ಆ್ಯಪ್ನಗರ

ರೋವರ್‌-ರೇಂಜರ್ಸ್‌ ನಡಿಗೆ ಪರಿಸರದ ಕಡೆಗೆ

ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್‌-ರೇಂಜರ್ಸ್‌ ಘಟಕದ ವತಿಯಿಂದ ರೋವರ್ಸ್‌ ಲೀಡರ್‌ ಗಿರೀಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಹಡಿನ್‌ ಇಕೋ ಬೀಚ್‌, ಬೆಳ್ಕೆ, ಭಟ್ಕಳ ಶನಿವಾರದಂದು ರೋವರ್‌-ರೇಂಜರ್ಸ್‌ ನಡಿಗೆ ಪರಿಸರದ ಕಡೆಗೆ ಎಂಬ ಒಂದು ದಿನದ ಶಿಬಿರ ಆಯೋಜಿಸಲಾಗಿತ್ತು.

Vijaya Karnataka 2 Apr 2019, 5:00 am
ಬೈಂದೂರು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್‌-ರೇಂಜರ್ಸ್‌ ಘಟಕದ ವತಿಯಿಂದ ರೋವರ್ಸ್‌ ಲೀಡರ್‌ ಗಿರೀಶ್‌ ಕುಮಾರ್‌ ಅವರ ನೇತೃತ್ವದಲ್ಲಿ ಹಡಿನ್‌ ಇಕೋ ಬೀಚ್‌, ಬೆಳ್ಕೆ, ಭಟ್ಕಳ ಶನಿವಾರದಂದು ರೋವರ್‌-ರೇಂಜರ್ಸ್‌ ನಡಿಗೆ ಪರಿಸರದ ಕಡೆಗೆ ಎಂಬ ಒಂದು ದಿನದ ಶಿಬಿರ ಆಯೋಜಿಸಲಾಗಿತ್ತು.
Vijaya Karnataka Web KDP-1RRovers


ಶಿಬಿರದಲ್ಲಿ 24 ರೋವರ್‌-ರೇಂಜರ್ಸ್‌ ವಿದ್ಯಾರ್ಥಿಗಳು ಭಾಗವಹಿಸಿ ಹಡಿನ್‌ ಇಕೋ ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ನಂತರ ಹಡಿನ್‌ ಇಕೋ ಪಾರ್ಕನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಜೆ ಅಲ್ಲಿನ ಉಪ ವಲಯ ಅರಣ್ಯಾಧಿಕಾರಿಗಳಾದ ಪ್ರಮೋದ್‌ ನಾಯಕ್‌ ಪರಿಸರದ ರಕ್ಷ ಣೆಯ ಅವಶ್ಯಕತೆಯ ಬಗೆಗೆ ಉಪನ್ಯಾಸ ನೀಡಿ, ಸಾರ್ವಜನಿಕರ ಸಹಕಾರದಿಂದ ಮಾತ್ರ ಪರಿಸರ ಸಂರಕ್ಷ ಣೆ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಅರಣ್ಯ ಇಲಾಖೆ ಸಿಬ್ಬಂದಿಗಳು ಸಹ ಕೈ ಜೋಡಿಸಿದರು. ಸಹಾಯಕ ಪ್ರಾಧ್ಯಾಪಕರಾದ ನವೀನ್‌ ಎಚ್‌.ಜಿ. ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ