ಆ್ಯಪ್ನಗರ

ಆನ್‍ಲೈನ್ ವ್ಯವಹಾರ ನಂಬಿ ಕೈ ಸುಟ್ಟುಕೊಂಡ ಉಡುಪಿ ಮಹಿಳೆ

ಪತಂಜಲಿ ಚಿಕಿತ್ಸಾಲಯದ ನೋಂದಾಣಿ ಹೆಸರಿನಲ್ಲಿ 7.75 ಲಕ್ಷ ರೂ. ಪಂಗನಾಮ

Vijaya Karnataka Web 26 Nov 2018, 9:08 pm
ಉಡುಪಿ: ಆನ್‍ಲೈನ್‍ನಲ್ಲಿ ಪತಂಜಲಿ ಚಿಕಿತ್ಸಾಲಯದ ವ್ಯವಹಾರದ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ತಮ್ಮ ಖಾತೆಗೆ 7,75,000 ರೂ. ಜಮಾ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿದೆ ಬಂದಿದೆ.
Vijaya Karnataka Web online


ಕುಂದಾಪುರ ಕೋಟೇಶ್ವರದ ಪ್ರಶಾಂತಿ ನಿಕೇತನ ನಿವಾಸಿ ಅನುರಾಧ ಹೊಳ್ಳ (39) ವಂಚಕರನ್ನು ನಂಬಿ ಹಣ ಕಳೆದುಕೊಂಡು ಕೈ ಸುಟ್ಟುಕೊಂಡವರು.

ಅನುರಾಧ ಹೊಳ್ಳ ಪತಂಜಲಿ ಚಿಕಿತ್ಸಾಲಯದ ವ್ಯವಹಾರಕ್ಕಾಗಿ 2018, ಆ. 9 ರಂದು ವೆಬ್ ಸೈಟ್‍ನಲ್ಲಿ ಆನ್‍ಲೈನ್ ಮುಖೇನ ಪತಂಜಲಿ ಚಿಕಿತ್ಸಾಲಯಕ್ಕೆ ನೊಂದಣಿ ಮಾಡಿಕೊಂಡಿದ್ದರು. 2 ದಿನಗಳ ಬಳಿಕ ಕರೆ ಮಾಡಿ ವ್ಯವಹಾರದ ಮುಂದಿನ ಹಂತಕ್ಕೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಭಾವಚಿತ್ರದ ವಾಟ್ಸ್‌ಆ್ಯಪ್‌ ಮಾಡುವಂತೆ ಸೂಚಿಸಿದ್ದರು.

ಇದಾದ ಬಳಿಕ ಆ. 13 ರಂದು ವ್ಯವಹಾರದ ನೋಂದಣಿಗಾಗಿ 50,000 ರೂ. ಖಾತೆಗೆ ಪಾವತಿಸುವಂತೆ ಸೂಚಿಸಿದ್ದು, ಆ. 23 ರಂದು ಜಮಾ ಮಾಡಲಾಗಿತ್ತು. ಸೆಕ್ಯೂರಿಟಿ ಡಿಸಾಸೆಟ್‍ಗಾಗಿ ಸೆ. 1 ರಂದು 2,30,000 ರೂ., ಜಮಾ ಮಾಡಿದ್ದರು. ಬಳಿಕ ವ್ಯವಹಾರ ಪ್ರಗತಿಯಲ್ಲಿರುವುದಾಗಿ ನಂಬಿಸಿ, ಸೆ. 12 ರಂದು ಮತ್ತೆ ಕರೆ ಮಾಡಿ ಅರ್ಯುವೇದ ಸಾಮಾನು ಖರೀದಿಗಾಗಿ 2,50,000 ರೂ. ನೀಡುವಂತೆ ಕೇಳಿದ್ದು, ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

ಸೆ. 15 ರಂದು ಯೋಗ ತರಬೇತಿ ಸೆಕ್ಯೂರಿಟಿ ಡಿಪಾಸಿಟ್‍ಗಾಗಿ 1,10,000 ರೂ. ಹಾಗೂ ಅ. 26 ರಂದು ಸಾಮಾನುಗಳ ಬಿಲ್ ಆಗಿದ್ದು, ವ್ಯಾಟ್ ತೆರಿಗೆ ಮೊತ್ತ 80,000 ರೂ. ಪಾವತಿಗೆ ತಿಳಿಸಿದ್ದರು. ಅ. 30 ರಂದು ಕರೆ ಮಾಡಿ ಸಾಮಾನು ಲಾರಿಯನ್ನು ತೆರಿಗೆ ಅಧಿಕಾರಿಗಳು ಹಿಡಿದು ದಂಡ ವಿಧಿಸಿರುವುದಾಗಿ ತಿಳಿಸಿದ್ದು, ಈ ಬಗ್ಗೆ 55,000 ರೂ. ಪಾವತಿಸುವಂತೆ ತಿಳಿಸಿದ್ದರು. ಅದನ್ನು ನಂಬಿದ ಹೊಳ್ಳ ಅವರು ಹಣ ಖಾತೆಗೆ ಜಮಾ ಮಾಡಿದ್ದರು.

ಇಷ್ಟೆಲ್ಲ ಹಣ ಪಡೆದ ಬಳಿಕಯಾವುದೇ ಸುದ್ದಿ ಇಲ್ಲದೇ ಇರುವುದರಿಂದ ಅನುಮಾನಗೊಂಡಿರುವ ಅನುರಾಧ ಹೊಳ್ಳ ಕರೆ ಮಾಡಿದಾಗ ಎಲ್ಲಾ ನಂಬರ್ ಸ್ತಬ್ಧಗೊಂಡಿವೆ. ಈ ವ್ಯವಹಾರಕ್ಕಾಗಿ ಅನುರಾಧ ಹೊಳ್ಳ ಒಟ್ಟು 7,75,000 ರೂ. ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ