ಆ್ಯಪ್ನಗರ

ಶಾರ್ಟ್‌ ಸರ್ಕ್ಯೂಟ್‌: ಅರೆಕ್ಷಣದಲ್ಲಿ ಸುಟ್ಟು ಕರಕಲಾಯ್ತು ನಿಂತಿದ್ದ ಕಾರು!

ಕುಂದಾಪುರ ತಾಲೂಕಿನ ಮಾರಣ ಕಟ್ಟೆಯ ಚಿತ್ತೂರು ಸಮೀಪ ಶಾರ್ಟ್‌ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಕರಕಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮನೆಯಿಂದ ದೂರದಲ್ಲಿ ಈ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

Vijaya Karnataka Web 24 Feb 2020, 8:17 pm
ಉಡುಪಿ: ಕುಂದಾಪುರ ತಾಲೂಕಿನ ಮಾರಣ ಕಟ್ಟೆಯ ಚಿತ್ತೂರು ಸಮೀಪ ಶಾರ್ಟ್‌ ಸರ್ಕ್ಯೂಟ್‌ನಿಂದ ಕಾರೊಂದು ಸುಟ್ಟು ಕರಕಲಾದ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
Vijaya Karnataka Web car fire


ಚಿತ್ತೂರು ಸಮೀಪದ ಗೋಪಾಲ ಆಚಾರ್ಯ ಎಂಬವರು ತನ್ನ ಮಾರುತಿ ಇಕೋ ಕಾರನ್ನು ಮನೆಯ ಸಮೀಪ ಮುಖ್ಯ ರಸ್ತೆಯ ಪಕ್ಕ ನಿಲ್ಲಿಸಿದ್ದು, ಮನೆಗೆ ಹೋಗಿ ಬರುವಷ್ಟರಲ್ಲಿ ಕಾರಿನೊಳಗೆ ಬೆಂಕಿ ಹೊತ್ತಿಕೊಂಡಿದ್ದು ನೋಡನೋಡುತ್ತಿರುವಂತೆಯೇ ಸಂಪೂರ್ಣ ಬೆಂಕಿ ಆವರಿಸಿ ಸುಟ್ಟು ಕರಕಲಾಗಿದೆ.

ಕೂಡಲೆ ಅಗ್ನಿಶಾಮಕಕ್ಕೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕಾಗಮಿಸುವ ಮುನ್ನವೇ ಸ್ಥಳೀಯರ ಸಹಕಾರದಿಂದ ಮನೆಯಿಂದ ಪಂಪ್‌ ಮೂಲಕ ನೀರು ಹಾಯಿಸಿ ಬೆಂಕಿ ನಂದಿಸಲಾಗಿದೆ.

ವೈರಲ್ ವಿಡಿಯೋ: ಕೇರಳದ ಅಲೆಪ್ಪಿ ಹಿನ್ನೀರಿನಲ್ಲಿ ಹೊತ್ತಿ ಉರಿಯಿತು ಬೋಟ್‌ ಹೌಸ್‌..!

ತಪ್ಪಿದ ಅನಾಹುತ: ಮನೆಯ ಸಮೀಪ ನಿಲ್ಲಿಸಬೇಕಿದ್ದ ಕಾರನ್ನು ಸಮೀಪದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿ ಮಾಲೀಕ ಗೋಪಾಲ ಆಚಾರ್ಯ ಅವರು ಮನೆಗೆ ಬಂದಿದ್ದರು. ಮನೆಯಿಂದ ದೂರದಲ್ಲಿ ಈ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯವಾಗಲಿ, ಮನೆಗೆ ಯಾವುದೇ ತೊಂದರೆಯಾಗಿಲ್ಲ.

ಆದರೆ, ಜೀವನೋಪಾಯಕ್ಕಾಗಿ ಬಾಡಿಗೆ ಮಾಡಿಕೊಂಡು ಜೀವನ ಸಾಗಿಸುವ ವಾಹನ ಸುಟ್ಟು ಹೋಗಿರುವುದು ಬೇಸರದ ವಿಚಾರ. ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ ದವರು ಆಗಮಿಸಿದ್ದು, ಕೊಲ್ಲೂರು ಪೊಲೀ ಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ