ಆ್ಯಪ್ನಗರ

ಬಿಜೆಪಿಯವರಿಗೆ ಮಂತ್ರಿಮಂಡಲ ರಚನೆ ಅಸಾಧ್ಯ: ಶಿರೂರು ಶ್ರೀ

ವಿಧಾನಸಭೆ ಚುನಾವಣೆ ಮುಗಿದರೂ ಇನ್ನೂ 9 ದಿನದ ಕಾಲಾವಕಾಶ ಕೇಳಿದ ಬಿಜೆಪಿಯವರಿಗೆ ಮಂತ್ರಿಮಂಡಲ ರಚನೆ ಅಸಾಧ್ಯ ಎಂದು ಉಡುಪಿ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ

Vijaya Karnataka 17 May 2018, 3:20 pm
ಕುಂದಾಪುರ: ವಿಧಾನಸಭೆ ಚುನಾವಣೆ ಮುಗಿದರೂ ಇನ್ನೂ 9 ದಿನದ ಕಾಲಾವಕಾಶ ಕೇಳಿದ ಬಿಜೆಪಿಯವರಿಗೆ ಮಂತ್ರಿಮಂಡಲ ರಚನೆ ಅಸಾಧ್ಯ ಎಂದು ಉಡುಪಿ ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
Vijaya Karnataka Web shiruru shree
ಬಿಜೆಪಿಯವರಿಗೆ ಮಂತ್ರಿಮಂಡಲ ರಚನೆ ಅಸಾಧ್ಯ: ಶಿರೂರು ಶ್ರೀ


ಬುಧವಾರ ಅವರನ್ನು ಭೇಟಿ ಮಾಡಿದ ಉಡುಪಿ ಜಿಲ್ಲಾ ಜೆಡಿಯು ಅಧ್ಯಕ್ಷ ರಾಜೀವ ಕೋಟ್ಯಾನ್‌ ನಿಯೋಗದೊಂದಿಗೆ ಮಾತನಾಡಿದ ಶ್ರೀಗಳು ಅಮಿತಾ ಶಾ ಅಯೋಗ್ಯರಿಗೆ ಟಿಕೇಟ್‌ ನೀಡುವ ಮೂಲಕ ಬಿಜೆಪಿಯ ಮೂಲತತ್ವಕ್ಕೆ ಧಕ್ಕೆ ತಂದಿದ್ದಾರೆ. ಹಿಂದುತ್ವ ಅಂದರೇನು ತಿಳಿಯದವರು ಶಾಸಕರಾಗಿ ಹೋದರೆ ಅವರಿಗೆ ಶ್ರೀಕೃಷ್ಣನ ಕೃಪೆ ಇರಲು ಹೇಗೆ ಸಾಧ್ಯ. ತೋಳ್ಬಲ, ಹಣಬಲದಿಂದ ಬಿಜೆಪಿ ಗೆದ್ದಿರಬಹುದು. ಇನ್ನೂ 90 ದಿನದಲ್ಲಿ ಈ ರಾಜ್ಯದ ರಾಜಕೀಯ ಚಿತ್ರಣವೇ ಬದಲಾಗಲಿದೆ ಎಂದು ಅವರು ಭವಿಷ್ಯ ನುಡಿದರು. ರಾಮಕೃಷ್ಣ ಹೆಗಡೆಯವರ ದಳದೊಂದಿಗೆ ನಾನಿದ್ದೇನೆ. ನನ್ನ ಸಂಪೂರ್ಣ ಬೆಂಬಲ ನಿಮಗಿದೆ ಎಂದು ಸ್ವಾಮೀಜಿ ಜೆಡಿಯು ನಿಯೋಗಕ್ಕೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ