ಆ್ಯಪ್ನಗರ

ಅಧಿಕಾರಕ್ಕಿಂತ `ವಿಚಾರ' ವಿಸ್ತರಣೆಯೇ ಆರ್‌ಎಸ್‌ಎಸ್‌ನ ಧ್ಯೇಯ: ನಳಿನ್

ಬಿಜೆಪಿಯಿಂದ ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನಿಯಾಗುವುದೇ ಗುರಿಯಲ್ಲ. ಸಂಘ ಪರಿವಾರದ ಚಿಂತನೆ, ತತ್ವ ಸಿದ್ಧಾಂತ, ವಿಚಾರ ವಿಸ್ತಾರವಾಗಬೇಕೆನ್ನುವುದೇ ಮುಖ್ಯ ಧ್ಯೇಯ ಎಂಬುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

Vijaya Karnataka Web 10 Sep 2019, 6:04 pm
ಉಡುಪಿ: ಅಧಿಕಾರ ಹಿಡಿಯುವುದಕ್ಕಿಂತ ರಾಷ್ಟ್ರ ಪರಿವರ್ತನೆ, ಸ್ವಾಮಿ ವಿವೇಕಾನಂದರು ಕಂಡ ಭವ್ಯ ಭಾರತದ ಕನಸು ನನಸು ಮಾಡುವುದು ಸಂಘ ಪರಿವಾರದ ಗುರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
Vijaya Karnataka Web Nalin Kumar Kateel


ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಹೋಟೆಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಮಂಗಳವಾರ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಬಿಜೆಪಿಯಿಂದ ಶಾಸಕರು, ಸಂಸದರು, ಮುಖ್ಯಮಂತ್ರಿ, ಪ್ರಧಾನಿಯಾಗುವುದೇ ಗುರಿಯಲ್ಲ. ಸಂಘ ಪರಿವಾರದ ಚಿಂತನೆ, ತತ್ವ ಸಿದ್ಧಾಂತ, ವಿಚಾರ ವಿಸ್ತಾರವಾಗಬೇಕೆನ್ನುವುದೇ ಮುಖ್ಯ ಧ್ಯೇಯ. ಜ್ಞಾನ ಸಂಪತ್ತು ನೀಡಿದ ಭಾರತದ ಮಾತಿಗೆ ಜಗತ್ತೇ ತಲೆದೂಗುತ್ತಿದೆ ಎಂದು ವ್ಯಾಖ್ಯಾನಿಸಿದರು.

ಒಂದೇ ಪ್ರಧಾನಿ, ಒಂದೇ ಧ್ವಜ, ಒಂದೇ ಸಂವಿಧಾನದ ಹೋರಾಟಕ್ಕೆ ಶ್ಯಾಮ್ ಪ್ರಸಾದ್ ಮುಖರ್ಜಿ ಬಿತ್ತಿದ ಕನಸು ಜಮ್ಮು ಕಾಶ್ಮೀರಕ್ಕಿದ್ದ 370ನೇ ವಿಧಿ ರದ್ದು ಮೂಲಕ ನನಸಾಗಿದೆ ಎಂದ ಅವರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಕೇಳಿದ್ದನ್ನು ಕೊಡೋದಿಲ್ಲ, ಹೇಳಿದ್ದನ್ನು ಮಾಡಬೇಕು

ಉಗ್ರ ಭಾಷಣ ಮಾಡಬೇಕೆನ್ನುವ ಹುಚ್ಚಿದ್ದ ನನಗೆ ಸಂಘ ಪರಿವಾರದ ನಾಯಕರು ನೀವು ಕೇಳಿದ್ದನ್ನು ಕೊಡೋದಿಲ್ಲ, ಹೇಳಿದ್ದನ್ನು ಮಾಡಬೇಕೆಂದು 2004ರಲ್ಲಿ ಬಿಜೆಪಿಗೆ ಕಳಿಸಿದ್ದು ಮಾತ್ರವಲ್ಲ 2009ರಲ್ಲಿ ಬೇಡವೆಂದರೂ ಲೋಕಸಭಾ ಚುನಾವಣಾ ಕಣಕ್ಕಿಳಿಸಿದರು.

ಪೋಸ್ಟರ್ ಅಂಟಿಸುತ್ತಿದ್ದ ಕಾರ್ಯಕರ್ತ ಬಿಜೆಪಿ ರಾಜ್ಯಾಧ್ಯಕ್ಷನಾಗಲು, ಚಹಾ ಮಾರುತ್ತಿದ್ದ ವ್ಯಕ್ತಿ ಪ್ರಧಾನಿಯಾಗಲು ಬಿಜೆಪಿಯಲ್ಲಷ್ಟೇ ಸಾಧ್ಯ. ಪ್ರಜಾಪ್ರಭುತ್ವ, ಚುನಾವಣಾ ವ್ಯವಸ್ಥೆ ಬಿಜೆಪಿಯಲ್ಲಷ್ಟೇ ಇದೆ. ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ರಾಜ್ಯಾಧ್ಯಕ್ಷನ ಜವಾಬ್ದಾರಿಯಿಂದ ಸಿಕ್ಕಿದ ಸನ್ಮಾನ ಕಾರ್ಯಕರ್ತರಿಗೆ ಅರ್ಪಿಸುವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ