ಆ್ಯಪ್ನಗರ

ಭಯೋತ್ಪಾದಕ ಪಾಕ್ ಜಗತ್ತಿನ ಮುಂದೆ ಬೆತ್ತಲೆ: ಶೋಭಾ ಕರಂದ್ಲಾಜೆ

ಉಗ್ರರಿಗೆ ತರಬೇತಿ, ಶಸ್ತ್ರಾಸ್ತ್ರ ಒದಗಿಸಿದ್ದಲ್ಲದೆ ದಾವೂದ್ ಇಬ್ರಾಹಿಂ, ಮಸೂದ್ ಅಜರ್‌ನಂತಹ ನಟೋರಿಯಸ್‍ಗಳಿಗೆ ರಕ್ಷಣೆಯನ್ನು ಪಾಕ್ ನೀಡುತ್ತಿದ್ದು ವಿವಿಧ ರಾಷ್ಟ್ರಗಳ ವೇದಿಕೆಯಲ್ಲಿ ಭಾರತ ಪ್ರಸ್ತಾಪಿಸಿದೆ.

Vijaya Karnataka Web 1 Mar 2019, 6:05 pm
ಉಡುಪಿ: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಪ್ರತಿಪಕ್ಷಗಳು ಮಾಡಿದ ಟೀಕೆಯನ್ನು ಲೆಕ್ಕಿಸದೆ ಪಾಕ್ ಭಯೋತ್ಪಾದನೆಯನ್ನು ಜಗತ್ತಿನ ಮುಂದೆ ಅನಾವರಣ ಮಾಡುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
Vijaya Karnataka Web ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ


ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುಲ್ವಾಮಾ ಉಗ್ರ ದಾಳಿ ಬಳಿಕ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದ ವಾಯು ದಾಳಿ ಹಾಗೂ ಪಾಕ್ ಬಂಧನದಿಂದ ಅಭಿನಂದನ್ ಬಿಡುಗಡೆ ಭಾರತಕ್ಕೆ ದೊರೆತ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಿದರು.

ಉಗ್ರರಿಗೆ ತರಬೇತಿ, ಶಸ್ತ್ರಾಸ್ತ್ರ ಒದಗಿಸಿದ್ದಲ್ಲದೆ ದಾವೂದ್ ಇಬ್ರಾಹಿಂ, ಮಸೂದ್ ಅಜರ್‌ನಂತಹ ನಟೋರಿಯಸ್‍ಗಳಿಗೆ ರಕ್ಷಣೆಯನ್ನು ಪಾಕ್ ನೀಡುತ್ತಿದ್ದು ವಿವಿಧ ರಾಷ್ಟ್ರಗಳ ವೇದಿಕೆಯಲ್ಲಿ ಭಾರತ ಪ್ರಸ್ತಾಪಿಸಿದೆ. ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್‍ಗೆ ಬೆಂಬಲವೂ ವ್ಯಕ್ತವಾಗಿದೆ. ಊರೊಳಗೆ ಬರುವ ಭಯೋತ್ಪಾದಕರ ವಿರುದ್ಧ ಪ್ರಧಾನಿ ಮೋದಿ ಕೈಗೊಂಡಿದ್ದಾರೆ ಎಂದರು.

ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಪಾಕ್ ಭಯೋತ್ಪಾದನೆ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಪ್ರಧಾನಿ ಮೋದಿ ಉತ್ತರಕ್ಕೆ ಪ್ರತ್ಯುತ್ತರ ನೀಡುವ ಸಿಂಹದ ಮರಿ. ಪ್ರಧಾನಿ ವಿರುದ್ಧ ಸಿಎಂ ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದು ಸಲ್ಲದು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪುಲ್ವಾಮಾ ಘಟನೆ ಪಾಕ್ ಸೃಷ್ಟಿಯೇ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿ 22 ಲೋಕಸಭಾ ಸ್ಥಾನ ಗೆಲ್ಲುವುದಾಗಿ ಹೇಳಿದ್ದಕ್ಕೂ ವಾಯು ದಾಳಿ/ಸರ್ಜಿಕಲ್ ಸ್ಟ್ರೈಕ್‍ಗೂ ಸಂಬಂಧವಿಲ್ಲ ಎಂದರು.

ಮಲ್ಪೆ ಬಂದರಿನಿಂದ ಡಿ. 13ಕ್ಕೆ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಹಾಗೂ ಏಳು ಮೀನುಗಾರರ ನಾಪತ್ತೆಗೆ ಸಂಬಂಧಿಸಿ ಕೇಂದ್ರ, ಮಹಾರಾಷ್ಟ್ರ ಸರಕಾರ, ನೌಕಾ ಪಡೆ, ಕರಾವಳಿ ಕಾವಲು ಪಡೆ ಶೋಧ ಕಾರ್ಯಾಚರಣೆ ಮುಂದುವರಿಸಿದೆ ಎಂದರು.

ಆದರೆ ಯಾವುದೇ ಮಹತ್ವದ ಸುಳಿವು ದೊರೆತಿಲ್ಲ. ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು, ಸಮಾಧಾನ ಹೇಳಬೇಕು. ನೌಕಾಪಡೆ ಹಡಗಿನ ತಳಭಾಗಕ್ಕೆ ಆಗಿದ್ದ ಅಪಘಾತ ಸುವರ್ಣ ತ್ರಿಭುಜ ದೋಣಿಯಿಂದ ಆಯಿತೇ ಎನ್ನುವುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ