ಆ್ಯಪ್ನಗರ

ಉಡುಪಿಯಲ್ಲಿ ಇನ್ಮುಂದೆ ಮಂಗಳವಾರವೂ ತೆರೆದಿರುತ್ತೆ ಸಲೂನ್‌ ‌!

ಭಾನುವಾರ ಸಂಪೂರ್ಣ ಬಂದ್‌ ಆಗಿರುವುದರಿಂದ ಉಡುಪಿ ಜಿಲ್ಲೆಯಲ್ಲೂ ಸಲೂನ್‌ಗಳನ್ನು ಬಂದ್‌ ಮಾಡಲಾಗುತ್ತೆ. ಹೀಗಾಗಿ ಮಂಗಳವಾರ ಅಂಗಡಿ ತೆರೆಯಲು ಸವಿತಾ ಸಮಾಜ ತೀರ್ಮಾನಿಸಿದೆ.

Vijaya Karnataka Web 23 May 2020, 1:01 pm
ಉಡುಪಿ: ಭಾನುವಾರ ಸಂಪೂರ್ಣ ಬಂದ್‌ ಆಗಿರುವುದರಿಂದ ಉಡುಪಿ ಜಿಲ್ಲೆಯಲ್ಲೂ ಸಲೂನ್‌ಗಳನ್ನು ಬಂದ್‌ ಮಾಡಲಾಗುತ್ತೆ. ಹೀಗಾಗಿ ಮಂಗಳವಾರ ಅಂಗಡಿ ತೆರೆದು ಸೇವೆ ಒದಗಿಸಬಹುದು ಎಂದು ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆ ತಿಳಿಸಿದ್ದಾರೆ.
Vijaya Karnataka Web pic (2)


ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಸವಿತಾ ಸಮಾಜದ ಅಧ್ಯಕ್ಷರೊಂದಿಗೆ ಶುಕ್ರವಾರ ನಡೆದ ಸಭೆಯಲ್ಲಿಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸವಿತಾ ಸಮಾಜದ ಅಧ್ಯಕ್ಷ ಭಾಸ್ಕರ ಭಂಡಾರಿ ಗುಡ್ಡೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಂಗಳವಾರ ಸಲೂನ್‌ ತೆರೆದು ಭಾನುವಾರ ಕಡ್ಡಾಯ ರಜೆ ಘೋಷಿಸುವ ಚಿಂತನೆ ಚರ್ಚೆಯಲ್ಲಿದೆ ಅಂತಲೂ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಕೋಶಾಧಿಕಾರಿ ಶೇಖರ ಸಾಲಿಯಾನ್‌ ಆದಿ ಉಡುಪಿ, ರಾಜ್ಯ ಪ್ರತಿನಿಧಿ ವಿಶ್ವನಾಥ ಭಂಡಾರಿ ನಿಂಜೂರು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಹಕಾರಿ ಅಧ್ಯಕ್ಷ ನವೀನ್‌ಚಂದ್ರ ಭಂಡಾರಿ ಉಪಸ್ಥಿತರಿದ್ದರು.

ಆಂಫಾನ್‌ ಎಫೆಕ್ಟ್‌, ಮುಂಗಾರು ಆಗಮನ ನಿರೀಕ್ಷೆ, ಗರಿಗೆದರಿದ ಕೃಷಿ ಚಟುವಟಿಕೆ


ಇತ್ತೀಚೆಗೆ ಕೇಂದ್ರ ಸಡಲಿಸಬಹುದು ಎಂದು ರಾಜ್ಯಗಳಿಗೆ ತಿಳಿಸಿತ್ತು ಈ ಹಿನ್ನೆಲೆ ರಾಜ್ಯ ಸರ್ಕಾರ ಲಾಕ್‌ಡೌನ್‌ ಸಡಿಲಿಸಿ ಕೆಲವೊಂದು ಮಾರ್ಗ ಸೂಚಿಗಳ ಮೂಲಕ ಸಲೂನ್‌ ಶಾಪ್‌ ತೆರೆಯುವಂತೆ ಹೇಳಿತ್ತು. ಆದ್ರೆ ಭಾನುವಾರ ರಾಜ್ಯ ಸಂಪೂರ್ಣ ಬಂದ್‌ ಆಗಲಿದೆ ಎಂದು ತಿಳಿಸಿತ್ತು. ಸಲೂನ್ ಶಾಪ್‌ಗಳು ಮಂಗಳವಾರ ಬಂದ್‌ ಆಗಿರುತ್ತೆ. ಈ ಹಿನ್ನೆಲೆ ಮಂಗಳವಾರ ಒಪನ್‌ ಮಾಡಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ