ಆ್ಯಪ್ನಗರ

ಪೇಜಾವರ ಶ್ರೀಗಳ 80ನೇ ವರ್ಧಂತಿ: ಉಡುಪಿಗೆ ಆಗಮಿಸಿದ ರಾಷ್ಟ್ರಪತಿ

ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಮತ್ತು ಭದ್ರತಾ ನಿಯಮ ಪಾಲನೆ ಸಲುವಾಗಿ ಆದಿ ಉಡುಪಿಯಿಂದ ಶಾರದಾ ಮಂಟಪದ ತನಕ ವಾಹನ‌ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

Vijaya Karnataka Web 27 Dec 2018, 2:53 pm
ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಗಳ 80ನೇ ವರ್ಧಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಉಡುಪಿಗೆ ಆಗಮಿಸಿದ್ದಾರೆ. ರಾಷ್ಟ್ರಪತಿಯವರ ಆಗಮನದ ಹಿನ್ನೆಲೆಯಲ್ಲಿ ಶಿಷ್ಟಾಚಾರ ಮತ್ತು ಭದ್ರತಾ ನಿಯಮ ಪಾಲನೆ ಸಲುವಾಗಿ ಆದಿ ಉಡುಪಿಯಿಂದ ಶಾರದಾ ಮಂಟಪದ ತನಕ ವಾಹನ‌ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Vijaya Karnataka Web President Visits


ಮಣಿಪಾಲ‌ ಕಡೆಗೆ ತೆರಳುವ ಖಾಸಗಿ ಸಿಟಿ‌‌, ಸರ್ವೀಸ್, ಎಕ್ಸ್ ಪ್ರೆಸ್ ಬಸ್ಸುಗಳು ಬೀಡಿನಗುಡ್ಡರ ಶಾರದಾ‌ ಮಂಟಪ‌ ಮೂಲಕ ತೆರಳಿದರೆ ಕುಂದಾಪುರ, ಮಂಗಳೂರು ಕಡೆಗೆ ತೆರಳುವ ಖಾಸಗಿ,‌ಸರಕಾರಿ ಬಸ್ಸುಗಳು ಅಂಬಲಪಾಡಿ‌ ಬೈಪಾಸ್, ಓವರ್ ಬ್ರಿಡ್ಜ್ ಮೇಲೆ ಸಾಗಿದವು.

ರಥಬೀದಿ, ಶ್ರಿಕೃಷ್ಣಮಠ‌ ಸಂಪರ್ಕಿಸುವ‌ ರಸ್ತೆಗಳಲ್ಲಿ ಜನ ಮತ್ತು ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದು, ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ರಥಬೀದಿ, ಶ್ರೀಕೃಷ್ಣಮಠಕ್ಕೆ ಮೂರು ಹಂತದ‌ ಭದ್ರತೆ
ಬೆಳಗ್ಗೆ 6.45ರಿಂದ ಬಹುತೇಕ ಹಾಗೂ‌ 10.30ರಿಂದ ಮಧ್ಯಾಹ್ನ 1.30ರ ತನಕ ಝೀರೋ ಟ್ರಾಫಿಕ್ ಕಲ್ಪಿಸಿದ್ದು, ಆದಿ ಉಡುಪಿ ಕರಾವಳಿ ಬೈಪಾಸ್, ಬನ್ನಂಜೆ, ಸಿಟಿ‌ ಬಸ್‌ ನಿಲ್ದಾಣ, ಕಲ್ಸಂಕ ರಾಜಾಂಗಣ ವಾಹನ‌ ಪಾರ್ಕಿಂಗ್‌ ಪ್ರದೇಶದಲ್ಲಿ ಸಂಚಾರ ನಿರ್ಬಂಧವಿತ್ತು.

ಪೇಜಾವರ ಶ್ರೀ ಅಭಿನಂದಿಸಲು ಉಡುಪಿಗೆ ಕೋವಿಂದ್

ಈ ಹಿಂದೆ ಮಾಜಿ ರಾಷ್ಟ್ರಪತಿ‌ ಪ್ರಣಬ್ ಮುಖರ್ಜಿ ಬಂದಾಗ ಇಲ್ಲದ‌ ಭದ್ರತಾ ಕಟ್ಟುನಿಟ್ಟು ಈ ಬಾರಿ ಸಾರ್ವಜನಿಕರು, ಮಾಧ್ಯಮ‌ ಸಿಬ್ಬಂದಿಯನ್ನು ಕಾಡಿತು. ಪೇಜಾವರ ಮಠ, ಶ್ರೀಕೃಷ್ಣ ಮಠದೊಳಗೆ ರಾಷ್ಟ್ರಪತಿ ಆಗಮನದ ಹಿನ್ನೆಲೆಯಲ್ಲಿ ಅಧಿಕಾರಿಗಳು ವ್ಯವಸ್ಥಿತವಾಗಿ ಶಿಷ್ಟಚಾರ ಪಾಲನೆಗೆ ಗಮನ ನೀಡಿದ್ದರು.

ರಾಷ್ಟ್ರಪತಿ ಕೋವಿಂದ್‌ಗೆ ಮಂಗಳೂರಿನಲ್ಲಿ ಸ್ವಾಗತ
ಸನ್ಯಾಸ ಸ್ವೀಕರಿಸಿ 80ವರ್ಷಗಳನ್ನು ಪೂರೈಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಆಗಮಿಸಿದ ರಾಷ್ಟ್ರಪತಿ ಕೋವಿಂದ್ ಅವರು ಗುರುವಾರ ಬೆಳಗ್ಗೆ ಮಂಗಳೂರು ತಲುಪಿದರು.


ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಅವರನ್ನು ರಾಜ್ಯಪಾಲ ವಾಜುಭಾಯಿ ರುಡಾಭಾಯಿ ವಾಲಾ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಮಂಗಳೂರು ಮೇಯರ್ ಭಾಸ್ಕರ್ ಕೆ. ಬರಮಾಡಿಕೊಂಡರು. ಮಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮುಖೇನ ಆದಿಉಡುಪಿ ಹೆಲಿಪ್ಯಾಡ್‌ಗೆ ನಿರ್ಗಮಿಸಿದರು. ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನಕ್ಕಾಗಿ ಇವರು ಇದೇ ಮೊದಲ ಬಾರಿ ಉಡುಪಿಗೆ ಭೇಟಿ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ