ಆ್ಯಪ್ನಗರ

ಕೊರೊನಾ ವಾರಿಯರ್ಸ್‌ಗಳಿಗೆ ಅವಮಾನ ಮಾಡಬೇಡಿ, ಖಾಸಗಿ ಆಸ್ಪತ್ರೆಗಳ ಭ್ರಷ್ಟಾಚಾರ ಬಗ್ಗೆ ಮಾಹಿತಿ ಕೊಡಿ

ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಆಸ್ಪತ್ರೆಗಳು ಹಣದ ದಂಧೆ ಮಾಡುತ್ತಿರುವ ಕುರಿತು ಸುಳ್ಳು ಆರೊಪ ಹೊರಿಸಲಾಗುತ್ತಿದೆ. ಸರಕಾರವೇ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿಸುತ್ತಿದೆ. ಹಣಕಾಸಿನ ಅವ್ಯವಹಾರದ ಬಗ್ಗೆ ಯಾರಲ್ಲಾದರೂ ದಾಖಲೆಯಿದ್ದರೆ ಕೊಡಬಹುದು.

Vijaya Karnataka Web 24 Aug 2020, 8:22 pm
ಉಡುಪಿ: ಕೊರೊನಾ ವಾರಿಯರ್ಸ್‌ಗಳಿಗೆ ಅವಮಾನ ಮಾಡಬೇಡಿ. ಖಾಸಗಿ ಆಸ್ಪತ್ರೆಗಳ ಭ್ರಷ್ಟಾಚಾರದ ಬಗ್ಗೆ ಮಾಹಿತಿ, ದಾಖಲೆ ಇದ್ದರೆ ತನಿಖಾ ಸಂಸ್ಥೆಗಳಿಗೆ ಕೊಡಿ, ದಾಖಲೆಗಳಿಲ್ಲದೆ ಆರೋಪ ಹೊರಿಸಿದರೆ ಮುಂದಿನ ದಿನಗಳಲ್ಲಿಕಷ್ಟಕ್ಕೆ ಸಿಲುಕುತ್ತೀರಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಎಚ್ಚರಿಕೆ ನೀಡಿದ್ದಾರೆ.
Vijaya Karnataka Web ಜಗದೀಶ್‌
ಜಗದೀಶ್‌


ಆರು ದಿನಗಳ ಹೋಂ ಕ್ವಾರಂಟೈನ್‌ ಬಳಿಕ ಸೋಮವಾರ ವೀಡಿಯೋ ಸಂದೇಶ ನೀಡಿದ ಅವರು, 26 ವರ್ಷದ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ವೈದ್ಯಕೀಯ ತಜ್ಞರ ಸಮಿತಿ ನೇಮಿಸಿದ್ದು ವೈದ್ಯರ ನಿರ್ಲಕ್ಷ್ಯದ ಅಂಶಗಳು ವರದಿಯಲ್ಲಿದ್ದರೆ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಕಳದ ಶವವನ್ನು ಕುಂದಾಪುರಕ್ಕೆ ಒಯ್ದ ಪ್ರಕರಣದ ತನಿಖೆಗೂ ಸಮಿತಿ ನೇಮಿಸಿಸಲಾಗಿದೆ. ಸಂಬಂಧಿತರಿಗೆ ನೋಟೀಸ್‌ ನೀಡಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮೃತರ ಮಗನ ಜತೆಗೂ ಮಾತನಾಡಿ, ಅಚಾತುರ್ಯಕ್ಕೆ ವಿಷಾದದೊಂದಿಗೆ ಕ್ಷಮೆಯನ್ನೂ ಕೇಳಿದ್ದೇನೆ ಎಂದರು.

ಖಾಸಗಿ ಆಸ್ಪತ್ರೆಗಳು ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ಆಸ್ಪತ್ರೆಗಳು ಹಣದ ದಂಧೆ ಮಾಡುತ್ತಿರುವ ಕುರಿತು ಸುಳ್ಳು ಆರೊಪ ಹೊರಿಸಲಾಗುತ್ತಿದೆ. ಸರಕಾರವೇ ಖಾಸಗಿ ಆಸ್ಪತ್ರೆಗಳಿಗೆ ಹಣ ಪಾವತಿಸುತ್ತಿದೆ. ಹಣಕಾಸಿನ ಅವ್ಯವಹಾರದ ಬಗ್ಗೆ ಯಾರಲ್ಲಾದರೂ ದಾಖಲೆಯಿದ್ದರೆ ಕೊಡಬಹುದು. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಕೊರೊನಾ ವಾರಿಯರ್ಸ್‌ಗಳ ಮಾನಸಿಕ ಸ್ಥೈರ್ಯ ಕುಸಿಯುವಂತೆ ಮಾಡುವ ಕಿಡಿಗೇಡಿಗಳ ಕೃತ್ಯ, ಬೇಜವಾಬ್ದಾರಿ ವರ್ತನೆ ವಿರುದ್ಧ ಸೂಕ್ತ ಕ್ರಮ ನಿಶ್ಚಿತ ಎಂದು ಜಿಲ್ಲಾಧಿಕಾರಿ ಜಗದೀಶ್‌ ತಿಳಿಸಿದರು.

ಟೆಸ್ಟ್‌ ಹೆಚ್ಚಳ ಯಾಕೆ?

ಕೊರೊನಾ ಸೋಂಕಿನ ಲಕ್ಷಣ ಉಳ್ಳವರು ಮತ್ತು ಇಲ್ಲದವರು ಹಾಗೂ ಸಂಪರ್ಕಿತರನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ, ಕ್ವಾರಂಟೈನ್‌, ಐಸೊಲೇಶನ್‌ ನಿಟ್ಟಿನಲ್ಲಿ ಹೆಚ್ಚೆಚ್ಚು ಪರೀಕ್ಷೆಗಳಾಗಬೇಕು. ಈ ನಿಟ್ಟಿನಲ್ಲಿ ರೋಗಲಕ್ಷಣವುಳ್ಳ ಜನರು ತಾವಾಗಿಯೇ ಮುಂದೆ ಬರಬೇಕು.

ಶೇ. 90 ಜನರಲ್ಲಿ ಸೋಂಕಿನ ಲಕ್ಷಣವಿಲ್ಲ. ರೋಗ ಲಕ್ಷಣವಿಲ್ಲದವರು ಮನೆಯಲ್ಲೇ ಇರಬಹುದು (ಹೋಂ ಐಸೊಲೇಶನ್‌ ವ್ಯವಸ್ಥೆಯಿದೆ), ಬೇರೆಯವರಿಗೆ ಸೋಂಕು ಹರಡುವ ಅಪಾಯವಿಲ್ಲ. ಉಸಿರಾಟದ ಸಮಸ್ಯೆ, ಜ್ವರವುಳ್ಳವರು ಆದಷ್ಟು ಬೇಗ ಪರೀಕ್ಷೆಗೊಳಗಾಗಿ ಅಗತ್ಯವಿದ್ದರೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ