ಆ್ಯಪ್ನಗರ

ಶಂಕರಪುರ ಮಲ್ಲಿಗೆ: ಬೆಳೆಗಾರರಿಗೆ ಖುಷಿ, ಮಾರಾಟಗಾರರಿಗೆ ಬಿಸಿ

ಉಡುಪಿ ಮಲ್ಲಿಗೆ(ಶಂಕರಪುರ) ದರ ಏರಿಕೆಯಿಂದ ಬೆಳೆಗಾರರಿಗೆ ಖುಷಿಯಾದರೆ ಮಾರಾಟಗಾರರಿಗೆ ತಲೆ ಬಿಸಿ ಹೆಚ್ಚಿದೆ.

Vijaya Karnataka 20 Dec 2018, 5:00 am
ಎಸ್‌.ಜಿ.ಕುರ್ಯ ಉಡುಪಿ
Vijaya Karnataka Web UDP-19u mallige


ಉಡುಪಿ ಮಲ್ಲಿಗೆ(ಶಂಕರಪುರ) ದರ ಏರಿಕೆಯಿಂದ ಬೆಳೆಗಾರರಿಗೆ ಖುಷಿಯಾದರೆ ಮಾರಾಟಗಾರರಿಗೆ ತಲೆ ಬಿಸಿ ಹೆಚ್ಚಿದೆ.

ಡಿ.17ರಂದು ಮದುವೆ ಸಹಿತ ಶುಭ ಸಮಾರಂಭ ಹೆಚ್ಚಿರಬಹುದೆನ್ನುವ ಲೆಕ್ಕಾಚಾರದಲ್ಲಿ ಡಿ.16ರಂದು ಶಂಕರಪುರ ಕಟ್ಟೆಯಲ್ಲಿ ಮಲ್ಲಿಗೆ ಅಟ್ಟಿಗೆ ಗರಿಷ್ಠ 1,250 ರೂ. ನಿಗದಿ ಮಾಡಲಾಗಿತ್ತು.

ಇದು ಶಂಕರಪುರ ಮಲ್ಲಿಗೆಯ ಇತಿಹಾಸದಲ್ಲೇ ದಾಖಲಾದ ಅತ್ಯಧಿಕ ದರವಾಗಿದ್ದರೆ ಡಿ.17ರಂದು 950 ರೂ. ದರವಿತ್ತು. ಆದರೆ ಡಿ.18ರಂದು 520 ರೂ.ಗಳಿಗೆ ಕುಸಿದಿದ್ದರೆ ಬುಧವಾರ 1,050ಕ್ಕೇರಿದೆ.

ಮಲ್ಲಿಗೆ ಕಟ್ಟೆ ದರ 100ರಿಂದ 599 ರೂ.ಗಳಿಗೆ ಕಟ್ಟೆ ಕಮಿಷನ್‌ 20 ರೂ., 600ರಿಂದ 799 ರೂ. ದರಕ್ಕೆ ಕಟ್ಟೆ ಕಮಿಷನ್‌ 30 ರೂ. ಹಾಗೂ 800ರಿಂದ 1,250 ರೂ. ತನಕ 50 ರೂ. ಕಟ್ಟೆ ಕಮಿಷನ್‌ ಸಿಗುತ್ತಿದೆ.

ಕಟ್ಟೆ ಕಮಿಷನ್‌ ಹೆಚ್ಚಳದ ಜತೆಗೆ ಬೆಳೆಗಾರರು ಪೂರೈಸಿದ ಮಲ್ಲಿಗೆಗೂ ಉತ್ತಮ ದರ ಸಿಗುತ್ತಿದೆ. ಆದರೆ ಭಾನುವಾರ 1,250 ರೂ. ದರ ನಿಗದಿಯಾಗಿದ್ದ ಮಲ್ಲಿಗೆಯನ್ನು ಗ್ರಾಹಕರು 1,000 ರೂ.ಗಳಿಗೆ ಕೊಟ್ಟರೂ ಖರೀದಿಗೆ ಸಿದ್ದರಿರಲಿಲ್ಲ.

ಹೀಗಾಗಿ ಹೂ, ಮಲ್ಲಿಗೆ ಮಾರಾಟಗಾರರ ಶೈತ್ಯಾಗಾರದಲ್ಲಿ ಮಲ್ಲಿಗೆ ಅಟ್ಟಿ ರಾಶಿಯಿದ್ದು ನಷ್ಟ ಅನುಭವಿಸುವಂತಾಗಿದೆ. ಕಡಿಮೆ ದರಕ್ಕೆ ಮಾರದಿದ್ದರೆ ನಷ್ಟ ಹೆಚ್ಚಲಿದೆ. ಮಲ್ಲಿಗೆ 60ರಿಂದ 80 ಅಟ್ಟಿ ಕಟ್ಟೆಯಿಂದ ಮಾರುಕಟ್ಟೆಗೆ ಬರುತ್ತಿದೆ.

ಭಟ್ಕಳ ಮಲ್ಲಿಗೆಗೆ ಶುಕ್ರ ದೆಸೆ: ನೂಲಿನಲ್ಲಿ ಕಟ್ಟುವ ಹಿನ್ನೆಲೆಯಲ್ಲಿ ಪೂಜೆ, ಮಡಿವಂತರಿಗೆ ಬೇಡದ ಭಟ್ಕಳ ಮಲ್ಲಿಗೆಗೆ ಭಾನುವಾರ ಗರಿಷ್ಠ 850 ರೂ. ದರವಿದ್ದರೆ ನ.13ರಿಂದ 16ರ ತನಕ ಗರಿಷ್ಠ 950 ರೂ. ದರವಿತ್ತು. ಉಡುಪಿ ಮಲ್ಲಿಗೆಗೆ ಗರಿಷ್ಠ ದರವಿದ್ದಾಗ ಭಟ್ಕಳ ಮಲ್ಲಿಗೆ ದರವೂ ಹೆಚ್ಚುತ್ತಿದೆ.

* ಮದುವೆ ಸಹಿತ ಶುಭ ಸಮಾರಂಭಗಳಿದ್ದರೂ ಚಳಿ ಹಿನ್ನೆಲೆಯಲ್ಲಿ ಮಲ್ಲಿಗೆ ಹೂವಿನ ಬೆಳೆ ಪ್ರಮಾಣ ಕಡಿಮೆಯಾಗಿದೆ. ಚಳಿ ದೂರವಾದರೆ ಮಲ್ಲಿಗೆ ಬೆಳೆ ಹೆಚ್ಚಲಿದೆ, ಆಗ ದರ ಕುಸಿಯುವ ಆತಂಕವಿದೆ.

-ವಿಷ್ಣು ಸಾಲ್ಯಾನ್‌, ವಿಷ್ಣು ಫ್ಲವರ್‌ ಸ್ಟಾಲ್‌, ಸವೀರ್‍ಸ್‌ ಬಸ್‌ ನಿಲ್ದಾಣ, ಉಡುಪಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ