ಆ್ಯಪ್ನಗರ

ಪಡಿತರ ಅಕ್ಕಿ ಕೇರಳಕ್ಕೆ ಸಾಗಾಟ, ಲಾರಿ ಚಾಲಕ ಶಫೀಕ್ ಬಂಧನ, 30 ಟನ್ ಅಕ್ಕಿ, ಲಾರಿ, ಬೆಲೆರೋ ವಶ

ಲಾರಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿಐಬಿ ಪೊಲೀಸ್ ಇನ್‍ಪೆಕ್ಟರ್ ಕಿರಣ್ ಸಿ. ನೇತೃತ್ವದ ತಂಡ ದಾಳಿ ನಡೆಸಿ 10 ಟನ್ ಅಕ್ಕಿಯನ್ನು ಪತ್ತೆ ಮಾಡಿತ್ತು.

Vijaya Karnataka Web 14 Mar 2019, 6:04 pm
ಉಡುಪಿ: ಅರ್ಹ ಫಲಾನುಭವಿಗಳಿಗೆ ಸರಕಾರ ನೀಡುತ್ತಿದ್ದ ಪಡಿತರ ಅಕ್ಕಿಯನ್ನು ಲಾರಿ ಹಾಗೂ ಬೊಲೆರೋ ಪಿಕಪ್‍ನಲ್ಲಿ ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ವಶಪಡಿಸಿಕೊಂಡಿರುವ ಅಕ್ಕಿ
ವಶಪಡಿಸಿಕೊಂಡಿರುವ ಅಕ್ಕಿ


ಆರೋಪಿಗಳನ್ನು ಬಂಧಿಸಿರುವ ಪೊಲೀಸರು 380 ಚೀಲ (30 ಟನ್) ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಕ್ಯಾಲಿಕಟ್ ಇಲೆತ್ತೂರು ಪುದಿಯನಿರತ್ ವೆಂಗಾಳಿ ನಿವಾಸಿ ಸಿ.ಪಿ. ಶಫೀಕ್ (36) ಬಂಧಿತನಾಗಿದ್ದು, ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ನಾಯಕ್ ಪರಾರಿಯಾಗಿದ್ದಾನೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಘಟನೆ ವಿವರ: ಮಾ. 13, ರಾತ್ರಿ 9 ಗಂಟೆಗೆ ಹಿರಿಯಡ್ಕ ಪೇಟೆ ಬಳಿ ಆರೋಪಿ ಸಿ.ಪಿ. ಶಫೀಕ್ ಕೆಎಲ್ 56, ಬಿ 5499 ಲಾರಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ತುಂಬಿಸಿಕೊಂಡು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಡಿಸಿಐಬಿ ಪೊಲೀಸ್ ಇನ್‍ಪೆಕ್ಟರ್ ಕಿರಣ್ ಸಿ. ನೇತೃತ್ವದ ತಂಡ ದಾಳಿ ನಡೆಸಿ 10 ಟನ್ ಅಕ್ಕಿಯನ್ನು ಪತ್ತೆ ಮಾಡಿತ್ತು.

ಈ ಬಗ್ಗೆ ಉಡುಪಿ ತಹಶೀಲ್ದಾರರ ಗಮನಕ್ಕೆ ತಂದಿದ್ದು, ಉಡುಪಿ ಆಹಾರ ನಿರೀಕ್ಷಕರು, ಆಹಾರ ಶಿರಸ್ತೇದಾರರು, ಕಂದಾಯ ನಿರೀಕ್ಷಕರು ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಆ ಬಳಿಕ ಸದ್ರಿ ಲಾರಿಯನ್ನು ಆಹಾರ ನಿರೀಕ್ಷಕರು ಸ್ವಾಧೀನ ಪಡಿಸಿಕೊಂಡಿದ್ದಾರೆ.

ಬಂಧಿ ಆರೋಪಿ ಲಾರಿ ಚಾಲಕ ಶಫೀಕ್‍ನಿಂದ ಹೆಚ್ಚಿನ ಮಾಹಿತಿ ಪಡೆದ ಪೊಲೀಸರು ಪೆರ್ಡೂರು ರಥಬೀದಿಯ ಬಳಿಯಲ್ಲಿರುವ ರಾಜೇಶ್ ನಾಯಕ್ ಮಾಲೀಕತ್ವದ ಗೋದಾಮಿಗೆ ದಾಳಿ ಮಾಡಿದ್ದಾರೆ.

ಗೋದಾಮಿನಲ್ಲಿ 130 ಚೀಲ ಅಕ್ಕಿ, 400 ಖಾಲಿ ಗೋಣಿ ಚೀಲಗಳಿದ್ದು, ಎಫ್‍ಸಿಐ ಪಂಜಾಬ್ ಎಂದು ಮುದ್ರಿತವಾಗಿರುವುದು ಪತ್ತೆಯಾಗಿದೆ. ಗೋದಾಮಿನ ಹೊರಗಡೆ ಕೆಎ 20 ಸಿ 6410 ನಂಬರಿನ 50 ಚೀಲ ಅಕ್ಕಿ ತುಂಬಿಸಿದ್ದ ಬೊಲೆರೋ ಪಿಕಪ್‍ ವಾಹವನ್ನು ವಶಪಡಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ