ಕಾರ್ಕಳ: ಕಾರ್ಕಳ ಪುರಸಭೆಯ ಒಳಚರಂಡಿಯ ನೀರು ಹವಾಲ್ದಾರಬೆಟ್ಟು ಪ್ರದೇಶದಲ್ಲಿ ಶೇಖರಣೆಯಾಗಿ ದುರ್ನಾತ ಬೀರುತ್ತಿದ್ದು ಪರಿಸರ ಮಾಲಿನ್ಯದಿಂದ ಸಂತ್ರಸ್ತರಾದ ಸ್ಥಳೀಯರು, ಸಮಸ್ಯೆ ಪರಿಹಾರಕ್ಕಾಗಿ ಶಾಸಕ ವಿ.ಸುನಿಲ್ ಕುಮಾರ್ ಅವರಲ್ಲಿ ಮನವಿ ಸಲ್ಲಿಸಿದರು.
ಈ ಸಮಯದಲ್ಲಿ ಸಮಸ್ಯೆ ಬಗ್ಗೆ ಮಾತನಾಡಿದ ಸ್ಥಳೀಯರು ಸುಮಾರು 25 ವರ್ಷಗಳಿಂದ ಒಳ ಚರಂಡಿಯಿಂದ ಬಂದ ಕೊಳಚೆ ಹಾಗೂ ನೀರು ಶೇಖರಣೆಯಿಂದ ಸಾಂಕ್ರಮಿಕ ರೋಗಗಳಾದ ಮಲೇರಿಯಾ, ಡೆಂಗೆ ಮತ್ತಿತರ ರೋಗಕ್ಕೆ ತುತ್ತಾಗಿದ್ದಾರೆ. ಅಲ್ಲದೇ ನೂರಾರು ವರ್ಷಗಳಿಂದ ವಾಸ ಮಾಡುತ್ತಿದ್ದ ಸ್ಥಳಿಯರಿಗೆ ದುರ್ವಾಸನೆಯಿಂದ ತೊಂದರೆಯಾಗಿರುವುದು, ಕುಡಿಯುವ ನೀರಿನ ಬಾವಿಗೆ ಕಲುಷಿತ ನೀರು ಬಂದು ಬಾವಿಗಳು ದುರ್ನಾತದಿಂದ ಕೂಡಿರುವುದು, ಸಮೀಪದಲ್ಲೇ ಇರುವ ಪ್ರತಿಷ್ಠಿತ ಕಟ್ಟೆಮಾರು ನಾಗ ಬ್ರಹ್ಮಸ್ಥಾನ ಹಾಗೂ ಪಂಚ ದೈವಿಕ ಕೂಡಾ ಈ ಒಳಚರಂಡಿಯ ತ್ಯಾಜ್ಯ ನೀರಿನಿಂದ ಅಪವಿತ್ರಗೊಂಡಿದೆ ಎಂದು ಸ್ಥಳೀಯರು ದೂರಿದರು.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಶೀಘ್ರದಲ್ಲೇ ಒಳಚರಂಡಿಯ ಶೇಖರಣೆ ಆಗುವ ನೀರಿನ ರಿಸೈಕ್ಲಿಂಗ್ ಟ್ರೀಟ್ಮೆಂಟ್ ಪ್ಲಾಂಟ್ ಮಾಡಿಸಿ ನಿಮ್ಮ 25 ವರ್ಷಗಳ ಸಮಸ್ಯೆಗೆ ಕಾಯಕಲ್ಪ ಮಾಡಿ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ನಗರಾಧ್ಯಕ್ಷ ಅನಂತ ಕೃಷ್ಣ ಶೆಣೈ, ಬಿಜೆಪಿ ವಕ್ತಾರ ಕೆ.ಎಸ್ ಹರೀಶ್ ಶೆಣೈ, ಸ್ಥಳೀಯರಾದ ನವೀನ್ ಚಂದ್ರ ಶೆಟ್ಟಿ, ರಮೇಶ್ ಕುಡ್ವ, ರತ್ನಾಕರ ಆಚಾರ್ಯ, ಕೃಷ್ಣದಾಸ ಶೆಣೈ, ಪುರಸಭೆ ಸದಸ್ಯರಾದ ಶೋಭ ದೇವಾಡಿಗ, ಪೂರ್ಣಿಮಾ, ಮಾಜಿ ಪುರಸಭಾ ಸದಸ್ಯ ಅಕ್ಷ ಯ್ ರಾವ್, ಸನತ್, ಗಿರೀಶ ದೇವಾಡಿಗ, ವೆಂಕಟೇಶ ಕುಡ್ವ, ಶೋಭಾ ಆಚಾರ್ಯ, ಉದಯ ಕಾಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಸಮಸ್ಯೆ ಬಗ್ಗೆ ಮಾತನಾಡಿದ ಸ್ಥಳೀಯರು ಸುಮಾರು 25 ವರ್ಷಗಳಿಂದ ಒಳ ಚರಂಡಿಯಿಂದ ಬಂದ ಕೊಳಚೆ ಹಾಗೂ ನೀರು ಶೇಖರಣೆಯಿಂದ ಸಾಂಕ್ರಮಿಕ ರೋಗಗಳಾದ ಮಲೇರಿಯಾ, ಡೆಂಗೆ ಮತ್ತಿತರ ರೋಗಕ್ಕೆ ತುತ್ತಾಗಿದ್ದಾರೆ. ಅಲ್ಲದೇ ನೂರಾರು ವರ್ಷಗಳಿಂದ ವಾಸ ಮಾಡುತ್ತಿದ್ದ ಸ್ಥಳಿಯರಿಗೆ ದುರ್ವಾಸನೆಯಿಂದ ತೊಂದರೆಯಾಗಿರುವುದು, ಕುಡಿಯುವ ನೀರಿನ ಬಾವಿಗೆ ಕಲುಷಿತ ನೀರು ಬಂದು ಬಾವಿಗಳು ದುರ್ನಾತದಿಂದ ಕೂಡಿರುವುದು, ಸಮೀಪದಲ್ಲೇ ಇರುವ ಪ್ರತಿಷ್ಠಿತ ಕಟ್ಟೆಮಾರು ನಾಗ ಬ್ರಹ್ಮಸ್ಥಾನ ಹಾಗೂ ಪಂಚ ದೈವಿಕ ಕೂಡಾ ಈ ಒಳಚರಂಡಿಯ ತ್ಯಾಜ್ಯ ನೀರಿನಿಂದ ಅಪವಿತ್ರಗೊಂಡಿದೆ ಎಂದು ಸ್ಥಳೀಯರು ದೂರಿದರು.
ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದ ಶಾಸಕರು ಶೀಘ್ರದಲ್ಲೇ ಒಳಚರಂಡಿಯ ಶೇಖರಣೆ ಆಗುವ ನೀರಿನ ರಿಸೈಕ್ಲಿಂಗ್ ಟ್ರೀಟ್ಮೆಂಟ್ ಪ್ಲಾಂಟ್ ಮಾಡಿಸಿ ನಿಮ್ಮ 25 ವರ್ಷಗಳ ಸಮಸ್ಯೆಗೆ ಕಾಯಕಲ್ಪ ಮಾಡಿ ಕೊಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ನಗರಾಧ್ಯಕ್ಷ ಅನಂತ ಕೃಷ್ಣ ಶೆಣೈ, ಬಿಜೆಪಿ ವಕ್ತಾರ ಕೆ.ಎಸ್ ಹರೀಶ್ ಶೆಣೈ, ಸ್ಥಳೀಯರಾದ ನವೀನ್ ಚಂದ್ರ ಶೆಟ್ಟಿ, ರಮೇಶ್ ಕುಡ್ವ, ರತ್ನಾಕರ ಆಚಾರ್ಯ, ಕೃಷ್ಣದಾಸ ಶೆಣೈ, ಪುರಸಭೆ ಸದಸ್ಯರಾದ ಶೋಭ ದೇವಾಡಿಗ, ಪೂರ್ಣಿಮಾ, ಮಾಜಿ ಪುರಸಭಾ ಸದಸ್ಯ ಅಕ್ಷ ಯ್ ರಾವ್, ಸನತ್, ಗಿರೀಶ ದೇವಾಡಿಗ, ವೆಂಕಟೇಶ ಕುಡ್ವ, ಶೋಭಾ ಆಚಾರ್ಯ, ಉದಯ ಕಾಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.