ಆ್ಯಪ್ನಗರ

ಸೈನಿಕರಂತೆ ಬೂತ್ ಕಾಯದಿದ್ದರೆ ಚುನಾವಣೆ ಗೆಲ್ಲಲಾಗದು: ವೀರಪ್ಪ ಮೊಯ್ಲಿ

ಬಿಜೆಪಿ ಆಡಳಿತ ವೈಫಲ್ಯ ವಿರುದ್ಧ ಜನರ ಜತೆ ಸಂವಹನಕ್ಕೂ ಕಾಂಗ್ರೆಸ್ ವಿಫಲವಾಗಿದೆ. ಮೋದಿ ಆಡಳಿತದಿಂದ 25 ಕೋಟಿ ಉದ್ಯೋಗ ನಷ್ಟವಾಗಿದೆ. ಜೀವನದ ನೆಮ್ಮದಿ, ಸಂತೋಷ ಸೂಚ್ಯಂಕದಲ್ಲಿ ನಾವು ಪಾಕಿಸ್ಥಾನ, ಲೆಬನಾನ್ ಜತೆಗಿದ್ದೇವೆ

Vijaya Karnataka Web 24 Jun 2022, 7:00 pm
ಉಡುಪಿ: ಮಾನಸಿಕ ಸಿದ್ಧತೆ, ಸೈದ್ಧಾಂತಿಕ ಬದ್ಧತೆಯುಳ್ಳ ನಿಷ್ಠಾವಂತ ಕಾರ್ಯಕರ್ತರು ಪ್ರತಿಯೊಂದು ಬೂತನ್ನು ಸೈನಿಕರಂತೆ ಕಾಯದಿದ್ದರೆ ಮುಂದಿನ ಚುನಾವಣೆ ಗೆಲ್ಲಲಾಗದು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಹೇಳಿದ್ದಾರೆ.
Vijaya Karnataka Web ವೀರಪ್ಪ ಮೊಯ್ಲಿ
ವೀರಪ್ಪ ಮೊಯ್ಲಿ


ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪುತ್ತೂರು ಗ್ರಾಮದ ಅಮೃತ್ ಗಾರ್ಡನ್‍ನಲ್ಲಿ ನವ ಸಂಕಲ್ಪ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, 2017ರ ಗುಜರಾತ್ ಚುನಾವಣೆಯಲ್ಲಿ ಶೇ. 45 ಮತ, 83 ಸ್ಥಾನ ಗಳಿಸಿದ (ಬಿಜೆಪಿ ಶೇ. 37ಮತ, 99 ಸ್ಥಾನ) ಕಾಂಗ್ರೆಸ್ 18 ಬೂತ್‍ಗಳಲ್ಲಿ ಕಾರ್ಯಕರ್ತರಿಲ್ಲದೆ ಅಧಿಕಾರ ಕಳೆದುಕೊಂಡಿತು ಎಂದರು.

ಇತಿಹಾಸದ ಗೆಲುವು ಭವಿಷ್ಯಕ್ಕೆ ಮುನ್ನುಡಿಯಾಗಲು ಛಲ, ಸಂಕಲ್ಪ ಮುಖ್ಯ. ಕೊಂಕಣ ರೈಲು ಯೋಜನೆ ಸಹಿತ ಕೇಂದ್ರ, ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ರೂಪಿಸಿ ಜಾರಿಗೆ ತಂದ ಯೋಜನೆಗಳ ಬಗ್ಗೆ ಜನರಿಗೆ ತಿಳಿಹೇಳುವ ಸೌಜನ್ಯ ಕಾಂಗ್ರೆಸಿಗರಲ್ಲಿಲ್ಲ. ಕಷ್ಟವಾದರೂ ಪಕ್ಷ ಕಟ್ಟಬೇಕು. ಸ್ಲೋಗನ್ ಹೇಳಿ ಪಕ್ಷ ಕಟ್ಟಲಾಗದು. ಬಿಜೆಪಿ ಆಡಳಿತ ವೈಫಲ್ಯ ವಿರುದ್ಧ ಜನರ ಜತೆ ಸಂವಹನಕ್ಕೂ ಕಾಂಗ್ರೆಸ್ ವಿಫಲವಾಗಿದೆ. ಮೋದಿ ಆಡಳಿತದಿಂದ 25 ಕೋಟಿ ಉದ್ಯೋಗ ನಷ್ಟವಾಗಿದೆ. ಜೀವನದ ನೆಮ್ಮದಿ, ಸಂತೋಷ ಸೂಚ್ಯಂಕದಲ್ಲಿ ನಾವು ಪಾಕಿಸ್ಥಾನ, ಲೆಬನಾನ್ ಜತೆಗಿದ್ದೇವೆ ಎಂದರು.

ಬೆಳಕಿನತ್ತ ಗುಡಿಸಲು ವಾಸಿಗರ ಚಿತ್ತ: ಮೂರು ದಶಕಗಳಾದ್ರೂ ಕತ್ತಲಿನಲ್ಲಿಯೇ ದಿನದೂಡುತ್ತಿದ್ದಾರೆ ಇಲ್ಲಿನ ಜನರು..!

ಸದಸ್ಯತ್ವ ನೋಂದಣಿಯಲ್ಲಿ ಹಿನ್ನಡೆ: ಧ್ರುವ ನಾರಾಯಣ್

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಮಾತನಾಡಿ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನವ ಸಂಕಲ್ಪ ಶಿಬಿರವಾಗಬೇಕು. ಪಕ್ಷದ ಬೆಳವಣಿಗೆಗೆ ಪೂರಕವಾದ ಸದಸ್ಯತ್ವ ನೋಂದಣಿಯ ಪ್ರಾಮುಖ್ಯತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮರೆತಿದ್ದು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಎಚ್ಚರಿಸಿದರು. ಪ್ರಮೋದ್ ಮಧ್ವರಾಜ್ ಪಕ್ಷ ದ್ರೋಹವನ್ನು ಗಂಭೀರವಾಗಿ ಪರಿಗಣಿಸಿ ಸವಾಲಾಗಿ ಸ್ವೀಕರಿಸಬೇಕು. ನವನಾಯಕನಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ಕಲ್ಪಿಸಬೇಕು.

ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆ. 9ರಿಂದ 15 ರ ತನಕ ಪಾದಯಾತ್ರೆ ನಡೆಸಬೇಕು. ಅಗ್ನಿಪಥ ಯೋಜನೆ ಮೂಲಕ ಸೈನಿಕರ ನೈತಿಕತೆ ಕುಗ್ಗಿಸುವ ಕೆಲಸವಾಗುತ್ತಿದ್ದು ವಾರದೊಳಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ ಆಯೋಜಿಸಬೇಕು. 50ವರ್ಷದೊಳಗಿನವರಿಗೆ ಪಕ್ಷದ ಎಲ್ಲಾ ಹುದ್ದೆಗಳಲ್ಲಿ ಶೇ. 50 ಮೀಸಲು, ಕುಟುಂಬಕ್ಕೆ ಒಂದೇ ಹುದ್ದೆ, ಮಹಿಳೆಯರಿಗೆ ಶೇ. 33 ಮೀಸಲಿದೆ ಎಂದು ಹೇಳಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ ನಾವೆಲ್ಲಿ ಎಡವಿದ್ದೇವೆ ಎನ್ನುವ ಚಿಂತನೆ ಜತೆಗೆ ಪಕ್ಷ ಸಂಘಟನೆ ತಳಮಟ್ಟದಿಂದಾಗಬೇಕು. ಹಿಟ್ಲರ್ ಶಾಹಿ ಮೋದಿ ಸರಕಾರ ಕೋಮು ಭಾವನೆ ಕೆರಳಿಸುತ್ತಿದೆ. ವಿವಿಧ ಜಾತಿ, ವರ್ಗ, ಧರ್ಮದ ಜನರ ನಡುವೆ ಗೋಡೆ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಸಚಿವ ಅಭಯಚಂದ್ರ ಜೈನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ. ಎ. ಗಫೂರ್, ಮಮತಾ ಗಟ್ಟಿ ಮಂಗಳೂರು, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಯುವ ನಾಯಕ ಹರೀಶ್ ಕಿಣಿ ಅಲೆವೂರು, ವೆರೋನಿಕಾ ಕರ್ನೆಲಿಯೊ, ಗೀತಾ ವಾಗ್ಳೆ, ಪ್ರಸಾದ್‍ರಾಜ್ ಕಾಂಚನ್, ದೀಪಕ್ ಕೋಟ್ಯಾನ್ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಡಾ. ಸುನೀತಾ ಶೆಟ್ಟಿ ನಿರೂಪಿಸಿ, ವಂದಿಸಿದರು.

ಅಗ್ನಿವೀರರಿಗೆ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಶೇ. 75 ಮೀಸಲಾತಿ: ಸಚಿವ ಕೋಟಾ ಪೂಜಾರಿ

ಮೊಯ್ಲಿ ಭಾಷಣಕ್ಕೆ ಯುವಕರ ಅಪಸ್ವರ!

ಕಾಂಗ್ರೆಸ್ ನೇತೃತ್ವದ ಸರಕಾರ ಕೇಂದ್ರ, ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳನ್ನು ಒಂದೊಂದಾಗಿ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ವಿವರಿಸಿ, ಇದನ್ನು ಜನರಿಗೆ ತಿಳಿ ಹೇಳಬೇಕೆಂದಾಗ ಸಭೆಯ ನಡುವೆ ಯುವಕರು ಹೊಸದು ಹೇಳಿ, ಇದೆಲ್ಲಾ ಜನರಿಗೆ ಹೇಳಿ ಹೇಳಿ ಸಾಕಾಗಿದೆ ಎಂದರು. ನಾ ಹೇಳಿದ್ದು ಹಿತವಾಗದಿದ್ದರೆ ನಿಮ್ಮ ಬಳಿ ಹೊಸದೇನಿದೆ ಹೇಳಿ, ನಾವೆಲ್ಲಾ ಒಂದಾಗಿ ಪಕ್ಷ ಕಟ್ಟದಿದ್ದರೆ, ಬೂತ್ ಬಲವರ್ಧನೆ ಮಾಡದಿದ್ದರೆ ಗೆಲುವು ಅಸಾಧ್ಯ ಎಂದರು. ಉದ್ಘಾಟನೆ ಹೊರತು ವೇದಿಕೆಯಲ್ಲಿ ಒಬ್ಬರಿಗಷ್ಟೇ ಅವಕಾಶ ನೀಡಿದ್ದು ಕಾಂಗ್ರೆಸ್ ವೇದಿಕೆ ವೈಶಿಷ್ಟ್ಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ