ಆ್ಯಪ್ನಗರ

ಮದುವೆಗೆ ಒಂದೇ ದಿನ ರಜೆ: ಡಿ.ಸಿ.ಗೆ ಸಚಿವರ ಶ್ಲಾಘನೆ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಒಂದು ದಿನ ಮಾತ್ರ ಕಚೇರಿಗೆ ರಜೆ ಹಾಕಿ ಮಾದರಿಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಶ್ಲಾಘಿಸಿದ್ದಾರೆ.

Vijaya Karnataka 7 Mar 2019, 5:00 am
ಉಡುಪಿ: ವೈವಾಹಿಕ ಜೀವನಕ್ಕೆ ಕಾಲಿಟ್ಟ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಒಂದು ದಿನ ಮಾತ್ರ ಕಚೇರಿಗೆ ರಜೆ ಹಾಕಿ ಮಾದರಿಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲ ಶ್ಲಾಘಿಸಿದ್ದಾರೆ.
Vijaya Karnataka Web one day leave for marriage minister appreciated for dc
ಮದುವೆಗೆ ಒಂದೇ ದಿನ ರಜೆ: ಡಿ.ಸಿ.ಗೆ ಸಚಿವರ ಶ್ಲಾಘನೆ


ಅವರು ಮಣಿಪಾಲದ ರಜತಾದ್ರಿಯಲ್ಲಿರುವ ಜಿ.ಪಂ.ನ ಡಾ.ವಿ.ಎಸ್‌. ಆಚಾರ್ಯ ಸ್ಮಾರಕ ಸಭಾಂಗಣದಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಡಿ.ಸಿ. ಅವರ ಕರ್ತವ್ಯ ನಿಷ್ಠೆ ಶ್ಲಾಘಿಸಿ, ವೈವಾಹಿಕ ಜೀವನಕ್ಕೆ ಶುಭ ಹಾರೈಸಿದರು.

ಜಿಲ್ಲಾಡಳಿತದ ಅತ್ಯುನ್ನತ ಹುದ್ದೆಗಳಾದ ಡಿಸಿ, ಸಿಇಒ, ಎಸ್‌ಪಿ ಹುದ್ದೆಗಳನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಕಾಪು ಶಾಸಕ ಲಾಲಾಜಿ ಮೆಂಡನ್‌ ಕೂಡ ಜಿಲ್ಲಾಧಿಕಾರಿ ಅವರಿಗೆ ಶುಭ ಹಾರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ