ಆ್ಯಪ್ನಗರ

ಹಂಗಳೂರು: ಬಂಪರ್‌ ಸಿಗಡಿ ಬೆಳೆ

ಇಲ್ಲಿನ ಹಿರಿಯ ಸಿಗಡಿ ಕೃಷಿಕ ಮಂಜು ಬಿಲ್ಲವ ಅವರ ಸಿಗಡಿ ಕೆರೆಯಲ್ಲಿ ಬಂಪರ್‌ ಬೆಳೆ ಲಭಿಸಿದೆ.

Vijaya Karnataka 9 Jun 2019, 8:38 pm
ಕುಂದಾಪುರ: ಇಲ್ಲಿನ ಹಿರಿಯ ಸಿಗಡಿ ಕೃಷಿಕ ಮಂಜು ಬಿಲ್ಲವ ಅವರ ಸಿಗಡಿ ಕೆರೆಯಲ್ಲಿ ಬಂಪರ್‌ ಬೆಳೆ ಲಭಿಸಿದೆ.
Vijaya Karnataka Web sigadi


ಅತಿಯಾದ ಉಷ್ಣಾಂಶ ಹಿನ್ನೆಲೆಯಲ್ಲಿ ಸಿಗಡಿ ಮರಿಗಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುವ ಆತಂಕದ ನಡುವೆಯೂ ಉತ್ತಮ ಸಿಗಡಿ ಕೃಷಿ ನಿರ್ವಹಣೆ ಮಾಡಿರುವ ಅವರು ಹಂಗಳೂರು ಗ್ರಾಮದಲ್ಲಿರುವ ಒಂದೂವರೆ ಎಕರೆ ವಿಸ್ತೀರ್ಣದ ಕೆರೆಯಲ್ಲಿ 900 ಕೆಜಿಯಷ್ಟು ಸಿಗಡಿ ಬೆಳೆ ತೆಗೆದಿದ್ದಾರೆ. ಶನಿವಾರ ಬೆಳೆದ ಸಿಗಡಿಯನ್ನು ಕೆರೆಯಿಂದ ಮೇಲಕ್ಕೆತ್ತುವ ಕಾರ್ಯ ನಡೆಯಿತು.

58 ದಿನದಲ್ಲೇ ಬೆಳೆದ ಸಿಗಡಿ: ಕುಮಟಾ ಹ್ಯಾಚರಿಯಿಂದ ಸ್ಥಳೀಯ ನವಮಿ ಹೆಸರಿನ ಸಿಗಡಿ ತಳಿಯನ್ನು ಬೆಳೆಸಲಾಗಿತ್ತು. ಮಾಮೂಲಿಯಾಗಿ 90ರಿಂದ 100 ದಿನಗಳು ಮರಿಗಳ ಬೆಳವಣಿಗೆಗೆ ಸಮಯ ಬೇಕು. ನಮ್ಮ ಕೆರೆಯಲ್ಲಿ 58 ದಿನಕ್ಕೆ ನಿರೀಕ್ಷಿತ ಬೆಳವಣಿಗೆ ಕಂಡುಕೊಂಡಿವೆ. ಅಂದಾಜು 900 ಕೆಜಿ ಸಿಗಡಿ ಉತ್ತಮ ಗಾತ್ರದಲ್ಲಿ ಲಭಿಸಿದೆ. ಅಂದಾಜು 4 ಇಂಚು ಬೆಳವಣಿಗೆ ಕಂಡುಕೊಂಡಿದೆ.

ಸಿಗಡಿ ಬೆಳೆ ಗೋವಾ ಮಾರುಕಟ್ಟೆ ಅವಲಂಬಿಸಿದ್ದು, ಪ್ರಸ್ತುತ ಕೆಜಿಗೆ 230ರಿಂದ 270 ರೂ. ಧಾರಣೆಯಿದೆ. ಈ ಬಾರಿ ಬಿಸಿಲು ಹೆಚ್ಚಿದ್ದರಿಂದ ಅತಿಯಾದ ಉಷ್ಣ ಸಿಗಡಿ ಬೆಳವಣಿಗೆಗೆ ತೊಂದರೆಯಾದರೂ ಸೂಕ್ತ ನಿರ್ವಹಣೆ, ಆಹಾರ ಹಾಕುವಿಕೆ, ಹಿತವಾದ ವಾತಾವರಣ ಕಲ್ಪಿಸಿದ್ದರಿಂದ ಉತ್ತಮ ಬೆಳೆ ಲಭಿಸಿದೆ ಎಂದು ಹಂಗಳೂರು ಸಿಗಡಿ ಕೃಷಿಕ ಮಂಜು ಬಿಲ್ಲವ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ