ಆ್ಯಪ್ನಗರ

18 ರಂದು 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ತಾಲೂಕು ಘಟಕ 12 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಜ. 18 ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ತೆಯನ್ನು ಜನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ವಹಿಸಿಕೊಳ್ಳಲಿದ್ದಾರೆ.

Vijaya Karnataka 14 Jan 2019, 5:00 am
ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಉಡುಪಿ ತಾಲೂಕು ಘಟಕ 12 ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಬ್ರಹ್ಮಗಿರಿ ಲಯನ್ಸ್‌ ಭವನದಲ್ಲಿ ಜ. 18 ರಂದು ನಡೆಯಲಿದ್ದು, ಸಮ್ಮೇಳನಾಧ್ಯಕ್ಷ ತೆಯನ್ನು ಜನಪದ ವಿದ್ವಾಂಸ ಹಾಗೂ ಸಾಹಿತಿ ಡಾ. ಗಣನಾಥ ಎಕ್ಕಾರು ವಹಿಸಿಕೊಳ್ಳಲಿದ್ದಾರೆ.
Vijaya Karnataka Web news/udupi/sammelana
18 ರಂದು 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ


ಸುದ್ದಿಗೋಷ್ಠಿಯಲ್ಲಿ ಶನಿವಾರ ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಜರುಗಲಿದ್ದು, ನಗರಸಭಾ ಸದಸ್ಯ ಹರೀಶ್‌ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಬಳಿಕ ಉಡುಪಿ ಪರಿಷತ್‌ ಧ್ವಜಾರೋಹಣ ಮಾಡಲಾಗುವುದೆಂದರು.

ಬೆಳಗ್ಗೆ 10 ಗಂಟೆಗೆ ಸಮ್ಮೇಳನವನ್ನು ಶಾಸಕ ಕೆ. ರಘುಪತಿ ಭಟ್‌ ಉದ್ಘಾಟಿಸುವರು. ಪುಸ್ತಕ ಬಿಡುಗಡೆ, ಪುಸ್ತಕ ದಾನ ಮತ್ತು ಅಭಿಯಾನಕ್ಕೆ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್‌ ಕುಮಾರ್‌ ಎಸ್‌. ಹೊಸಮನಿ ಚಾಲನೆ ನೀಡಲಿದ್ದಾರೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್‌ ಭಚ್‌, ಲಯನ್ಸ್‌ ಭವನದ ಅಧ್ಯಕ್ಷ ಎಸ್‌. ರಾಜಗೋಪಾಲ್‌, ಸಾಹಿತಿ ಪೊ›. ಉಪೇಂದ್ರ ಸೋಮಯಾಜಿ, ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಡಾ. ಸುಬ್ರಹ್ಮಣ್ಯ ಭಚ್‌, ಸುಬ್ರಹ್ಮಣ್ಯ ಶೆಟ್ಟಿ, ಗೌರವ ಕೋಶಾಧಿಕಾರಿ ವೆಲೇರಿಯನ್‌ ಮೆನೇಜಸ್‌, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಸೂರಾಲು ನಾರಾಯಣಮಡಿ, ಗೌರವ ಕಾರ್ಯದರ್ಶಿಗಳಾದ ಪೂರ್ಣಿಮಾ ಜನಾರ್ದನ್‌, ಕೆ. ಮುರಳೀಧರ ಭಾಗವಹಿಸಲಿದ್ದಾರೆ ಎಂದರು.

ದಿಶಾ ಮತ್ತು ಬಳಗದವರಿಂದ ಬೆಳಗ್ಗೆ 11.30ಕ್ಕೆ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1 ಗಂಟೆಗೆ ಬ್ರಹ್ಮಾವರ ಅಜಪುರ ಯಕ್ಷ ಗಾನ ಸಂಘದ ಕಲಾವಿದರಿಂದ ಸ್ಯಮಂತಕ ರತ್ನ ಯಕ್ಷ ಗಾನ ಪ್ರದರ್ಶನಗೊಳ್ಳಲಿದೆ. ಬೆಳಗ್ಗೆ 11.40 ಕ್ಕೆ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಮತ್ತು ಮುಗ್ಧತೆ ಮರೆಯಾಗಲು ಕಾರಣ ಹಾಗೂ ಉಳಿಸುವ ಪರಿ' ಎಂಬ ವಿಷಯದಲ್ಲಿ ಮೊದಲ ಗೋಷ್ಠಿ ನಡೆಯಲಿದೆ. ಸಾಹಿತಿ ಹಾಗೂ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಅಧ್ಯಕ್ಷ ತೆ ವಹಿಸುವರು. ಮಧ್ಯಾಹ್ನ 2 ಗಂಟೆಗೆ ಸಾಹಿತಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅಧ್ಯಕ್ಷ ತೆಯಲ್ಲಿ ಎರಡನೇ ಗೋಷ್ಠಿ ಜರುಗಲಿದೆ. 3 ಗಂಟೆಗೆ ಸಮ್ಮೇಳನಾಧ್ಯಕ್ಷ ರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. 3.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ನಿವೃತ್ತ ಸಿ. ನಾರಾಯಣ ಎಂ. ಹೆಗಡೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ಕೆ. ಮುರಳೀಧರ, ಗೌರವ ಕೋಶಾಧಿಕಾರಿ ಗಣೇಶ್‌ ಬ್ರಹ್ಮಾವರ ಉಪಸ್ಥಿತರಿದ್ದರು.

ಸಾಧಕರಿಗೆ ಸನ್ಮಾನ: ಇಮ್ಯಾನ್ಯುಲ್‌ ಸುಚಿತ ಕುಂದರ್‌ (ಅಂಚೆ ವಿತರಕರು), ಸೋಮನಾಥ ಚಿಟ್ಪಾಡಿ (ಪ್ರಸಾದನ), ತೋನ್ಸೆ ಜಯಂತ್‌ ಕುಮಾರ್‌ (ಯಕ್ಷ ಗಾನ), ಇಸಾಕ್‌ ಸಾಹೇಬ್‌ (ಚಾಲಕ), ಅರುಣಕಲಾ (ಕ್ರೀಡೆ), ಯು.ಎನ್‌. ರಮೇಶ್‌ (ಸಂಗೀತ ಕ್ಷೇತ್ರ), ಕುದಿ ಶ್ರೀನಿವಾಸ ಭಟ್‌ (ಕೃಷಿ), ವೆಂಕಟಗಿರಿ ಕಡೆಕಾರ್‌ (ಸಾಹಿತ್ಯ), ಕಿರಣ್‌ ಮಂಜನಬೈಲ್‌ (ಪತ್ರಿಕೋದ್ಯಮ), ಪ್ರದೀಪ್‌ಚಂದ್ರ ಕುತ್ಪಾಡಿ (ರಂಗಕಲೆ), ನಿತ್ಯಾನಂದ ಒಳಕಾಡು (ಸಮಾಜಸೇವೆ), ಶಾರದಾ (ವಾಹನ ತರಬೇತುದಾರರು) ಹಾಗೂ ತುಳುಕೂಟ ಉಡುಪಿ (ಸಂಘಸಂಸ್ಥೆ) ಸೇರಿದಂತೆ ಇವರನ್ನು ಸನ್ಮಾನಿಸಲಾಗುವುದೆಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ