ಆ್ಯಪ್ನಗರ

ಚರ್ಚೆ ಜಗಳಕ್ಕಿಂತ ಧಾರ್ಮಿಕ ಶಿಷ್ಟಾಚಾರ ಉಳಿಸಿ: ಪಾಲಿಮಾರು ಶ್ರೀ

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ದೇಶಕ್ಕೆ ಹೇಗೆ ಸಂವಿಧಾನ, ರಾಷ್ಟ್ರಪತಿ ಸಹಿತ ಗಣ್ಯರಿಗೆ ಪ್ರೊಟೊಕಾಲ್ (ಶಿಷ್ಟಾಚಾರ) ಇರುವಂತೆ ದೇಶದ ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಸಂವಿಧಾನವಿದೆ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.

Vijaya Karnataka Web 2 Jan 2019, 7:02 pm
ಉಡುಪಿ: ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ 10ರಿಂದ 50ವಯಸ್ಸಿನ ಮಹಿಳೆಯರ ಪ್ರವೇಶ ವಿಚಾರದಲ್ಲಿ ಚರ್ಚೆ,ಜಗಳಕ್ಕಿಂತ ಧಾರ್ಮಿಕ ಶಿಷ್ಟಾಚಾರ ಉಳಿಸಿ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದ್ದಾರೆ.
Vijaya Karnataka Web palimaru shree


ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಹೇಗೆ ಸಂವಿಧಾನ, ರಾಷ್ಟ್ರಪತಿ ಸಹಿತ ಗಣ್ಯರಿಗೆ ಪ್ರೊಟೊಕಾಲ್(ಶಿಷ್ಟಾಚಾರ) ಇರುವಂತೆ ದೇಶದ ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಸಂವಿಧಾನವಿದೆ. ದೇವಳದ ನಿಯಮ, ಭಕ್ತರ ನಂಬಿಕೆ ಅತಿ ಮುಖ್ಯ ಎಂದರು.

ಅಯ್ಯಪ್ಪನ ಸನ್ನಿಧಾನಕ್ಕೆ 10ರೊಳಗಿನ, 50ರ ಮೇಲಿನ ಮಹಿಳೆಯರಿಗೆ ಪ್ರವೇಶಾವಕಾಶವಿದೆ. ಹೆಣ್ಮಕ್ಕಳು ಕ್ಷೇತ್ರಕ್ಕೆ ಬರಲೇಬಾರದೆನ್ನುವ ನಿರ್ಬಂಧವಿಲ್ಲ. ಭಕ್ತಿ ಬದಲು ಬಲಾತ್ಕಾರದಿಂದ ಕ್ಷೇತ್ರ ಪ್ರವೇಶ ಸರಿಯಲ್ಲ. ಸುಪ್ರೀಂ ಕೋರ್ಟು ತೀರ್ಪು ಪರಾಮರ್ಶಿಸಲು ನಮ್ಮ ಮನವಿಯಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ