ಆ್ಯಪ್ನಗರ

ಪಡುಬೆಳ್ಳೆ: 15 ಎಕರೆ ಪ್ರದೇಶ ಬೆಂಕಿಗಾಹುತಿ

ಕುರ್ಕಾಲು ಮತ್ತು ಬೆಳ್ಳೆ ಗ್ರಾಪಂ ವ್ಯಾಪ್ತಿಯ ಪಡುಬೆಳ್ಳೆ ಕಂಬ್ಳತೋಟ, ಬೆಳ್ಳೆ ಅಂಗಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಮಾರು 15 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ

Vijaya Karnataka 16 May 2019, 5:00 am
ಕಟಪಾಡಿ: ಕುರ್ಕಾಲು ಮತ್ತು ಬೆಳ್ಳೆ ಗ್ರಾಪಂ ವ್ಯಾಪ್ತಿಯ ಪಡುಬೆಳ್ಳೆ ಕಂಬ್ಳತೋಟ, ಬೆಳ್ಳೆ ಅಂಗಡಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ ಸುಮಾರು 15 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ.
Vijaya Karnataka Web benki


ನದಿ ಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕುರುಚಲು ಗಿಡ, ಪೊದೆ, ಮುಳಿ ಹುಲ್ಲುಗಳಿಗೆ ತಗುಲಿದ ಬೆಂಕಿ ಶೀಘ್ರ ಪರಿಸರದಲ್ಲಿ ವ್ಯಾಪಿಸಿದ್ದು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತು.

ಶಿರ್ವ ಪೊಲೀಸ್‌ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದೊಂದಿಗೆ ಮಧ್ವರಾಯ ಭಟ್‌, ವಿಶ್ವನಾಥ ಶೆಟ್ಟಿ, ಅಜಿತ್‌ ಶೆಟ್ಟಿ, ಸುದರ್ಶನ್‌ ರಾವ್‌, ಪುಂಡರೀಕಾಕ್ಷ ಭಟ್‌, ಗುರುರಾಜ್‌ ಭಟ್‌ ನೇತೃತ್ವದಲ್ಲಿ ಸ್ಥಳೀಯ ಯುವಕರು ಬೆಂಕಿ ನಂದಿಸುವಲ್ಲಿ ಶ್ರಮಿಸಿದರು.

ಬೆಳ್ಳೆಯಲ್ಲೂ ಬೆಂಕಿ:
ಬೆಳ್ಳೆ ಗ್ರಾಪಂ ವ್ಯಾಪ್ತಿಯ ಮೂಡುಬೆಳ್ಳೆ ಬೊಬ್ಬರ್ಯ ಕೆರೆ ಪ್ರದೇಶದಲ್ಲಿ ಬುಧವಾರ ಮುಳಿಹುಲ್ಲು ಪೊದೆಗಳಿಗೆ ಬೆಂಕಿ ಬಿದ್ದಿದೆ. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಪಿಡಿಒ ವಸಂತಿ ಬಾಯಿ, ಸಿಬ್ಬಂದಿಗಳಾದ ರೇಷ್ಮಾ ಅಜಿತ್‌ ಮತ್ತಿತರರು ಭೇಟಿ ನೀಡಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದೆ.

ಫೊಟೊ: 15ಎಚ್‌ಎ ಬೆಂಕಿ

ಪಡುಬೆಳ್ಳೆಯಲ್ಲಿ ಮಂಗಳವಾರ ರಾತ್ರಿ ಹತ್ತಿಕೊಂಡ ಬೆಂಕಿ.

ಫೊಟೋ: 15ಎಚ್‌ಎ ಬೆಂಕಿ2

ಮೂಡುಬೆಳ್ಳೆ ಪರಿಸರದಲ್ಲಿ ಬುಧವಾರ ಹತ್ತಿಕೊಂಡ ಬೆಂಕಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ