ಆ್ಯಪ್ನಗರ

ಹಿರಿಯಡ್ಕ ಜೈಲರ್‌ನಿಂದ 3.86 ಲಕ್ಷ ರೂ. ದುರುಪಯೋಗ

ಹಿರಿಯಡ್ಕದ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಆರು ವರ್ಷಗಳ ಹಿಂದೆ ಜೈಲರ್‌ ಒಬ್ಬರು ಸರಕಾರಿ ಹಣ 3.86ಲಕ್ಷ ರೂ. ದುರುಪಯೋಗ ಮಾಡಿದ್ದು ಇಲಾಖಾ ಲೆಕ್ಕ ಪರಿಶೋಧನೆಯಿಂದ ಬೆಳಕಿಗೆ ಬಂದಿದೆ.

Vijaya Karnataka 22 May 2019, 5:00 am
ಉಡುಪಿ: ಹಿರಿಯಡ್ಕದ ಅಂಜಾರಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಆರು ವರ್ಷಗಳ ಹಿಂದೆ ಜೈಲರ್‌ ಒಬ್ಬರು ಸರಕಾರಿ ಹಣ 3.86ಲಕ್ಷ ರೂ. ದುರುಪಯೋಗ ಮಾಡಿದ್ದು ಇಲಾಖಾ ಲೆಕ್ಕ ಪರಿಶೋಧನೆಯಿಂದ ಬೆಳಕಿಗೆ ಬಂದಿದೆ.
Vijaya Karnataka Web rs 3 86 lakh from hiroydka jailer abuse
ಹಿರಿಯಡ್ಕ ಜೈಲರ್‌ನಿಂದ 3.86 ಲಕ್ಷ ರೂ. ದುರುಪಯೋಗ


ಜೈಲರ್‌ ಎನ್‌. ಎಸ್‌. ಶಿವಕುಮಾರ್‌ 2012, ಜ. 19ರಿಂದ 2013, ಜು. 17ರ ತನಕ ಪ್ರಭಾರ ಅಧೀಕ್ಷಕರಾಗಿದ್ದ ಸಂದರ್ಭ ಅವ್ಯವಹಾರದ ಆರೋಪ ಎದುರಾಗಿದ್ದು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2009, ನ. 1ರಿಂದ 2013, ಆ. 27ರ ತನಕದ ಇಲಾಖಾ ಲೆಕ್ಕಪರಿಶೋಧನೆ ಸಂದರ್ಭ ಸರಕಾರಿ ಹಣವನ್ನು ಯಾವುದೇ ದಾಖಲೆಗಳಿಲ್ಲದೆ ದುರುಪಯೋಗ ಮಾಡಿದ ಹಲವು ಪ್ರಕರಣಗಳು ಪತ್ತೆಯಾಗಿವೆ.

ಪಂಪ್‌ ವಿದ್ಯುತ್‌ ಜೋಡಣೆ, ನಲ್ಲಿಗಳ ಬದಲಾವಣೆಗೆ ಸಂಬಂಧಿಸಿ 10,150ರೂ., ಕಂಪ್ಯೂಟರ್‌ ಟೇಬಲ್‌ ಕುರ್ಚಿ ಖರೀದಿ: 12,050ರೂ., 9ಕೊಡೆ ಖರೀದಿಎ 2,520ರೂ., ಲೇಖನ ಸಾಮಗ್ರಿ ಖರೀದಿ: 16,118ರೂ. ದುರುಪಯೋಗ ಕಂಡು ಬಂದಿದೆ.

ಪೊಲೀಸ್‌ ಹೌಸಿಂಗ್‌ ಕಾರ್ಪೊರೇಷನ್‌ ವತಿಯಿಂದ ಕೊರೆಸಿದ ಕೊಳವೆ ಬಾವಿಗೆ ಅಳವಡಿಸಿದ ಮೋಟಾರು ಪಂಪು ದುರಸ್ತಿ: 32,180ರೂ., ಜುಲೈ ತಿಂಗಳ ಆಹಾರ ಸಾಮಗ್ರಿ ಸರಬರಾಜು ಸಾಲದ ಬಿಲ್ಲಿನ ಮೊತ್ತ ಅನ್ಯ ವ್ಯಕ್ತಿಗೆ ನಿಯಮ ಬಾಹಿರ ಪಾವತಿ: 1,86,453ರೂ., ನೀರಿನ 4ಟ್ಯಾಂಕ್‌ ಖರೀದಿ: 28,050ರೂ., ಇಂಧನ ಖರೀದಿ: 51,810 ರೂ., ಜನರೇಟರ್‌ ದುರಸ್ತಿ: 47,483ರೂ. ಅವ್ಯವಹಾರ ಪತ್ತೆಯಾಗಿದೆ.

ಕಚೇರಿ ಅಧೀಕ್ಷಕ ಟಿ. ಎಸ್‌. ರಂಗನಾಥ ಸ್ವಾಮಿ, ಪ್ರಥಮ ದರ್ಜೆ ಸಹಾಯಕ ಬಿ. ಪಾಲಪ್ಪ, ಎಂ. ಶಂಕರ್‌ ಲೆಕ್ಕ ಪರಿಶೋಧನೆ ವೇಳೆ ಅವ್ಯವಹಾರ ಪತ್ತೆಯಾಗಿದ್ದು ಕಾರಾಗೃಹ ಇಲಾಖೆಯ ಲೆಕ್ಕ ಪರಿಶೋಧನಾ ಶಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಪ್ರಕರಣ ನಿರ್ವಹಿಸಿ, ದೂರು ನೀಡಲು ವಿಳಂಬವಾಗಿದೆ ಎಂದು ಜೈಲರ್‌ ಸಂಜಯ್‌ ಜೆತ್ತಿ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ