ಆ್ಯಪ್ನಗರ

ಕಂದಾಯ ನೌಕರರ ಕ್ರೀಡಾಕೂಟ ರೆವಿನ್ಯೂ ಕಪ್‌-2019 ಉದ್ಘಾಟನೆ

ಮನುಷ್ಯ ಜೀವನದ ಬಹುಮುಖ್ಯ ಭಾಗವಾಗಿ ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಅತೀವ ಕಾರ್ಯದೊತ್ತಡದಿಂದ ಬಳಲುವ ಕಂದಾಯ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಉತ್ತಮ ಆಹಾರ, ಹಿತಮಿತ ವ್ಯಾಯಾಮ ನಿಯಮಿತವಾಗಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ ನುಡಿದರು.

Vijaya Karnataka 21 Jan 2019, 5:00 am
ಕುಂದಾಪುರ : ಮನುಷ್ಯ ಜೀವನದ ಬಹುಮುಖ್ಯ ಭಾಗವಾಗಿ ಕಂದಾಯ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಅತೀವ ಕಾರ್ಯದೊತ್ತಡದಿಂದ ಬಳಲುವ ಕಂದಾಯ ನೌಕರರು ತಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕು. ಉತ್ತಮ ಆಹಾರ, ಹಿತಮಿತ ವ್ಯಾಯಾಮ ನಿಯಮಿತವಾಗಿರಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ ನುಡಿದರು.
Vijaya Karnataka Web kreedakoota


ಭಾನುವಾರ ಇಲ್ಲಿನ ಗಾಂಧಿಮೈದಾನದಲ್ಲಿ ಕಂದಾಯ ನೌಕರರ ಸಂಘ ಕುಂದಾಪುರ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ಸಂಘ ಆಶ್ರಯದಲ್ಲಿ ಹಮ್ಮಿಕೊಂಡ ಕಂದಾಯ ನೌಕರರ ಕ್ರೀಡಾಕೂಟ ರೆವಿನ್ಯೂಕಪ್‌-2019 ಉದ್ಘಾಟಿಸಿ ಮಾತನಾಡಿದರು. ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಬಹಳಷ್ಟು ಆರೋಗ್ಯ ಸಮಸ್ಯೆ ಎದುರಿಸುವುದನ್ನು ಕಂಡಿದ್ದೇನೆ. ಉತ್ತಮ ಆರೋಗ್ಯಕ್ಕಾಗಿ ಕ್ರೀಡೆ, ವ್ಯಾಯಾಮ ಸಹಕಾರಿ. ಕಂದಾಯ ನೌಕರರು ಕ್ರೀಡಾಕೂಟ ಆಯೋಜಿಸುವ ಮೂಲಕ ಉತ್ತಮ ಹೆಜ್ಜೆ ಇರಿಸಿದ್ದಾರೆ. ಇದು ನಿರಂತರವಾಗಿರಲಿ ಎಂದರು.

ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮತ್ತು ತಹಸೀಲ್ದಾರ ತಿಪ್ಪೇಸ್ವಾಮಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರೆಗಾರ್‌, ಯುವಜನ ಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಕಂದಾಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೆ.ರಾಮಚಂದ್ರರಾವ್‌, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಭರತ್‌ ವಿ.ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ದಿ. ಐಪಿಎಸ್‌ ಅಧಿಕಾರಿ ಮಧುಕರ ಶೆಟ್ಟಿ, ಗ್ರಾಮಲೆಕ್ಕಿಗರಾದ ಪರಮೇಶ್ವರ, ಸಾಹೇಬ ಪಾಟೀಲ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗ್ರಾಮಲೆಕ್ಕಿಗ ಆನಂದ ಪ್ರಾರ್ಥಿಸಿದರು. ಪ್ರಶಾಂತ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಕಂದಾಯ ನಿರೀಕ್ಷ ಕ ಅಶೋಕ್‌ ವಂದಿಸಿದರು.

ಅಪರ ಜಿಲ್ಲಾಧಿಕಾರಿ ಬೌಲಿಂಗ್‌, ಡಿಸಿ ಬ್ಯಾಟಿಂಗ್‌: ಕುಂದಾಪುರ: ಕಾರ್ಯಬಾಹುಳ್ಯದಿಂದ ಸದಾ ಬ್ಯುಸಿಯಾಗಿರುವ ಅಧಿಕಾರಿಗಳು ಭಾನುವಾರ ಗಾಂಧಿಮೈದಾನದಲ್ಲಿ ಸಕತ್‌ ಗೆಲುವಾಗಿದ್ದರು. ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್‌ ಬ್ಯಾಟ್‌ ಹಿಡಿದು ಮೈದಾನಕ್ಕಿಳಿದರೆ, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಬೌಲಿಂಗ್‌ಗೆ ಧುಮುಕಿದ್ದರು. ವಿದ್ಯಾಕುಮಾರಿಯವರ ಪ್ರಥಮ ಬೌಲ್‌ ಮಿಸ್‌ ಮಾಡಿಕೊಂಡ ಡಿಸಿಯವರು ಎರಡನೆ ಬಾಲ್‌ಗೆ ಬ್ಯಾಟ್‌ ಮೂಲಕ ತಕ್ಕ ಉತ್ತರ ನೀಡುವ ಮೂಲಕ ಕ್ರಿಕೆಟ್‌ ಪಂದ್ಯಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಅಂಗಣದಲ್ಲಿ ತ್ರೋಬಾಲ್‌ ಎಸೆಯುವ ಮೂಲಕ ಮಹಿಳೆಯರ ತ್ರೋಬಾಲ್‌ ಪಂದ್ಯಾಟಕ್ಕೂ ಚಾಲನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ