ಆ್ಯಪ್ನಗರ

ಮೀನು ಲಾರಿಯಲ್ಲಿ ಮರಳು ಸಾಗಾಟ: 7 ಮಂದಿ ವಶಕ್ಕೆ

ಸೋಮವಾರ ಬೀಜಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಸುಲೇಟರ್‌ ವಾಹನದಲ್ಲಿ ಮರಳು ಸಾಗಾಟ ಪತ್ತೆ ಹಚ್ಚಿರುವ ಕುಂದಾಪುರ ಪೊಲೀಸರು 7 ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ. ಮಾಮೂಲಿಯಾಗಿ ಮೀನು ಸಾಗಿಸುವ ಇನ್ಸುಲೇಟರ್‌ ಲಾರಿಯಲ್ಲಿ ಮರಳು ಸಾಗಿಸಿದ ಕೃತ್ಯ ಇದು.

Vijaya Karnataka 26 Mar 2019, 5:00 am
ಕುಂದಾಪುರ: ಸೋಮವಾರ ಬೀಜಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ಸುಲೇಟರ್‌ ವಾಹನದಲ್ಲಿ ಮರಳು ಸಾಗಾಟ ಪತ್ತೆ ಹಚ್ಚಿರುವ ಕುಂದಾಪುರ ಪೊಲೀಸ್ರು 7 ಮಂದಿಯನ್ನು ದಸ್ತಗಿರಿ ಮಾಡಿದ್ದಾರೆ. ಮಾಮೂಲಿಯಾಗಿ ಮೀನು ಸಾಗಿಸುವ ಇನ್ಸುಲೇಟರ್‌ ಲಾರಿಯಲ್ಲಿ ಮರಳು ಸಾಗಿಸಿದ ಕೃತ್ಯ ಇದು.
Vijaya Karnataka Web KDP-25ab-mrl1


ಗಸ್ತಿನಲ್ಲಿದ್ದ ಪಿಎಸ್‌ಐ ಹರೀಶ್‌, ಎಎಸ್‌ಐ ಸುಧಾಕರ್‌, ಸಿಬ್ಬಂದಿಗಳಾದ ವಿಜಯ, ಹರೀಶ್‌, ಆನಂದ ಗಾಣಿಗ, ಮಂಜುನಾಥ್‌ ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಉಡುಪಿಯಿಂದ ಇನ್ಸುಲೇಟರ್‌ ವಾಹನ ಮತ್ತು ಅದರ ಹಿಂಬದಿ ಇನೋವಾ ಕಾರು ಆಗಮಿಸಿದ್ದು ನಿಲ್ಲಿಸುವಂತೆ ಸೂಚನೆ ನೀಡಿದಾಗ ಸ್ವಲ್ಪ ದೂರಕ್ಕೆ ಹೋಗಿ ನಿಲ್ಲಿಸಿ ಅದರಲ್ಲಿದ್ದವರು ಓಡಿಹೋಗಲು ಯತ್ನಿಸಿದಾಗ ಬೆನ್ನಟ್ಟಿದ ಪೊಲೀಸರು ವಶಕ್ಕೆ ಪಡೆದುಕೊಂಡರು. ವಿಚಾರಣೆಗೆ ನಡೆಸಿದಾಗ ಅಕ್ರಮ ಮರಳು ಸಾಗಾಟ ಬೆಳಕಿಗೆ ಬಂದಿದೆ.

ವಾಹನ ಪರಿಶೀಲನೆ ನಡೆಸಿದಾಗ ಇನ್ಸುಲೇಟರ್‌ ವಾಹನದಲ್ಲಿ ಮರಳು ಪತ್ತೆಯಾಗಿದ್ದು ಇನ್ಸುಲೇಟರ್‌ ವಾಹನ ಚಾಲಕ ಅಬ್ದುಲ್‌ ಸತ್ತಾರ್‌ ಮಂಜೇಶ್ವರ, ಅದರಲ್ಲಿದ್ದ ಮಂಜುನಾಥ ದಮ್ಮೂರ ವಾರಂಬಳ್ಳಿ, ಶ್ರೀಕಾಂತ್‌ ವಾರಂಬಳ್ಳಿ, ಶರಣಪ್ಪ ವಾರಂಬಳ್ಳಿ, ಇನೋವಾ ಕಾರಿನಲ್ಲಿದ್ದ ರಾಜೇಶ್‌ ಶೆಟ್ಟಿ ಬಿಜೈ ಮಂಗಳೂರು, ಸುಕೇಶ್‌ ಕೋಟ್ಯಾನ್‌ ಸುರತ್ಕಲ್‌ ಮಂಗಳೂರು, ನೌಶಾದ್‌ ಮಂಜೇಶ್ವರ ಅವರನ್ನು ದಸ್ತಗಿರಿ ಮಾಡಲಾಗಿದೆ. ಮರಳು ಎಲ್ಲಿಯೋ ಕದ್ದು ಸಾಗಾಟ ಮಾಡುತ್ತಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. 20 ಸಾವಿರ ರೂ. ಮೌಲ್ಯದ ಮರಳು ಪತ್ತೆಯಾಗಿದೆ. ಮರಳು ಹಾಗೂ ಎರಡು ವಾಹನ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಹಜರು ನಡೆಸಲಾಯಿತು. ಕುಂದಾಪುರಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ