ಆ್ಯಪ್ನಗರ

ಪುರಾಣದ ಐತಿಹಾಸಿಕತೆ ಕಟ್ಟಿಕೊಡಲು ಯಕ್ಷಗಾನ ಪೂರಕ: ಪಲಿಮಾರು ಶ್ರೀ

ಯಕ್ಷಗಾನದಲ್ಲಿ ಬಯಲಾಟ ಹಾಗೂ ತಾಳಮದ್ದಲೆ 2 ಅಪೂರ್ವ ಯಕ್ಷ ಪ್ರಕಾರಗಳಾಗಿದ್ದು, ಪುರಾಣದ ಐತಿಹಾಸಿಕ ಘಟನಾವಳಿಗಳನ್ನು ನಮ್ಮೆದುರು ಕಟ್ಟಿ ಕೊಟ್ಟು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Vijaya Karnataka 20 May 2019, 5:00 am
ಉಡುಪಿ; ಯಕ್ಷಗಾನದಲ್ಲಿ ಬಯಲಾಟ ಹಾಗೂ ತಾಳಮದ್ದಲೆ 2 ಅಪೂರ್ವ ಯಕ್ಷ ಪ್ರಕಾರಗಳಾಗಿದ್ದು, ಪುರಾಣದ ಐತಿಹಾಸಿಕ ಘಟನಾವಳಿಗಳನ್ನು ನಮ್ಮೆದುರು ಕಟ್ಟಿ ಕೊಟ್ಟು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
Vijaya Karnataka Web yaksha


ಅವರು ಉಡುಪಿ ಪರ್ಯಾಯ ಪಲಿಮಾರು ಮಠ, ಶ್ರೀಕೃಷ್ಣ ಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷಗಾನ ಕಲಾರಂಗ ಉಡುಪಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಒಂದು ವಾರ ಕಾಲ ನಡೆಯುವ ತಾಳಮದ್ದಲೆ ಸಪ್ತಾಹವನ್ನು ಭಾನುವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಬಯಲಾಟದಲ್ಲಿ ಮಾತುಗಾರಿಕೆ ಜತೆಗೆ ನಾಟ್ಯ, ವೇಷಭೂಷಣ, ರಂಗಸ್ಥಳಗಳಿಗೆ ಹೆಚ್ಚಿನ ಮಹತ್ವವಿದೆ. ಆದರೆ ತಾಳಮದ್ದಲೆಯಲ್ಲಿ ವಿದ್ವಾಂಸರ ಪಾಂಡಿತ್ಯಕ್ಕೆ ಹೆಚ್ಚಿನ ಮನ್ನಣೆ ನೀಡಲಾಗುತ್ತದೆ. ಇದು ಪುರಾಣ ಗೊತ್ತಿಲ್ಲದವರಿಗೂ ಮನಮುಟ್ಟುವಂತೆ ಮಾಡುವ ಕಲೆಯಾಗಿದೆ. ಸದ್ಯ ತಾಳಮದ್ದಲೆ ಹಾಗೂ ಯಕ್ಷಗಾನಕ್ಕೆ ಬಹುಬೇಡಿಕೆ ಇದೆ ಎಂದರು.

ಕಟೀಲು ದೇವಳದ ಅನುವಂಶಿಕ ಅರ್ಚಕ ವೆಂಕಟರಮಣ ಆಸ್ರಣ್ಣ ಮಾತನಾಡಿ, ಪ್ರಸ್ತುತ ಯಕ್ಷ ಕಲಾವಿದರಿಗೆ ಹೆಚ್ಚಿನ ಬೇಡಿಕೆಗಳ ಜತೆಗೆ ಪ್ರೋತ್ಸಾಹವೂ ಸಿಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಉಡುಪಿ ಯಕ್ಷಗಾನ ಕಲಾರಂಗ ಉಪಯುಕ್ತ ಕೊಡುಗೆಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.

ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌ನ ಮಹಾಪ್ರಬಂಧಕ ಭಾಸ್ಕರ ಹಂದೆ, ಶ್ರೀಎಡನೀರು ಮಠದ ಕಾರ್ಯದರ್ಶಿ ಜಯರಾಮ ಎಡನೀರು, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್‌.ವಿ. ಭಟ್‌, ಕಾರ್ಯದರ್ಶಿ ಮುರಳಿ ಕಡೆಕಾರ್‌ ಉಪಸ್ಥಿತರಿದ್ದರು.

ಕಲಾರಂಗದ ಉಪಾಧ್ಯಕ್ಷ ಗಂಗಾಧರ ರಾವ್‌ ಸ್ವಾಗತಿಸಿದರು. ಸಪ್ತಾಹದ ಸಂಯೋಜಕ ಎಂ. ನಾರಾಯಣ ಹೆಗಡೆ ಕಾರ‍್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಎಲ್ಲೂರು ಗಣೇಶ್‌ ರಾವ್‌ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಧ್ರುವ ಪ್ರಸಂಗದ ತಾಳಮದ್ದಲೆ ಸಂಪನ್ನಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ