ಆ್ಯಪ್ನಗರ

7 ಮಂದಿ ಮೀನುಗಾರರು ಪತ್ತೆಯಾಗದೆ ಸಮುದ್ರಕ್ಕಿಳಿಯಲೊಪ್ಪದ ಕಾರ್ಮಿಕರು

ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಮಂದಿ ಮೀನುಗಾರರ ಸುಳಿವು ಸಿಗಲಿ. ಅಲ್ಲಿವರೆಗೆ ನಾವು ಮೀನುಗಾರಿಕೆಗೆ ಬರಲಾರೆವು ಎಂದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಕಾರ್ಮಿಕರು ಪಟ್ಟು ಹಿಡಿದ ಪರಿಣಾಮ ಒಂದಷ್ಟು ಬೋಟ್‌ ಮಾತ್ರವೇ ಆಳಸಮುದ್ರ ಮೀನುಗಾರಿಕೆಗೆ ತೆರಳಿವೆ.

Vijaya Karnataka 9 Jan 2019, 5:00 am
ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ 7 ಮಂದಿ ಮೀನುಗಾರರ ಸುಳಿವು ಸಿಗಲಿ. ಅಲ್ಲಿವರೆಗೆ ನಾವು ಮೀನುಗಾರಿಕೆಗೆ ಬರಲಾರೆವು ಎಂದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರಿಕಾ ಕಾರ್ಮಿಕರು ಪಟ್ಟು ಹಿಡಿದ ಪರಿಣಾಮ ಒಂದಷ್ಟು ಬೋಟ್‌ ಮಾತ್ರವೇ ಆಳಸಮುದ್ರ ಮೀನುಗಾರಿಕೆಗೆ ತೆರಳಿವೆ.
Vijaya Karnataka Web seven fishermen were not found in the sea
7 ಮಂದಿ ಮೀನುಗಾರರು ಪತ್ತೆಯಾಗದೆ ಸಮುದ್ರಕ್ಕಿಳಿಯಲೊಪ್ಪದ ಕಾರ್ಮಿಕರು


1100 ಆಳ ಸಮುದ್ರ ಬೋಟ್‌ಗಳ ಪೈಕಿ ತಮಿಳುನಾಡು ಮೂಲದ ಕಲಾಸಿ ಹಾಗೂ ತಾಂಡೇಲರಿರುವ ಬೋಟ್‌ಗಳು ಮಾತ್ರವೇ ತೆರಳುತ್ತಿವೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ, ಕಾರವಾರದ ಕಾರ್ಮಿಕರಿರುವ ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದೆ.

ಸುವರ್ಣ ತ್ರಿಭುಜ ಬೋಟ್‌ ಸಮೇತ ನಾಪತ್ತೆಯಾದ 7 ಮಂದಿ ಪೈಕಿ ಐವರು ಉತ್ತರ ಕನ್ನಡ ಜಿಲ್ಲೆಯವರಾಗಿದ್ದು, ಆ ಭಾಗದ ಮೀನುಗಾರಿಕಾ ಕಾರ್ಮಿಕರು ನಾಪತ್ತೆಯಾದವರ ಸುಳಿವು ಸಿಗದ ಹೊರತು ಮೀನುಗಾರಿಕೆಗೆ ತೆರಳುವುದಿಲ್ಲ ಎಂದಿದ್ದಾರೆ. ಇದು ಮಲ್ಪೆ ಭಾಗದ ಮೀನುಗಾರಿಕಾ ಮಾಲೀಕರಿಗೆ ಹಿನ್ನಡೆಯಾಗಿದೆ.

ಭಾನುವಾರ ಅಂಬಲಪಾಡಿ ಜಂಕ್ಷನ್‌ನಲ್ಲಿ ರಾಸ್ತಾ ರೋಕೋ ನಡೆಸಿದ ಬಳಿಕ ಸಂಜೆ ಮಲ್ಪೆಯಲ್ಲಿ ಮೀನುಗಾರರ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಭೆ ಕರೆದಿದ್ದು, ಸೋಮವಾರದಿಂದ ಕಡಲಿಗಿಳಿದು 2 ದಿನಗಳ ಹುಡುಕಾಟದ ಬಳಿಕ ಮೀನುಗಾರಿಕೆ ಆರಂಭಿಸುವ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಣಯ ಉತ್ತರ ಕನ್ನಡದ ಮೀನುಗಾರಿಕೆಗೆ ಕೋಪ ತಂದಿದ್ದು, ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹರಿಬಿಟ್ಟಿದ್ದರು.

ನಾವು ಯಾವುದೇ ಕಾರಣಕ್ಕೂ ಮೀನುಗಾರಿಕೆಗೆ ಬರಲಾರೆವು. ನಮಗೆ ನಮ್ಮವರ ಸುಳಿವು ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ನಕಾರ ವ್ಯಕ್ತಪಡಿಸಿದ್ದಾರೆ.

ಸಭೆಯ ಬಳಿಕ ನಿರ್ಧಾರ

ಉತ್ತರ ಕನ್ನಡ ಜಿಲ್ಲೆಯ ಕಲಾಸಿಗಳು ಸದ್ಯ ಮೀನುಗಾರಿಕೆಗೆ ನಾವು ಮೀನುಗಾರಿಕೆಗೆ ಹೋಗುವುದಿಲ್ಲ ಎಂದು ಮಾಡಿದ ವೀಡಿಯೋ ಚಿತ್ರೀಕರಣ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು, ಸಭೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದಿದ್ದಾರೆ. ಆದರೆ ಜ. 11ರಂದು ನಾವು ಮೀನುಗಾರಿಕೆಗೆ ಬರುವ ಬಗ್ಗೆ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಎಂದು ಮಲ್ಪೆ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ್‌ ಆರ್‌.ಕೆ. ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ