ಆ್ಯಪ್ನಗರ

ಮಹಾರಾಷ್ಟ್ರಕ್ಕೆ ತೆರಳಲಿದೆ ಪೊಲೀಸ್‌, ಮೀನುಗಾರರ ಎರಡು ತಂಡ

ಉಡುಪಿ ಜಿಲ್ಲೆಯ ತೊಟ್ಟಂ ಗ್ರಾಮದ ಬೊಬ್ಬರ್ಯ ದೈವದ ನುಡಿ ಕಾಣೆಯಾದ 7 ಮೀನುಗಾರರು ಮರಳಿ ಬರುವ ಆಸೆ ಹೆಚ್ಚಿಸಿದೆ. ಅರಬ್ಬಿ ಸಮುದ್ರದ ಒಡಲಲ್ಲಿರುವ ಸತ್ಯ ಶೋಧವಾಗದೆ ಅತ್ತ ಸರಕಾರ, ಇತ್ತ ಮೀನುಗಾರರಿಗೂ ದಿಕ್ಕು ತೋಚುತ್ತಿಲ್ಲ. ದುರ್ಗಮ ಪ್ರದೇಶದಲ್ಲಿ ಇರಬಹುದಾದ ಮೀನುಗಾರರ ರಕ್ಷಣೆಗೆ ಸೇನಾ ಕಾರ್ಯಾಚರಣೆ ನಡೆಸಬೇಕೆನ್ನುವ ಮೀನುಗಾರರ ಒತ್ತಡವೂ ಹೆಚ್ಚುತ್ತಿದೆ.

Vijaya Karnataka 11 Jan 2019, 5:00 am
ಉಡುಪಿ: ಉಡುಪಿ ಜಿಲ್ಲೆಯ ತೊಟ್ಟಂ ಗ್ರಾಮದ ಬೊಬ್ಬರ್ಯ ದೈವದ ನುಡಿ ಕಾಣೆಯಾದ 7 ಮೀನುಗಾರರು ಮರಳಿ ಬರುವ ಆಸೆ ಹೆಚ್ಚಿಸಿದೆ. ಅರಬ್ಬಿ ಸಮುದ್ರದ ಒಡಲಲ್ಲಿರುವ ಸತ್ಯ ಶೋಧವಾಗದೆ ಅತ್ತ ಸರಕಾರ, ಇತ್ತ ಮೀನುಗಾರರಿಗೂ ದಿಕ್ಕು ತೋಚುತ್ತಿಲ್ಲ. ದುರ್ಗಮ ಪ್ರದೇಶದಲ್ಲಿ ಇರಬಹುದಾದ ಮೀನುಗಾರರ ರಕ್ಷಣೆಗೆ ಸೇನಾ ಕಾರ್ಯಾಚರಣೆ ನಡೆಸಬೇಕೆನ್ನುವ ಮೀನುಗಾರರ ಒತ್ತಡವೂ ಹೆಚ್ಚುತ್ತಿದೆ.
Vijaya Karnataka Web police and team of fishermen to go to maharashtra
ಮಹಾರಾಷ್ಟ್ರಕ್ಕೆ ತೆರಳಲಿದೆ ಪೊಲೀಸ್‌, ಮೀನುಗಾರರ ಎರಡು ತಂಡ


ಕ್ರೇಟ್‌ ಪತ್ತೆಯಿಂದ ಸುಳಿವು: ಡಿ.13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ದೋಣಿ ಸಹಿತ ಏಳು ಮೀನುಗಾರರು ಕಾಣೆಯಾಗಿ 26 ದಿನಗಳು ಸಂದಿವೆ. ಮಹಾರಾಷ್ಟ್ರದ ಸಿಂಧು ದುರ್ಗ ಜಿಲ್ಲೆಯ ಮಾಲ್ವಾಣಿಯಿಂದ 40 ನಾಟಿಕಲ್‌ ಮೈಲ್‌ ದೂರದಲ್ಲಿ ದೋಣಿಯಲ್ಲಿ 3 ಕ್ರೇಟ್‌ ಪತ್ತೆಯಾಗಿದೆ.

ಎರಡು ನೀಲಿ ಹಾಗೂ ಒಂದು ಹಳದಿ ಬಣ್ಣದ ಕ್ರೇಟ್‌ ಸುವರ್ಣ ತ್ರಿಭುಜ ದೋಣಿಯದ್ದೇ ಎನ್ನುವುದನ್ನು ನಾಪತ್ತೆಯಾದ ದೋಣಿ ಮಾಲೀಕ ಚಂದ್ರಶೇಖರ ಕೋಟ್ಯಾನ್‌ ಅವರ ಸಹೋದರ ನಿತ್ಯಾನಂದ ಕೋಟ್ಯಾನ್‌ ದೃಢಪಡಿಸಿದ್ದು, ದೋಣಿಯ ಸುಳಿವು ಮಾತ್ರ ದೊರೆತಿಲ್ಲ.

ಸಾಧ್ಯತೆಗಳು ಹಲವು: ಸ್ಟೀಲ್‌ ದೋಣಿ ಮುಳುಗಿರುವ ಸಾಧ್ಯತೆಯನ್ನು ಖಡಾಖಂಡಿತವಾಗಿ ತಳ್ಳಿ ಹಾಕುವ ಕಡಲ ಒಳ ಹೊರಗು ಬಲ್ಲ ಮೀನುಗಾರರಲ್ಲಿ, ನಾಪತ್ತೆಯಾದ ದೋಣಿಯ ಬಣ್ಣ ಬದಲಿಸಿ ಬಳಸುವ ಸಾಧ್ಯತೆ, ಮಹಾರಾಷ್ಟ್ರದ ಸಿಂಧು ದುರ್ಗ ಜಿಲ್ಲೆಯ ದುರ್ಗಮ ಪ್ರದೇಶದಲ್ಲಿ ಅಪಹರಿಸಿಟ್ಟ ಶಂಕೆ ಬಲವಾಗಿದೆ.

ತನಿಖೆಯ ದಿಕ್ಕು ತಪ್ಪಿಸಲು ದೋಣಿ ಸಹಿತ ಮೀನುಗಾರರನ್ನು ಅಪಹರಿಸಿದವರು ಮೂರು ಕ್ರೇಟ್‌ಗಳನ್ನು ತೇಲಿಬಿಟ್ಟರೇ? ಈ ಸುಳಿವಿನ ಆಧಾರದಲ್ಲಿ ಪೊಲೀಸರು ಮತ್ತು ಮೀನುಗಾರರನ್ನು ಒಳಗೊಂಡ 10 ಮಂದಿಯ ತಂಡ ತನಿಖೆಗಾಗಿ ಕೇರಳಕ್ಕೆ ತೆರಳಿತೇ?

ಡಿ.15ರಂದು ಮಧ್ಯರಾತ್ರಿ 1 ಗಂಟೆಗೆ ಸಿಂಧು ದುರ್ಗದ ಮಾಲ್ವಾಣಿ ಪ್ರದೇಶದಲ್ಲಿದ್ದ ದೋಣಿ ಸಹಿತ ಮೀನುಗಾರರು ರಾತ್ರಿಯಲ್ಲಿ ದೋಣಿ ಲಂಗರು ಹಾಕಿದ್ದಾಗ ಅವಘಡ ಸಂಭವಿಸಿತೇ? ಬಿರುಗಾಳಿಯ ಪರಿಣಾಮವಾಗಿ ದಿಕ್ಕು ತಪ್ಪಿ ಕಾಣೆಯಾದರೇ ಎನ್ನುವ ಪ್ರಶ್ನೆಗಿನ್ನೂ ಉತ್ತರವಿಲ್ಲ.

ಕಡಲ್ಗಳ್ಳರು, ಭಯೋತ್ಪಾದಕರು ಅಪಹರಿಸಿದ ಶಂಕೆಯ ನಡುವೆ, ಈ ಹಿಂದೆ ಇಂತಹ ಘಟನೆ ನಡೆದ ನಿದರ್ಶನವಿಲ್ಲ. ಮುಂಬಯಿಗೆ ದಶಕದ ಹಿಂದೆ ಸಮುದ್ರದ ಮೂಲಕ ದಾಳಿ ನಡೆದ ಬಳಿಕ ನೌಕಾ ಪಡೆ ಕಟ್ಟೆಚ್ಚರ ವಹಿಸಿದೆ. ದೋಣಿ ಸಹಿತ ಮೀನುಗಾರರು ಮಹಾರಾಷ್ಟ್ರ, ಗೋವಾ ವ್ಯಾಪ್ತಿ ದಾಟಿ ಅಂತಾರಾಷ್ಟ್ರೀಯ ಗಡಿ ಮೀರಿ ಸೆರೆಯಾಗಿರಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.


* 26 ದಿನಗಳು ಸಂದರೂ ಯಾವುದೇ ಸುಳಿವು ದೊರೆತಿಲ್ಲ. ಮಹಾರಾಷ್ಟ್ರ ಸಿಂಧು ದುರ್ಗಕ್ಕೆ ಜ.11ರಂದು ಮೀನುಗಾರರು, ಪೊಲೀಸರ ಎರಡು ತಂಡ ತೆರಳಲಿದೆ. ಮಾಲ್ವಾಣಿ ಬಂದರು ವ್ಯಾಪ್ತಿಯ ದುರ್ಗಮ ಪ್ರದೇಶ ಸಹಿತ ನದಿಯಲ್ಲಿ ಯಮಹಾ ಎಂಜಿನ್‌ ಅಳವಡಿಸಿದ ದೋಣಿ ಮೂಲಕ ತೀವ್ರ ಶೋಧದ ನಿಟ್ಟಿನಲ್ಲಿ ಸಿದ್ಧತೆ ನಡೆದಿದೆ. ಸೇನಾ ಕಾರ್ಯಾಚರಣೆಗೆ ಬೇಡಿಕೆ ಇಟ್ಟಿದ್ದರೂ ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗುವ ಯಾವುದೇ ಸೂಚನೆಯಿಲ್ಲ.

-ಸತೀಶ್‌ ಕುಂದರ್‌, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ