ಆ್ಯಪ್ನಗರ

ಉಡುಪಿ: ಸೋಂಕು ಹೆಚ್ಚಳಕ್ಕೆ ಕಾರಣ ಇದು ಇರಬಹುದಾ?

ಶೌಚಾಲಯ ಪದೇಪದೆ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರವನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಪಾಲಿಸಲು ನಿಗಾ ಇಡದಿರುವುದೂ ಕೂಡ ಸೋಂಕು ಹೆಚ್ಚಲು ಕಾರಣವಾಗಿರಬಹುದು

Vijaya Karnataka Web 6 Jun 2020, 10:48 am
ಉಡುಪಿ: ಮಹಾರಾಷ್ಟ್ರದ ಸಹಿತ ಹೊರ ರಾಜ್ಯದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾದ 8 ಸಾವಿರಕ್ಕೂ ಅಧಿಕ ಮಂದಿಯ ಪೈಕಿ 500ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಲು ಕ್ವಾರಂಟೈನ್‌ ಕೇಂದ್ರಗಳೇ ಕಾರಣವಾಗಿವೆಯೇ?
Vijaya Karnataka Web ಐಸೋಲೇಷನ್‌ ವಾರ್ಡ್‌
ಐಸೋಲೇಷನ್‌ ವಾರ್ಡ್‌


ಹೀಗೊಂದು ಪ್ರಶ್ನೆ ಮುಂಬಯಿ ತುಳುವರ ವಾಟ್ಸಾಪ್‌ನಿಂದ ಹರಿದಾಡುತ್ತಿದೆ. ಗಂಟಲು ಸ್ರಾವ ಮಾದರಿ ಕಳಿಸಿ 7- 14 ದಿನಗಳಾದರೂ ಪ್ರಯೋಗಾಲಯಗಳಿಂದ ಪರೀಕ್ಷಾ ವರದಿ ಬಾರದಿರುವುದು ಕ್ವಾರಂಟೈನ್‌ ಕೇಂದ್ರಗಳಲ್ಲಿ ಸೋಂಕು ಹೆಚ್ಚಲು ಕಾರಣವಾಗಿದೆ. ಸೋಂಕಿನ ಲಕ್ಷಣ ಇಲ್ಲದವರನ್ನು ಪರೀಕ್ಷಾ ವರದಿ ಬಾರದಿದ್ದರೂ 7, 14 ದಿನಗಳ ಕ್ವಾರಂಟೈನ್‌ ಮುಗಿಸಿದ ಕಾರಣಕ್ಕೆ ನೇರವಾಗಿ ಮನೆಗೆ ಕಳುಹಿಸುವ ಸರಕಾರದ ನಿರ್ಧಾರವೂ ಎಡವಟ್ಟಿಗೆ ಕಾರಣವಾಗಿದೆ.

ಶೌಚಾಲಯ ಪದೇಪದೆ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರವನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಪಾಲಿಸಲು ನಿಗಾ ಇಡದಿರುವುದೂ ಕೂಡ ಸೋಂಕು ಹೆಚ್ಚಲು ಕಾರಣವಾಗಿರಬಹುದು ಎಂದು 7 ದಿನಗಳ ಕ್ವಾರಂಟೈನ್‌ ಮುಗಿಸಿ ಮನೆಗೆ ತೆರಳಿದ ಕರುಣಾಕರ್‌ ತಿಳಿಸಿದ್ದಾರೆ.

ಶಾಸಕ ವಿ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿಕಾರ್ಕಳ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳನ್ನು ವ್ಯವಸ್ಥಿತವಾಗಿ ಮುನ್ನಡೆಸಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದರೆ, ಜಿಲ್ಲೆಯ ಉಳಿದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಅವ್ಯವಸ್ಥೆಯ ಪ್ರಕರಣಗಳ ದೂರು ಬೆರಳೆಣಿಕೆಯಲ್ಲಿದೆ.

ಸರಕಾರಿ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳನ್ನು 14 ದಿನಗಳ ಕಾಲ ಮುನ್ನಡೆಸುವುದು ಆಹಾರ, ಸಿಬ್ಬಂದಿ, ವೈದ್ಯಕೀಯ ಸಲಕರಣೆ ಒದಗಿಸುವುದು ಕಷ್ಟಸಾಧ್ಯವೆಂದೇ ಮಹಾರಾಷ್ಟ್ರದವರಿಗೆ 7 ದಿನಕ್ಕೆ ಸೀಮಿತಗೊಳಿಸಲಾಗಿದೆ. ಉಳಿದವರನ್ನು ನೇರವಾಗಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ