ಆ್ಯಪ್ನಗರ

ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಆಗ್ರಹ: ಸಿಐಟಿಯು ಅಹೋರಾತ್ರಿ ಧರಣಿ

ಜನರ ಸಮಸ್ಯೆಗೆ ಪರಿಹಾರ ಕೊಡಬೇಕಾದ ರಾಜ್ಯ ಸರಕಾರ ನಿದ್ದೆ ಹೋಗಿದೆ. ಜನಪ್ರತಿನಿಗಳು ಸಮಸ್ಯೆಯ ಲಾಭ ಎತ್ತಲು ಯತ್ನಿಸುತ್ತಿದ್ದಾರೆ.

Vijaya Karnataka Web 27 Nov 2018, 6:23 pm
ಉಡುಪಿ: ಜಿಲ್ಲೆಯಲ್ಲಿ ಜನಸಾಮಾನ್ಯರನ್ನು ಕಾಡುತ್ತಿರುವ ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಶೀಘ್ರ ಕ್ರಮಕ್ಕೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ವತಿಯಿಂದ ಅನಿರ್ದಿಷ್ಟ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ಆರಂಭವಾಗಿದೆ.
Vijaya Karnataka Web Untitled 5


ಮಣಿಪಾಲ ರಜತಾದ್ರಿಯ ಜಿಲ್ಲಾಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಶಂಕರ್ ಮಾತನಾಡಿ, ಜನರ ಸಮಸ್ಯೆಗೆ ಪರಿಹಾರ ಕೊಡಬೇಕಾದ ರಾಜ್ಯ ಸರಕಾರ ನಿದ್ದೆ ಹೋಗಿದೆ. ಜನಪ್ರತಿನಿಗಳು ಸಮಸ್ಯೆಯ ಲಾಭ ಎತ್ತಲು ಯತ್ನಿಸುತ್ತಿದ್ದಾರೆ.
ಕಡಿವಾಣವಿಲ್ಲದ ಭ್ರಷ್ಟಾಚಾರದಿಂದಾಗಿ ಮರಳು ಸಮಸ್ಯೆ ತಲೆದೋರಿದೆ. ಸಾಂಪ್ರದಾಯಿಕ ಮರಳುಗಾರಿಕೆಗೆ ಒತ್ತು ನೀಡದೆ ಧಕ್ಕೆ, ಲಾರಿ ಲಾಬಿಯಿಂದಾಗಿ ಮರಳುಗಾರಿಕೆ ವಿಳಂಬವಾಗುತ್ತಿದೆ. ಕೂಲಿ ಕಾರ್ಮಿಕರು ನಿರುದ್ಯೋಗಿಗಳಾಗಿ, ಉಪವಾಸ ಕೂರುವಂತಹ ಪರಿಸ್ಥಿತಿ ತಲೆದೋರಿದೆ ಎಂದರು.

ಬೇಡಿಕೆಗಳು

ಮರಳು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಗಂಭೀರವಾಗುತ್ತಿರುವ ಸಮಸ್ಯೆಯನ್ನು ಮನಗಂಡು ಪರವಾನಗಿ ನೀಡಿದ ಗುತ್ತಿಗೆದಾರರಿಗೆ ಶೀಘ್ರ ಮರಳುಗಾರಿಕೆ ನಡೆಸಲು ಆದೇಶಿಸಬೇಕು. ಮುಂದಿನ ದಿನಗಳಲ್ಲಿ ಸರಕಾರವೇ ಮರಳುಗಾರಿಕೆ ನಡೆಸಿ, ದಾಸ್ತಾನು ಮಾಡಿ ಜನರಿಗೆ ಕಡಿಮೆ ದರದಲ್ಲಿ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು.

ಜಿಲ್ಲೆಯ ಮರಳು ಜಿಲ್ಲೆಯ ಜನತೆಗೆ ಪ್ರಥಮ ಆದ್ಯತೆಯಲ್ಲಿ ನೀಡಬೇಕು. ಭೂ ಪರಿವರ್ತನೆ ವಿಳಂಬ ಮಾಡದೆ ವೈಜ್ಞಾನಿಕವಾಗಿ ನಡೆಸಬೇಕು. ಮರಳು ಸಮಸ್ಯೆಯಿಂದ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಪರಿಹಾರ ಒದಗಿಸಬೇಕು. ಚೆನ್ನೈ ಹಸಿರು ಪೀಠಕ್ಕೆ ನ್ಯಾಯಾಧೀಶರನ್ನು ನೇಮಿಸಬೇಕು.

ಕಾರ್ಮಿಕ ಇಲಾಖೆಯಲ್ಲಿ ಖಾಲಿ ಬಿದ್ದಿರುವ ಅಕಾರಿ, ನಿರೀಕ್ಷಕ, ಸಿಬ್ಬಂದಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಿಂದಿನ ಸರಕಾರ ಘೋಷಿಸಿದಂತೆ ಪಿಎಫ್, ಇಎಸ್‍ಐ ಸೌಲಭ್ಯ ಜಾರಿ ಮಾಡಬೇಕು.

ಸಭೆಯಲ್ಲಿ ಸಮನ್ವಯ ಸಮಿತಿ ಸಂಚಾಲಕ ಶೇಖರ ಬಂಗೇರ, ಸುರೇಶ ಕಲ್ಲಾಗರ, ಬಾಲಕೃಷ್ಣ ಶೆಟ್ಟಿ, ವಿಠಲ ಪೂಜಾರಿ, ಕವಿರಾಜ್, ಗಣೇಶ್ ನಾಯ್ಕ್, ರಾಮ ಕರ್ಕಡ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ