ಆ್ಯಪ್ನಗರ

ಮರಳಿಗಾಗಿ ಹೋರಾಟ: ನ. 10 ರಿಂದ ಉಪವಾಸ ಕೂರುವುದಾಗಿ ಪೇಜಾವರ ಶ್ರೀಗಳ ಎಚ್ಚರಿಕೆ

ಶಿವಮೊಗ್ಗ ಲೋಕಸಭಾ ಮರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಶಾಮಿಯಾನ ಹಿಂದೆ ಅಳವಡಿಸಿದ ತಗಡು ಶೀಟ್‍ನಡಿ ನಾಲ್ಕೈದು ಫ್ಯಾನುಗಳು ತಿರುಗುತ್ತಿದ್ದರೆ, ಮೈಕ್/ ಸೌಂಡ್ ಬಾಕ್ಸ್ ಬಳಕೆಯಲ್ಲಿದೆ. ಏಳು ದಿನಗಳಿಂದ ಉಡುಪಿ ಶಾಸಕ ಕೆ. ರಘುಪತಿ ಭಟ್ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗುತ್ತಿದ್ದು ಪ್ರತಿಭಟನೆ ನಿಲ್ಲದ ಹೊರತು ಗಡ್ಡ ತೆಗೆಯದಿರುವ ಸಂಕಲ್ಪ ಮಾಡಿದ್ದಾರೆ.

Vijaya Karnataka Web 1 Nov 2018, 3:36 pm
ಉಡುಪಿ: ಉಡುಪಿ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಏಳು ದಿನಗಳಿಂದ ಮರಳಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಗುರುವಾರ ವಿಷ್ಣು ಸಹಸ್ರನಾಮ ಪಠಿಸಿದರು.
Vijaya Karnataka Web 1111


ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಬಳಿ ಮರಳಿಗಾಗಿ ಹೋರಾಟ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೇಜಾವರಶ್ರೀಗಳು ಮರಳು ಸಮಸ್ಯೆ ಬಗೆಹರಿಯದಿದ್ದರೆ ನ. 10ರಿಂದ ತಾವೂ ಉಪವಾಸ ಕೂರುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಪ್ರಕೃತಿ, ಪರಿಸರ ರಕ್ಷಣೆಗೆ ಬದ್ಧನಿದ್ದು ಕೃಷಿ, ಉದ್ಯಮದ ಜತೆಗೆ ಜನಹಿತಕ್ಕೆ ಯಾವುದೇ ಸಮಸ್ಯೆಯಾಗದೆ ಸಮನ್ವಯವಾಗಬೇಕು. ಮರಳುಗಾರಿಕೆಗೆ ಪೂರ್ಣ ನಿರ್ಬಂಧ ಹಾಗೂ ಲಂಗು ಲಗಾಮಿಲ್ಲದೆ ಮರಳು ತೆಗೆದರೆ ಪ್ರಕೃತಿಗೆ ಹಾನಿ ತಪ್ಪಿದ್ದಲ್ಲ. ರಾಜ್ಯ ಸರಕಾರ ಮರಳು ಸಮಸ್ಯೆಗಿರುವ ಅಡೆತಡೆ ನಿವಾರಿಸಬೇಕು. ತಜ್ಞರ ಜತೆ ವಿಚಾರ ವಿಮರ್ಶೆ ಮಾಡಬೇಕು.

ಮರಳು ಎಲ್ಲರಿಗೂ ಸಿಗುವಂತಾಗಬೇಕು. ಹಬ್ಬವನ್ನು ಖುಷಿಯಿಂದ ಆಚರಿಸುವಂತಹ ಸಿಹಿ ಸುದ್ದಿ ಬರಲಿ ಎಂದರು. ಉಡುಪಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸಾಂಪ್ರದಾಯಿಕವಾಗಿ ಮರಳು ತೆಗೆಯುತ್ತಿದ್ದ 170 ಪರವಾನಗಿದಾರರಿಗೂ ಮತ್ತೆ ಅವಕಾಶ ಕೊಡಬೇಕು. ನಾನ್ ಸಿಆರ್‌ಝೆಡ್ ವ್ಯಾಪ್ತಿಯಲ್ಲೂ ಮರಳು ಸಿಗಬೇಕು. ಮರಳು ಸಮಸ್ಯೆ ಬಗೆಹರಿಯದಿದ್ದರೆ ನ. 10ಕ್ಕೆ ಜಿಲ್ಲಾ ಬಂದ್ ಬಳಿಕ ಕಟ್ಟಡ ಕಾಮಗಾರಿ ನಿಲ್ಲಿಸಿ ಕಾರ್ಮಿಕರು, ಎಂಜಿನಿಯರ್‌ಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಪೇಜಾವರಶ್ರೀ ಬೆಂಬಲ ಹೋರಾಟಕ್ಕೆ ಭೀಮ ಬಲ ನೀಡಿದೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಹೆಚ್ಚು ಬಂದಿದ್ದು ಮರಳು ತೆಗೆಯದಿದ್ದರೆ ಮುಂದಿನ ವರ್ಷ ನೆರೆ ಸಮಸ್ಯೆ ತಲೆದೋರಲಿದೆ ಎಂದು ಹೇಳಿದರು.

ಮರಳಿಗಾಗಿ ಹೋರಾಟ: ನ. 10 ರಿಂದ ಉಪವಾಸ ಕೂರುವುದಾಗಿ ಪೇಜಾವರ ಶ್ರೀಗಳ ಎಚ್ಚರಿಕೆ


ಲಾರಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ ಶೆಟ್ಟಿ ಮಾತನಾಡಿ, ವಾಹನಗಳಲ್ಲಿ ದುಡಿಯುವ ಕಾರ್ಮಿಕರ ಜತೆಗೆ ವಾಹನ ಮಾಲೀಕರೂ ಭತ್ತ ಕಟಾವು ಕಾರ್ಮಿಕರಾಗಿ ದುಡಿಯುವಂತಾಗಿದೆ. ಬ್ಯಾಂಕ್ ಸಾಲದ ಕಂತು ಕಟ್ಟಲಾಗದೆ, ಲಾರಿ ಮಾರಲಾಗದೆ ತುಕ್ಕು ಹಿಡಿಯುತ್ತಿದೆ.

ಜೈಲಿಗೆ ಹೋಗುವ ಆತಂಕ ಬಿಟ್ಟು ನದಿಗಿಳಿದು ಮರಳು ತೆಗೆಯುವ ಅನಿವಾರ್ಯವಿದೆ ಎಂದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಮರಳಿಗಾಗಿ ಹೋರಾಟ ಸರ್ವ ಸಂಘಟನೆಗಳ ಸಮಿತಿ ಸಂಚಾಲಕ ಎಂ. ಜಿ. ನಾಗೇಂದ್ರ , ಮರಳು ಕಾರ್ಮಿಕ ಸುಧಾಕರ ಅಮೀನ್, ಲಾರಿ ಚಾಲಕ ರಾಘವೇಂದ್ರ ಶೆಟ್ಟಿ , ಉದ್ಯಮಿ ಮಂಜುನಾಥ ಉಪಾಧ್ಯ ಪರ್ಕಳ, ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿದರು. ಜೆರ್ರಿ ವಿನ್ಸೆಂಟ್ ಡಯಾಸ್, ಪ್ರಭಾಕರ ಪೂಜಾರಿ, ಎಂ. ಸೋಮಶೇಖರ ಭಟ್, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.

ಡಿಸಿ ವಿರುದ್ಧ ಹಾಡು
ತುತ್ತು ಅನ್ನ ತಿನ್ನೋಕೆ ಕಾರ್ಮಿಕರೆಲ್ಲಾ ದುಡಿಯೋಕೆ, ಮರಳು ತೆಗೆಯಲು ಪರ್ಮಿಟ್ ಕೇಳೋಕೆ, ಮರಳು ಬೇಕು ಮರಳು ಬೇಕು ಜೀವನ ಸಾಗೋಕೆ..ಹಾಡಿನ ಮೂಲಕ ಜಿಲ್ಲಾಧಿಕಾರಿ ನಿಲುವನ್ನು ವಿನೋದ್ ಸಂತೆಕಟ್ಟೆ ಅವರು ಟೀಕಿಸಿ, ಚಪ್ಪಾಳೆ ಗಿಟ್ಟಿಸಿದರು.

ಮರಳಿಗಾಗಿ ಹೋರಾಟ: ನ. 10 ರಿಂದ ಉಪವಾಸ ಕೂರುವುದಾಗಿ ಪೇಜಾವರ ಶ್ರೀಗಳ ಎಚ್ಚರಿಕೆ


ಪ್ರತಿಭಟನೆ ಹಿಂತೆಗೆದ ಬಳಿಕ ಗಡ್ಡಕ್ಕೆ ಮುಕ್ತಿ!
ಶಿವಮೊಗ್ಗ ಲೋಕಸಭಾ ಮರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಶಾಮಿಯಾನ ಹಿಂದೆ ಅಳವಡಿಸಿದ ತಗಡು ಶೀಟ್‍ನಡಿ ನಾಲ್ಕೈದು ಫ್ಯಾನುಗಳು ತಿರುಗುತ್ತಿದ್ದರೆ, ಮೈಕ್/ ಸೌಂಡ್ ಬಾಕ್ಸ್ ಬಳಕೆಯಲ್ಲಿದೆ. ಏಳು ದಿನಗಳಿಂದ ಉಡುಪಿ ಶಾಸಕ ಕೆ. ರಘುಪತಿ ಭಟ್ ರಾತ್ರಿ ಪ್ರತಿಭಟನಾ ಸ್ಥಳದಲ್ಲೇ ಮಲಗುತ್ತಿದ್ದು ಪ್ರತಿಭಟನೆ ನಿಲ್ಲದ ಹೊರತು ಗಡ್ಡ ತೆಗೆಯದಿರುವ ಸಂಕಲ್ಪ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ