ಆ್ಯಪ್ನಗರ

ಚೇತರಿಕೆ ಹಾದಿಯಲ್ಲಿ ಪೇಜಾವರ ಶ್ರೀ, ಇನ್ನೆರಡು ದಿನದಲ್ಲಿ ಮತ್ತಷ್ಟು ಚೇತರಿಕೆ: ಬಿಎಸ್‌ವೈ

"ಕಣ್ಣು ಬಿಡಲು ಯತ್ನಿಸುತ್ತಿರುವ ಪೇಜಾವರ ಶ್ರೀಗಳು, ಆರೋಗ್ಯ ಸುಧಾರಣೆ ಅಂಗವಾಗಿ ಸ್ವಯಂ ಉಸಿರಾಟಕ್ಕೆ ಯತ್ನಿಸುತ್ತಿರುವುದನ್ನು ತಜ್ಞ ವೈದ್ಯರು ತಿಳಿಸಿದ್ದಾರೆ," - ಬಿಎಸ್‌ ಯಡಿಯೂರಪ್ಪ.

Vijaya Karnataka 21 Dec 2019, 5:24 pm

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಕಳೆದೆರಡು ದಿನಗಳಲ್ಲಿ ಸುಧಾರಣೆಯಾಗಿದ್ದು ಇನ್ನೆರಡು ದಿನಗಳಲ್ಲಿ ಮತ್ತಷ್ಟು ಚೇತರಿಸಿಕೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka Web BS Yediyurappa


ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಶುಕ್ರವಾರ ಬೆಳಗ್ಗೆ ದಾಖಲಾದ ಪೇಜಾವರ ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಶನಿವಾರ ಮಾಹಿತಿ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

“ಕಣ್ಣು ಬಿಡಲು ಯತ್ನಿಸುತ್ತಿರುವ ಪೇಜಾವರ ಶ್ರೀಗಳು, ಆರೋಗ್ಯ ಸುಧಾರಣೆ ಅಂಗವಾಗಿ ಸ್ವಯಂ ಉಸಿರಾಟಕ್ಕೆ ಯತ್ನಿಸುತ್ತಿರುವುದನ್ನು ತಜ್ಞ ವೈದ್ಯರು ತಿಳಿಸಿದ್ದಾರೆ. ಪೇಜಾವರ ಶ್ರೀಗಳು ಗುಣಮುಖರಾಗಿ ಶ್ರೀಕೃಷ್ಣಮಠಕ್ಕೆ ಬಂದು ಶ್ರೀಕೃಷ್ಣನ ಪೂಜೆ ಮಾಡುವ ಅವಕಾಶ ಸಿಗಬೇಕು, ಅದನ್ನೆಲ್ಲಾ ನಾವು ನೋಡುವಂತಾಗಬೇಕೆಂದು ಭಗವಂತನಲ್ಲಿ ಪ್ರಾರ್ಥಿಸುವೆ. 90 ವರ್ಷದ ಶ್ರೀಪಾದರ ಆರೋಗ್ಯ ಸುಧಾರಣೆ ನಿಟ್ಟಿನಲ್ಲಿ ಮಣಿಪಾಲದ ತಜ್ಞ ವೈದ್ಯರು ಯತ್ನಿಸುತ್ತಿದ್ದಾರೆ. ಹೊರಗಿನ ಸೋಂಕು ತಗುಲದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮಾಧ್ಯಮ, ಭಕ್ತರು, ಅಭಿಮಾನಿಗಳು ತೊಂದರೆ ಕೊಡದೆ ಪೇಜಾವರ ಶ್ರೀ ಗುಣಮುಖರಾಗಿ ಶ್ರೀಕೃಷ್ಣಮಠ, ಪೇಜಾವರ ಮಠಕ್ಕೆ ಬಂದ ಮೇಲೆ ದರ್ಶನ ಪಡೆಯಬಹುದು,” ಎಂದು ಯಡಿಯೂರಪ್ಪ ಹೇಳಿದರು.

ಪೇಜಾವರ ಶ್ರೀ ಆರೋಗ್ಯ ಸುಧಾರಣೆಗೆ ಮಠಾಧೀಶರ ವಿಶೇಷ ಪ್ರಾರ್ಥನೆ: ವೀರೇಂದ್ರ ಹೆಗ್ಗಡೆ ಆಸ್ಪತ್ರೆಗೆ ಭೇಟಿ

“ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಪೇಜಾವರ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀಗಳಂತೆ ರಾಜ್ಯ, ದೇಶದಾದ್ಯಂತ ಓಡಾಡಿದ ಸ್ವಾಮಿ ಇನ್ನೊಬ್ಬರಿಲ್ಲ. ಓಡಾಟ ಬಹಳವಾಯಿತು, ಕಡಿಮೆ ಮಾಡಿ ಎಂದು ನೂರಾರು ಬಾರಿ ಹೇಳಿದ್ದೇನೆ.

ನಿತ್ಯ ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ನಾಡಿನ ಜನತೆಯನ್ನು ಆಶೀರ್ವದಿಸುವ ಪೇಜಾವರ ಶ್ರೀ ಆರೋಗ್ಯ ಸುಧಾರಣೆಯಾಗಿ ಶ್ರೀಕೃಷ್ಣಮಠಕ್ಕೆ ಬರಲೆಂದು ಶ್ರೀಕೃಷ್ಣನಲ್ಲೇ ಪ್ರಾರ್ಥಿಸುತ್ತೇವೆ. ಇದಕ್ಕಿಂತ ಹೆಚ್ಚು ಶಕ್ತಿ ನಮಗಿಲ್ಲ. ವಯಸ್ಸಿನ ಸಮಸ್ಯೆ ದಾಟಿ ಬರ್ತಾರೆ ಎನ್ನುವ ವಿಶ್ವಾಸವಿದೆ,” ಎಂದರು.

ಪೇಜಾವರ ಶ್ರೀಗಳಿಗೆ ವೆಂಟಿಲೇಟರ್‌ನಲ್ಲೇ ಕೃತಕ ಉಸಿರಾಟ : ಚಿಕಿತ್ಸೆಗೆ ಸ್ಪಂದನೆ

ಇನ್‍ಫೆಕ್ಷನ್ ಕಡಿಮೆಯಾಗುತ್ತಿದೆ: ಬೊಮ್ಮಾಯಿ

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ. 40ರಿಂದ 50ರಷ್ಟಿದ್ದ ಆಕ್ಸಿಜನ್ ಮಟ್ಟ 98ಕ್ಕೇರಿದೆ. ಇನ್‍ಫೆಕ್ಷನ್ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಚೇತರಿಕೆ ಕಾಣುವ ಲಕ್ಷಣಗಳಿವೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು

ಅಯೋಧ್ಯೆಯಲ್ಲಿ ಪೇಜಾವರ ಶ್ರೀಗಳ ನೇತೃತ್ವದಲ್ಲಿ ರಾಮ ಮಂದಿರ ನಿರ್ಮಾಣ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಮಾಡಿದ್ದ ಪ್ರಮುಖರಲ್ಲೊಬ್ಬರಾದ ಪೇಜಾವರ ಶ್ರೀಗಳ ಜತೆ ನಾನಿದ್ದೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳ ಆಶೀರ್ವಾದ, ನೇತೃತ್ವದಲ್ಲಿ ಆಗಬೇಕೆನ್ನುವುದು ಜನರ ಅಪೇಕ್ಷೆಯಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ಹೇಳಿದರು.

ಪೇಜಾವರ ಶ್ರೀ ಔಟ್‌ ಆಫ್ ಡೇಂಜರ್: ಆರೋಗ್ಯದಲ್ಲಿ ಚೇತರಿಕೆ

ದೇಶ ಕಂಡ ಅಪರೂಪದ ಸನ್ಯಾಸಿಯಾದ ಪೇಜಾವರ ಶ್ರೀ ಶಿಕ್ಷಣಕ್ಕೆ ಒತ್ತು ನೀಡಿದ್ದು ಎರಡು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಮಾಡುತ್ತಿರುವುದು ಗೊತ್ತಾಗಿ ಅನುದಾನ ಬಿಡುಗಡೆ ಮಾಡಿದ್ದೇನೆ. ಎಲ್ಲಾ ಕ್ಷೇತ್ರದಲ್ಲಿ ಆಸಕ್ತಿಯಿಂದ ಶ್ರೀಗಳು ಕೆಲಸ ಮಾಡುತ್ತಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ