ಆ್ಯಪ್ನಗರ

ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯರಿಂದ ಟೋಲ್‌ ವಸೂಲಿ: ಕಾರು ಸ್ಥಗಿತಗೊಳಿಸಿ ಪ್ರತಿರೋಧ

ಸಾಸ್ತಾನ ಟೋಲ್‌ನಲ್ಲಿ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಟೋಲ್‌ ಸ್ವೀಕರಿಸಲು ಆರಂಭಿಸಿದ್ದು, ಇದನ್ನು ವಿರೋಧಿಸಿ ವಡ್ಡರ್ಸೆ ಭಾಗದ ಸಾರ್ವಜನಿಕರು ಭಾನುವಾರ ಟೋಲ್‌ಗೇಟ್‌ಗೆ ಅಡ್ಡವಾಗಿ ಕಾರು ಇಟ್ಟು ಪ್ರತಿಭಟನೆ ನಡೆಸಿದರು.

Vijaya Karnataka 25 Mar 2019, 5:00 am
ಕೋಟ: ಸಾಸ್ತಾನ ಟೋಲ್‌ನಲ್ಲಿ ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಟೋಲ್‌ ಸ್ವೀಕರಿಸಲು ಆರಂಭಿಸಿದ್ದು, ಇದನ್ನು ವಿರೋಧಿಸಿ ವಡ್ಡರ್ಸೆ ಭಾಗದ ಸಾರ್ವಜನಿಕರು ಭಾನುವಾರ ಟೋಲ್‌ಗೇಟ್‌ಗೆ ಅಡ್ಡವಾಗಿ ಕಾರು ಇಟ್ಟು ಪ್ರತಿಭಟನೆ ನಡೆಸಿದರು.
Vijaya Karnataka Web sastana toll
ಸಾಸ್ತಾನ ಟೋಲ್‌ನಲ್ಲಿ ಸ್ಥಳೀಯರಿಂದ ಟೋಲ್‌ ವಸೂಲಿ: ಕಾರು ಸ್ಥಗಿತಗೊಳಿಸಿ ಪ್ರತಿರೋಧ


ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಮಾಜಿಕ ಕಾರ್ಯಕರ್ತ ಕೊತ್ತಾಡಿಯ ಅಜಿತ್‌ ಶೆಟ್ಟಿ ಸಾಸ್ತಾನ ಟೋಲ್‌ನಲ್ಲಿ ಅವರ ಕಾರನ್ನು ಗೇಟ್‌ನಲ್ಲಿ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದರು. ಆಗ ಟೋಲ್‌ಗೇಟ್‌ ಸಿಬ್ಬಂದಿಗಳು ಆ ಗೇಟ್‌ ಬಂದ್‌ ಮಾಡಿ ಬೇರೆ ಗೇಟ್‌ನ ಮೂಲಕ ವಾಹನ ಬಿಟ್ಟರು. ಈ ಸಂದರ್ಭದಲ್ಲಿ ವಕೀಲ ಬನ್ನಾಡಿ ಸೋಮನಾಥ ಹೆಗ್ಡೆ, ಉದ್ಯಮಿ ರೆಹಮತ್‌ ಮಧುವನ ಮತ್ತಿತರರು ತಮ್ಮ ಕಾರುಗಳನ್ನು ಇತರ ಗೇಟ್‌ಗಳಲ್ಲಿ ಸ್ಥಗಿತಗೊಳಿಸಿ, ಟೋಲ್‌ ನಿರಾಕರಿಸಿದರು.

ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ಅಧ್ಯಕ್ಷ ಪ್ರತಾಪ್‌ ಶೆಟ್ಟಿ, ಕಾರ್ಯದರ್ಶಿ ವಿಟ್ಠಲ ಪೂಜಾರಿ, ಅಲ್ವಿನ್‌ ಅಂದ್ರಾಡೆ ಮುಂತಾದವರು ಸ್ಥಳಕ್ಕಾಗಮಿಸಿ, ಈ ಹಿಂದೆ ಜನಪ್ರತಿನಿಧಿಗಳ ಎದುರು ನಡೆದ ಒಪ್ಪಂದದಂತೆ ಬಾರಕೂರು ಹೊರತುಪಡಿಸಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲಾ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಟೋಲ್‌ ನಿರ್ವಾಹಕ ಕೇಶವ ಮೂರ್ತಿ ಜತೆ ಚರ್ಚೆ ನಡೆಸಿದರು. ಈ ಕುರಿತು ಒಂದು ಒಪ್ಪಂದಕ್ಕೆ ಬಂದ ಬಳಿಕ ಪ್ರತಿಭಟನೆ ನಿರತರು ಟೋಲ್‌ ಗೇಟ್‌ಗೆ ಅಡ್ಡ ಇಟ್ಟ ಕಾರನ್ನು ತೆಗೆದು ಪ್ರತಿಭಟನೆ ಕೈಬಿಟ್ಟು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ