ಆ್ಯಪ್ನಗರ

ರಾಷ್ಟ್ರಪತಿ ವಿಶಿಷ್ಟ ಪೊಲೀಸ್ ಸೇವಾ ಪದಕಕ್ಕೆ ಭಾಜನರಾದ ಪ್ರಕಾಶ್ ಬ್ರಹ್ಮಾವರ

ರಾಷ್ಟ್ರಪತಿ ವಿಶಿಷ್ಟ ಪೊಲೀಸ್ ಸೇವಾ ಪದಕಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯುರೋದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬ್ರಹ್ಮಾವರ ಭಾಜನರಾಗಿದ್ದಾರೆ.

Vijaya Karnataka Web 25 Jan 2021, 5:12 pm
ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯುರೋದಲ್ಲಿ ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಬ್ರಹ್ಮಾವರ ಪ್ರಜಾಪ್ರಭುತ್ವ ದಿನದ ಹಿನ್ನೆಲೆಯಲ್ಲಿ ನೀಡುವ ರಾಷ್ಟ್ರಪತಿ ವಿಶಿಷ್ಟ ಪೊಲೀಸ್ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
Vijaya Karnataka Web ಪ್ರಕಾಶ್ ಬ್ರಹ್ಮಾವರ


ಪ್ರಕಾಶ್ ಬ್ರಹ್ಮಾವರ ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿರುವ ಉತ್ಕೃಷ್ಟ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. 1993ರಲ್ಲಿ ಪೊಲೀಸ್ ಇಲಾಖೆಗೆ ಕಾನ್‍ಸ್ಟೇಬಲ್ ಆಗಿ ಸೇರ್ಪಡೆಗೊಂಡಿದ್ದ ಪ್ರಕಾಶ್‍ ಅವಿಭಜಿತ ದ.ಕ. ಜಿಲ್ಲೆಯ ವೇಣೂರು, ಉಡುಪಿ, ಸಂಚಾರ, ಡಿಸಿಆರ್‌ಬಿ, ಮಣಿಪಾಲ, ಕಾಪು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. 2009 ರಲ್ಲಿ ಹೆಡ್ ಕಾನ್‍ಸ್ಟೇಬಲ್ ಆಗಿ ಮುಂಬಡ್ತಿ ಹಾಗೂ 2017 ರಲ್ಲಿ ಎಎಸ್‍ಐ ಆಗಿ ಭಡ್ತಿ ಹೊಂದಿದ್ದರು.

2018 ರಿಂದ ಜಿಲ್ಲಾ ಪೊಲೀಸ್ ಕಚೇರಿಯ ಅಪರಾಧ ದಾಖಲೆಗಳ ವಿಭಾಗ (ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯೂರೋ)ದಲ್ಲಿ ಸಹಾಯಕ ಉಪ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಾಹಸ ಮೆರೆದ ಪೊಲೀಸರಿಗೆ ಶೌರ್ಯ ಪದಕ ಗೌರವ

ಇವರು 2004 ರಲ್ಲಿ ಹೈದರಾಬಾದ್‍ನಲ್ಲಿ ನಡೆದ 47 ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡವನ್ನು ಪ್ರತಿನಿಧಿಸಿ 5,000 ರೂ. ನಗದು ಸಹಿತ ಬೆಳ್ಳಿ ಪದಕ ಪಡೆದಿದ್ದರು. ಬೆಂಗಳೂರಿನಲ್ಲಿ 2009 ರಲ್ಲಿ ನಡೆದ 52 ನೇ ಅಖಿಲ ಭಾರತ ಪೊಲೀಸ್ ಕರ್ತವ್ಯ ಸಮಾವೇಶದಲ್ಲಿ 10,000 ರೂ. ನಗದು ಸಹಿತ ಬೆಳ್ಳಿ ಪದಕದ ಜತೆಗೆ ಎಡಿಜಿಪಿ ಮೆಚ್ಚುಗೆಗೂ ಪಾತ್ರವಾಗಿದ್ದರು.

ಕೆಚ್ಚೆದೆಯ ದಾದಾಗೆ ಅಶೋಕ ಚಕ್ರ, ನಿರಂಜನ್‌ಗೆ ಶೌರ್ಯ ಪ್ರಶಸ್ತಿ

2003 ರಿಂದ 2013 ರ ತನಕ ಅಪರಾಧ ನಿಗಾ ಮತ್ತು ಸಾಕ್ಷ್ಯ ಸಂಗ್ರಹ, ತನಿಖೆ ಕುರಿತಾದ ಸ್ಪರ್ಧೆಯಲ್ಲಿ ಕರ್ನಾಟಕ ತಂಡಕ್ಕೆ ತರಬೇತಿ ನೀಡಿದ್ದರು. ಗಂಗೊಳ್ಳಿಯಲ್ಲಿ ತಂದೆಯ ಕೊಲೆ ಮಾಡಿದ ಮಗನ ಬಂಧನ(2009), ಮಣಿಪಾಲದಲ್ಲಿ ಕೊಲೆ ಸ್ಥಳದಲ್ಲಿ ಸಿಕ್ಕಿದ್ದ ಮೊಬೈಲ್ ಆಧಾರದಲ್ಲಿ ಆರೋಪಿ ಪತ್ತೆ(2009) ಬ್ರಹ್ಮಾವರ, ಹೆಬ್ರಿ, ಶಿರ್ವ, ಉಡುಪಿ ನಗರದಲ್ಲಿ ನಡೆದ ಹಲವಾರು ಪ್ರಕರಣಗಳಲ್ಲಿ ಫಿಂಗರ್ ಪ್ರಿಂಟ್ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ನೆರವಾಗಿದ್ದರು.
ಪೊಲೀಸ್ ತರಬೇತಿ ಶಾಲೆಯಲ್ಲೂ ನೆರವಾಗುತ್ತಿರುವ ಪ್ರಕಾಶ್ 1,060 ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ದಾಖಲೆಗಳ ಸಂಗ್ರಹ ಸಲ್ಲಿಕೆಯಲ್ಲೂ ಪರಿಣತರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ