪ್ರಮಾಣದಲ್ಲಿ ತೈಲ ಜಿಡ್ಡು, ಕಂಡು ಬಂದಿದ್ದು 50ಕೆ. ಜಿ. ಗೂ ಅಧಿಕ ಪ್ರಮಾಣದಲ್ಲಿ ಬುಧವಾರ, ಗುರುವಾರ ಸಂಗ್ರಹಿಸಿ ಸುರಕ್ಷಿತ ಸ್ಥಳದಲ್ಲಿ ದಾಸ್ತಾನಿಡಲಾಗಿದೆ.

ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾಡಳಿತ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಮಲ್ಪೆ ಅಭಿವೃದ್ಧಿ ಸಮಿತಿ ಕೈಜೋಡಿಸಿದೆ. ಆಳ ಸಮುದ್ರದಲ್ಲಿ ಹಡಗುಗಳಿಂದ ಚೆಲ್ಲಿದ ಲಿಕ್ವಿಡ್‌ ಪೆಟ್ರೋಲಿಯಂ ಹೈಡ್ರೋಕಾರ್ಬನ್‌ನಿಂದಾಗಿ ತೈಲ ಜಿಡ್ಡು ಕಡಲತೀರಕ್ಕೆ ನೀರ ಜತೆಗೆ ಬಂದಿರಬಹುದೆಂದು ಶಂಕಿಸಲಾಗಿದೆ.

ಕಡಲ ಮೀನುಗಳು, ಕಡಲ ತೀರಕ್ಕೆ ಮೊಟ್ಟೆಯಿಡಲು ಬರುವ ಆಮೆಗಳ ಮೇಲೆ ತೈಲ ಜಿಡ್ಡು ತೀವ್ರ ಪರಿಣಾಮ ಬೀರಲಿದೆ. ಬೀಜಾಡಿ, ಮಣೂರು, ಪಡುಕರೆ, ಕೋಡಿ ಕನ್ಯಾಣ, ಮಲ್ಪೆ, ಕಾಪುವಿನಲ್ಲಿ ತೈಲ ಜಿಡ್ಡು ಸಮಸ್ಯೆ ಕಂಡು ಬಂದಿದೆ.

ಮರಳುಗಾರಿಕೆ, ಮೀನುಗಾರಿಕೆಗೆ ಜೂ. 1ರಿಂದ ನಿಷೇಧವಿದೆ. ಆ. 1ರಿಂದ ಆರಂಭವಾಗುವ ಮೀನುಗಾರಿಕೆ ಮೇಲೆ ಪರಿಣಾಮ ಬೀರುವ ಆತಂಕವು ಈಗಾಗಲೇ ಮತ್ಸ್ಯ ಕ್ಷಾಮದ ಸಮಸ್ಯೆ ಎದುರಿಸುತ್ತಿರುವ ಮೀನುಗಾರರಲ್ಲಿದೆ.

*ಸುರತ್ಕಲ್‌ ಎನ್‌ಐಟಿಕೆಗೆ ಮೇ 28ರಂದು ತೈಲ ಜಿಡ್ಡಿನ ಉಂಡೆಗಳ ಮಾದರಿಯನ್ನು ಕಳುಹಿಸಿದ್ದು ಅಧ್ಯಯನ ನಡೆಸಿ ನೀಡುವ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆಳಸಮುದ್ರದಲ್ಲಿ ಹಡಗುಗಳಿಂದ ಚೆಲ್ಲಿರಬಹುದಾದ ತೈಲ ಕಡಲತೀರಕ್ಕೆ ಬಂದಿರಬಹುದೆನ್ನುವ ಶಂಕೆಯಿದ್ದರೂ ಅಧ್ಯಯನ ವರದಿಯಿಂದ ವಾಸ್ತವ ಏನೆನ್ನುವುದು ನಿಖರವಾಗಲಿದೆ.

ಡಾ. ಲಕ್ಷ್ಮಿಕಾಂತ್‌, ಪರಿಸರ ಅಧಿಕಾರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಮಣಿಪಾಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ