ಆ್ಯಪ್ನಗರ

ಅದಮಾರು ಮಠದ ಪರ್ಯಾಯ ಕೃಷಿ ಆಧಾರಿತ ಪರ್ಯಾಯವಾಗಲಿದೆ

ಹೆಬ್ರಿ : ಚಾರ ಗ್ರಾಮದಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ತಮ್ಮ ಪರ್ಯಾಯ ಅವಧಿಗೆ ಬೇಕಾದ ಬಾಳೆ ಎಲೆಗಳನ್ನು ಚಾರ ಗ್ರಾಮದ ಕೃಷಿಕರಿಂದ ಸರಬರಾಜು ಮಾಡಬೇಕೆಂಬ ಉದ್ದೇಶದಿಂದ ಬಾಳೆ ಮುಹೂರ್ತಕ್ಕೆ ಉಡುಪಿ ಅದಮಾರು ಮಠದ್ವಯ ರಾದ ಶ್ರೀ ವಿಶ್ವಪ್ರಿಯತೀರ್ಥ ಹಿರಿಯ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಕಿರಿಯ ಶ್ರೀಪಾದರು ಶುಕ್ರವಾರ ಚಾರದ ಬಾವಿಗೆದ್ದೆ ಸಾಧುಶೆಟ್ಟಿ ಅವರ ತೋಟದಲ್ಲಿ ಚಾಲನೆ ನೀಡಿದರು.

Vijaya Karnataka 15 Dec 2018, 5:00 am
ಹೆಬ್ರಿ : ಚಾರ ಗ್ರಾಮದಲ್ಲಿ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ತಮ್ಮ ಪರ್ಯಾಯ ಅವಧಿಗೆ ಬೇಕಾದ ಬಾಳೆ ಎಲೆಗಳನ್ನು ಚಾರ ಗ್ರಾಮದ ಕೃಷಿಕರಿಂದ ಸರಬರಾಜು ಮಾಡಬೇಕೆಂಬ ಉದ್ದೇಶದಿಂದ ಬಾಳೆ ಮುಹೂರ್ತಕ್ಕೆ ಉಡುಪಿ ಅದಮಾರು ಮಠದ್ವಯ ರಾದ ಶ್ರೀ ವಿಶ್ವಪ್ರಿಯತೀರ್ಥ ಹಿರಿಯ ಶ್ರೀಪಾದರು ಮತ್ತು ಶ್ರೀ ಈಶಪ್ರಿಯತೀರ್ಥ ಕಿರಿಯ ಶ್ರೀಪಾದರು ಶುಕ್ರವಾರ ಚಾರದ ಬಾವಿಗೆದ್ದೆ ಸಾಧುಶೆಟ್ಟಿ ಅವರ ತೋಟದಲ್ಲಿ ಚಾಲನೆ ನೀಡಿದರು.
Vijaya Karnataka Web news/udupi/paryaya
ಅದಮಾರು ಮಠದ ಪರ್ಯಾಯ ಕೃಷಿ ಆಧಾರಿತ ಪರ್ಯಾಯವಾಗಲಿದೆ


ಪರ್ಯಾಯದ ಪೂರ್ವಭಾವಿಯಾಗಿ ಅದಮಾರು ಮಠದಲ್ಲಿ ಬಾಳೆಮುಹೂರ್ತ ನಡೆದಿದ್ದು, ದಿನಂಪ್ರತಿ 3 ಸಾವಿರಷ್ಟು ಬಾಳೆ ಎಲೆ ಮಠದಲ್ಲಿ ಭಕ್ತಾದಿಗಳ ಭೋಜನಕ್ಕೆ ಅಗತ್ಯವಿದ್ದು, ಅಷ್ಟನ್ನೂ ಅಂಗಡಿಯಿಂದ ತರಿಸಲಾಗುತ್ತಿತ್ತು. ಇದೀಗ ನೇರವಾಗಿ ಚಾರ ಗ್ರಾಮದ ಕೃಷಿಕರಿಗೆ ಪ್ರೋತ್ಸಾಹ ನೀಡಿ ಅವರಿಂದ ಬೆಳೆದ ಬಾಳೆ ಎಲೆ ಪಡೆಯುವ ಮೂಲಕ ಕೃಷಿಕರಿಗೂ ಉದ್ಯೋಗ, ಭಗವಂತನ ಸೇವೆ ಮಾಡಲು ಅವಕಾಶ ಸಿಕ್ಕಿದಂತಾಗುತ್ತದೆ. ಕೃಷಿಕರ ಮಕ್ಕಳಿಗೂ ಇದರಿಂದ ಪ್ರೋತ್ಸಾಹ, ಶಿಕ್ಷ ಣಕ್ಕೆ ಆರ್ಥಿಕ ಸಹಾಯ ಲಭ್ಯವಾಗುತ್ತದೆ. ಕೃಷಿಯನ್ನು ಕೈಗೊಳ್ಳುವ ಮೂಲಕ ಇತರ ಊರಿಗೂ ಮಾದರಿಯಾಗೋಣ ಎಂದರು.

ಕಿರಿಯ ಈಶಪ್ರಿಯ ತೀರ್ಥರು ಮಾತನಾಡಿ, ಮಠದ ಸಮೀಪದ ಗ್ರಾಮಗಳ ಸ್ಥಳೀಯರಿಗೇ ಬಾಳೆ ಕೃಷಿಗೆ ಪ್ರೋತ್ಸಾಹ ನೀಡಿ ಬೆಳೆದ ಕೃಷಿ ಉತ್ಪನ್ನಗಳನ್ನು ಕೃಷ್ಣನಿಗೆ ಸಮರ್ಪಣೆ ಮಾಡುವುದರ ಮೂಲಕ ಭಗವಂತನ ಕೃಪೆಗೆ ಪಾತ್ರರಾದಂತಾಗುತ್ತದೆ. ಕೃಷಿಕರನ್ನು ಬೆಂಬಲಿಸುವ, ನಮ್ಮಲ್ಲಿಯೇ ಬೆಳೆದ ಉತ್ಪನ್ನಗಳನ್ನು ಬಳಸುವ ನಿಟ್ಟಿನಲ್ಲಿ ಚಾರ ಗ್ರಾಮದ ರೈತರನ್ನು ಬಾಳೆಕೃಷಿಗೆ ಪ್ರೋತ್ಸಾಹಿಸಿ ಬಾಳೆ ಮುಹೂರ್ತಕ್ಕೆ ಚಾಲನೆ ನೀಡಲಾಗುತ್ತಿದೆ. ಕೃಷ್ಣನಿಗೆ ಅರ್ಪಿತವಾಗುವ ಈ ಕೃಷಿಯಿಂದ ಭಗವಂತನ ಸೇವೆ ಮಾಡಲು ಅವಕಾಶವಾಗುವುದಲ್ಲದೆ, ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ, ರಾಸಾಯನಿಕ ಮುಕ್ತ ಸ್ಥಳೀಯ ತಾಜಾ ಬೆಳೆಗಳನ್ನು ದೇವರಿಗೆ ಅರ್ಪಿಸಿದಂತಾಗುತ್ತದೆ. ಮುಂದೆ ಅಕ್ಕಿ ಮತ್ತಿತರ ಬೆಳೆಗಳನ್ನೂ ಸ್ಥಳೀಯವಾಗಿ ಪ್ರೋತ್ಸಾಹಿಸಿ, ಅದಮಾರು ಮಠದ ನೇತೃತ್ವದ ಪರ್ಯಾಯವನ್ನು ಕೃಷಿ ಆಧಾರಿತ ಪರ್ಯಾಯವಾಗಿ ರೂಪಿಸಲಾಗುವುದು ಎಂದರು.

ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಇಲ್ಲಿನ ಕೃಷಿಕರಿಗೆ ಕಸ್ತೂರಿರಂಗನ್‌ ವರದಿ ಅನುಷ್ಠಾನದ ಭೀತಿಯಿದ್ದು, ಸರಕಾರವು ಕೃಷಿ ಬೆಳೆಯುವ ಪ್ರದೇಶವನ್ನು ಕೃಷಿವಲಯವನ್ನಾಗಿ ಮಾಡಿ ಕೃಷಿ ಕಾರ್ಯಕ್ಕೆ ಪ್ರೋತ್ಸಾಹಿಸಬೇಕು. ಅರಣ್ಯವಲಯಕ್ಕೆ ಮಾತ್ರ ಕಸ್ತೂರಿರಂಗನ್‌ ವರದಿ ಅನುಷ್ಠಾನ ಸೀಮಿತಗೊಳಿಸಬೇಕು. ಕೃಷಿಕರಿಗೆ ಸಾಲಮನ್ನಾದ ಬದಲು ಬಿತ್ತನೆ ಬೀಜ, ಗೊಬ್ಬರವನ್ನು ಪೂರೈಸಬೇಕು ಎಂದರು.

ಚಾರ ಹಂದಿಕಲ್ಲು ವಿವೇಕಾನಂದ ಯುವ ವೇದಿಕೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃಷಿಕ ಮಿಥುನ್‌ ಶೆಟ್ಟಿ, ವಿವೇಕಾನಂದ ಯುವ ವೇದಿಕೆ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಪಂಚಾಯಿತಿ ಉಪಾಧ್ಯಕ್ಷೆ ರೇಷ್ಮಾ, ನಾಗರಾಜ ನಕ್ಷ ತ್ರಿ ಮತ್ತಿತರರು ಉಪಸ್ಥಿತರಿದ್ದರು.

ಫೋಟೋ:14ಕೆಬಿ ಬಾಳೆ ಕೃಷಿ1

ಫೋಟೋ:14ಕೆಬಿ ಬಾಳೆ ಕೃಷಿ2

ಫೋಟೋ:14ಕೆಬಿ ಬಾಳೆ ಕೃಷಿ3

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ