ಎಸ್.ಜಿ. ಕುರ್ಯ
ಉಡುಪಿ: ಡ್ರಮ್ಸ್ ಬಾರಿಸುತ್ತಿದ್ದರು, ವೀಣೆ ನುಡಿಸುತ್ತಿದ್ದರು, ಮೀನಿನಂತೆ ಈಜುತ್ತಿದ್ದರು, ಕರಾಟೆ ಪಟ್ಟು ಹಾಕುತ್ತಿದ್ದರು, ಕೊಳಲಲ್ಲಿ ಸುಶ್ರಾವ್ಯ ನಾದ ಹೊರಹೊಮ್ಮಿಸುತ್ತಿದ್ದರು.
ಹೀಗೆ ನಾನಾ ಕಲೆಗಳನ್ನು ಇಷ್ಟಪಟ್ಟು ಪ್ರೀತಿಸುತ್ತಿದ್ದ ಶೀರೂರು ಮಠದ ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಶ್ರೀಕೃಷ್ಣನ ಪೂಜೆ, ಅಲಂಕಾರಕ್ಕೆ ಕೂತರೆ ಭಕ್ತಿ, ಪ್ರೀತಿಯಿಂದ ತನ್ಮಯರಾಗುತ್ತಿದ್ದರು, ಇಹದ ತಾಪತ್ರಯವನ್ನೇ ಮರೆಯುತ್ತಿದ್ದರು.
ಶ್ರೀಕೃಷ್ಣನಿಗೆ ನಿತ್ಯ ಸಲ್ಲುವ 14 ಪೂಜೆಗಳಲ್ಲಿ ಅಲಂಕಾರ ಪೂಜೆಯೂ ಒಂದು. ವಿಭೂತಿಪುರುಷ ಸೋದೆ ಶ್ರೀವಾದಿರಾಜ ಗುರು ಸಾರ್ವಭೌಮರು ತಮ್ಮ ಪೂರ್ವಾಶ್ರಮದ ತಾಯಿಯ ಪ್ರೀತ್ಯರ್ಥ ಅಲಂಕಾರಪ್ರಿಯ ಶ್ರೀಕೃಷ್ಣನನ್ನು ಸತತ 365 ದಿನಗಳ ಕಾಲ ನಿತ್ಯ ಅಲಂಕಾರ ವೈವಿಧ್ಯ ಮೂಲಕ ಪೂಜಿಸಿದ್ದರು.
ತಮ್ಮ ಎರಡನೇ ಪರ್ಯಾಯದಲ್ಲಿ ಗಜಲಕ್ಷ್ಮಿ, ಧನ್ವಂತರಿ, ಸೂರ್ಯನಾರಾಯಣ, ವಟಪತ್ರಶಾಯಿ ಶೇಷಶಾಯಿ, ಮತ್ಸ್ಯಾವತಾರ, ಕೂರ್ಮಾವತಾರ, ವೀಣಾ ಸರಸ್ವತಿ, ಮಹಿಷಮರ್ಧಿನಿ...ಹೀಗೆ ಶ್ರೀಕೃಷ್ಣನಿಗೆ ನಾನಾ ಅಲಂಕಾರ ಸಮರ್ಪಿಸಿ ಭಕ್ತರನ್ನು ಮುದಗೊಳಿಸಿದ್ದರು. ಶೀರೂರು ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ತಮ್ಮ ಪೂರ್ವಾಶ್ರಮದ ತಂದೆಯ ಬಯಕೆಯಂತೆ ಮುನ್ನೂರು ಅಲಂಕಾರವನ್ನು ಗೋಪಾಲಕೃಷ್ಣನ ಅಲಂಕಾರದಿಂದ ಆರಂಭಿಸಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದ ಅಲಂಕಾರ ಕೊನೆಯ ಸಮರ್ಪಣೆಯಾಗಿತ್ತು.
ಹುಲಿವೇಷ ಪ್ರೀತಿ: ಶ್ರೀಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಶೀರೂರು ಮಠದಲ್ಲಿ ಸಂಭ್ರಮ. ವೇಷಧಾರಿಗಳಿಗಾಗಿ 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ನೋಟಿನ ಮಾಲೆ ತಯಾರಿಸಿ, ವೇಷಧಾರಿಗಳನ್ನು ಕುಣಿಸಿ ಕೊರಳಿಗೆ ಹಾಕುತ್ತಿದ್ದರು. ಡ್ರಮ್ಸ್ ಬಾರಿಸಿ, ತಾವೂ ಒಂದೆರಡು ಸ್ಟೆಪ್ ಹಾಕಿ ಪ್ರೋತ್ಸಾಹಿಸುತ್ತಿದ್ದರು. ಹುಲಿ ವೇಷ, ಕುಣಿತವೆಂದರೆ ಬಲು ಇಷ್ಟಪಡುವ ಶ್ರೀಪಾದರು ಪ್ರತಿ ಅಷ್ಟಮಿಯಲ್ಲೂ ಪ್ರದರ್ಶನ ವ್ಯವಸ್ಥೆ ಮಾಡಿ ಖುದ್ದು ನಾಲ್ಕೈದು ಗಂಟೆ ನೋಡುತ್ತಿದ್ದರು.
ಲಕ್ಷ್ಮೇಶನ ಪ್ರೀತಿ: ಎರಡನೇ ಪರ್ಯಾಯ ಸಂದರ್ಭ(1994, 96) ಮರಿಯಾನೆ ಲಕ್ಷ್ಮೇಶನನ್ನು ಮಠದ ಪಟ್ಟದಾನೆಯಾಗಿ ಸ್ವೀಕರಿಸಿದ್ದರು. ದಶಕದ ಬಳಿಕ ಹರೆಯಕ್ಕೆ ಬಂದ ಲಕ್ಷ್ಮೇಶನ ದಾಂಧಲೆಯನ್ನು ಪ್ರೀತಿಯಿಂದ ಸಹಿಸಿದ್ದರೂ ಉಡುಪಿಯಿಂದ ಕಳುಹಿಸುವ ಸಂದರ್ಭ ಬಂದಾಗ ಶ್ರೀಗಳು ಭಾವುಕರಾಗಿದ್ದರು.
ನನಸಾಗದ ಮ್ಯೂಸಿಕ್ ಸೆಂಟರ್
ತಮ್ಮ ಮೂಲ ಮಠದಲ್ಲಿ ಖ್ಯಾತ ಡ್ರಮ್ಮರ್ ಶಿವಮಣಿ ಅವರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಸಂಗೀತ ತರಬೇತಿ ಕೇಂದ್ರ ತೆರೆಯುವ ಕನಸನ್ನು ಶ್ರೀಗಳು ಕಂಡಿದ್ದರು. ಅದಕ್ಕೆ ಶಿವಮಣಿಯಿಂದಲೇ ಜೂ.8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಬಗ್ಗೆ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಜನ್ಮ ನಕ್ಷತ್ರ ಸಂಭ್ರಮಾಚರಣೆ (ಜೂ.8)ಯಂದು ಶಿವಮಣಿಯನ್ನು ಅಮೆರಿಕದಿಂದ ಕರೆಸಿ ಸಂಗೀತ ನುಡಿಸಿದ್ದು, ವಿಶೇಷವಾಗಿತ್ತು.
ಈ ಸಂದರ್ಭ ಶಿವಮಣಿಯ ಜತೆಗೆ ಒಂದಷ್ಟು ಹೊತ್ತು ಡ್ರಮ್ಸ್ ನುಡಿಸಿ ಖುಷಿ ಪಟ್ಟಿದ್ದರು. ಶಿವಮಣಿ ಸಾಕು ಸ್ವಾಮೀಜಿ ಎಂದರೂ ಬಿಡದೆ ಇನ್ನೂ 10 ನಿಮಿಷ, ಅದು ಹೀಗೆ..ಇದು ಹೀಗೆ ಎನ್ನುತ್ತಾ ಪ್ರೋತ್ಸಾಹಿಸಿ ಅತೀವ ಸಂತೋಷ ಪಟ್ಟಿದ್ದರು. ಇದೀಗ ಆ ನೆನಪುಗಳೆಲ್ಲ ಕಾಲ ಚಕ್ರದೊಳಗೆ ಸೇರಿ ಹೋಗಿವೆ.
ಉಡುಪಿ: ಡ್ರಮ್ಸ್ ಬಾರಿಸುತ್ತಿದ್ದರು, ವೀಣೆ ನುಡಿಸುತ್ತಿದ್ದರು, ಮೀನಿನಂತೆ ಈಜುತ್ತಿದ್ದರು, ಕರಾಟೆ ಪಟ್ಟು ಹಾಕುತ್ತಿದ್ದರು, ಕೊಳಲಲ್ಲಿ ಸುಶ್ರಾವ್ಯ ನಾದ ಹೊರಹೊಮ್ಮಿಸುತ್ತಿದ್ದರು.
ಹೀಗೆ ನಾನಾ ಕಲೆಗಳನ್ನು ಇಷ್ಟಪಟ್ಟು ಪ್ರೀತಿಸುತ್ತಿದ್ದ ಶೀರೂರು ಮಠದ ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಶ್ರೀಕೃಷ್ಣನ ಪೂಜೆ, ಅಲಂಕಾರಕ್ಕೆ ಕೂತರೆ ಭಕ್ತಿ, ಪ್ರೀತಿಯಿಂದ ತನ್ಮಯರಾಗುತ್ತಿದ್ದರು, ಇಹದ ತಾಪತ್ರಯವನ್ನೇ ಮರೆಯುತ್ತಿದ್ದರು.
ಶ್ರೀಕೃಷ್ಣನಿಗೆ ನಿತ್ಯ ಸಲ್ಲುವ 14 ಪೂಜೆಗಳಲ್ಲಿ ಅಲಂಕಾರ ಪೂಜೆಯೂ ಒಂದು. ವಿಭೂತಿಪುರುಷ ಸೋದೆ ಶ್ರೀವಾದಿರಾಜ ಗುರು ಸಾರ್ವಭೌಮರು ತಮ್ಮ ಪೂರ್ವಾಶ್ರಮದ ತಾಯಿಯ ಪ್ರೀತ್ಯರ್ಥ ಅಲಂಕಾರಪ್ರಿಯ ಶ್ರೀಕೃಷ್ಣನನ್ನು ಸತತ 365 ದಿನಗಳ ಕಾಲ ನಿತ್ಯ ಅಲಂಕಾರ ವೈವಿಧ್ಯ ಮೂಲಕ ಪೂಜಿಸಿದ್ದರು.
ತಮ್ಮ ಎರಡನೇ ಪರ್ಯಾಯದಲ್ಲಿ ಗಜಲಕ್ಷ್ಮಿ, ಧನ್ವಂತರಿ, ಸೂರ್ಯನಾರಾಯಣ, ವಟಪತ್ರಶಾಯಿ ಶೇಷಶಾಯಿ, ಮತ್ಸ್ಯಾವತಾರ, ಕೂರ್ಮಾವತಾರ, ವೀಣಾ ಸರಸ್ವತಿ, ಮಹಿಷಮರ್ಧಿನಿ...ಹೀಗೆ ಶ್ರೀಕೃಷ್ಣನಿಗೆ ನಾನಾ ಅಲಂಕಾರ ಸಮರ್ಪಿಸಿ ಭಕ್ತರನ್ನು ಮುದಗೊಳಿಸಿದ್ದರು. ಶೀರೂರು ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ತಮ್ಮ ಪೂರ್ವಾಶ್ರಮದ ತಂದೆಯ ಬಯಕೆಯಂತೆ ಮುನ್ನೂರು ಅಲಂಕಾರವನ್ನು ಗೋಪಾಲಕೃಷ್ಣನ ಅಲಂಕಾರದಿಂದ ಆರಂಭಿಸಿ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದ ಅಲಂಕಾರ ಕೊನೆಯ ಸಮರ್ಪಣೆಯಾಗಿತ್ತು.
ಹುಲಿವೇಷ ಪ್ರೀತಿ: ಶ್ರೀಕೃಷ್ಣ ಜನ್ಮಾಷ್ಟಮಿ ಬಂತೆಂದರೆ ಶೀರೂರು ಮಠದಲ್ಲಿ ಸಂಭ್ರಮ. ವೇಷಧಾರಿಗಳಿಗಾಗಿ 10 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ನೋಟಿನ ಮಾಲೆ ತಯಾರಿಸಿ, ವೇಷಧಾರಿಗಳನ್ನು ಕುಣಿಸಿ ಕೊರಳಿಗೆ ಹಾಕುತ್ತಿದ್ದರು. ಡ್ರಮ್ಸ್ ಬಾರಿಸಿ, ತಾವೂ ಒಂದೆರಡು ಸ್ಟೆಪ್ ಹಾಕಿ ಪ್ರೋತ್ಸಾಹಿಸುತ್ತಿದ್ದರು. ಹುಲಿ ವೇಷ, ಕುಣಿತವೆಂದರೆ ಬಲು ಇಷ್ಟಪಡುವ ಶ್ರೀಪಾದರು ಪ್ರತಿ ಅಷ್ಟಮಿಯಲ್ಲೂ ಪ್ರದರ್ಶನ ವ್ಯವಸ್ಥೆ ಮಾಡಿ ಖುದ್ದು ನಾಲ್ಕೈದು ಗಂಟೆ ನೋಡುತ್ತಿದ್ದರು.
ಲಕ್ಷ್ಮೇಶನ ಪ್ರೀತಿ: ಎರಡನೇ ಪರ್ಯಾಯ ಸಂದರ್ಭ(1994, 96) ಮರಿಯಾನೆ ಲಕ್ಷ್ಮೇಶನನ್ನು ಮಠದ ಪಟ್ಟದಾನೆಯಾಗಿ ಸ್ವೀಕರಿಸಿದ್ದರು. ದಶಕದ ಬಳಿಕ ಹರೆಯಕ್ಕೆ ಬಂದ ಲಕ್ಷ್ಮೇಶನ ದಾಂಧಲೆಯನ್ನು ಪ್ರೀತಿಯಿಂದ ಸಹಿಸಿದ್ದರೂ ಉಡುಪಿಯಿಂದ ಕಳುಹಿಸುವ ಸಂದರ್ಭ ಬಂದಾಗ ಶ್ರೀಗಳು ಭಾವುಕರಾಗಿದ್ದರು.
ನನಸಾಗದ ಮ್ಯೂಸಿಕ್ ಸೆಂಟರ್
ತಮ್ಮ ಮೂಲ ಮಠದಲ್ಲಿ ಖ್ಯಾತ ಡ್ರಮ್ಮರ್ ಶಿವಮಣಿ ಅವರ ಸಹಕಾರದಲ್ಲಿ ಅಂತಾರಾಷ್ಟ್ರೀಯ ಸಂಗೀತ ತರಬೇತಿ ಕೇಂದ್ರ ತೆರೆಯುವ ಕನಸನ್ನು ಶ್ರೀಗಳು ಕಂಡಿದ್ದರು. ಅದಕ್ಕೆ ಶಿವಮಣಿಯಿಂದಲೇ ಜೂ.8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.
ಈ ಬಗ್ಗೆ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಜನ್ಮ ನಕ್ಷತ್ರ ಸಂಭ್ರಮಾಚರಣೆ (ಜೂ.8)ಯಂದು ಶಿವಮಣಿಯನ್ನು ಅಮೆರಿಕದಿಂದ ಕರೆಸಿ ಸಂಗೀತ ನುಡಿಸಿದ್ದು, ವಿಶೇಷವಾಗಿತ್ತು.
ಈ ಸಂದರ್ಭ ಶಿವಮಣಿಯ ಜತೆಗೆ ಒಂದಷ್ಟು ಹೊತ್ತು ಡ್ರಮ್ಸ್ ನುಡಿಸಿ ಖುಷಿ ಪಟ್ಟಿದ್ದರು. ಶಿವಮಣಿ ಸಾಕು ಸ್ವಾಮೀಜಿ ಎಂದರೂ ಬಿಡದೆ ಇನ್ನೂ 10 ನಿಮಿಷ, ಅದು ಹೀಗೆ..ಇದು ಹೀಗೆ ಎನ್ನುತ್ತಾ ಪ್ರೋತ್ಸಾಹಿಸಿ ಅತೀವ ಸಂತೋಷ ಪಟ್ಟಿದ್ದರು. ಇದೀಗ ಆ ನೆನಪುಗಳೆಲ್ಲ ಕಾಲ ಚಕ್ರದೊಳಗೆ ಸೇರಿ ಹೋಗಿವೆ.