ಆ್ಯಪ್ನಗರ

ಹಿಂದೂ ವಿರೋಧಿ ಬುದ್ಧಿ ಜೀವಿಗಳು ಅನ್ಯ ಧರ್ಮಿಯ ಏಜೆಂಟರು: ಮುತಾಲಿಕ್

ನನ್ನ ಮೇಲೆ 109 ಪ್ರಕರಣ ದಾಖಲಾಗಿವೆ. ನಾನು ಕೋರ್ಟ್ ನೆಪದಲ್ಲಿ ಊರು ಸುತ್ತಿ ಸಂಘಟನೆ ಮಾಡುತ್ತೇನೆ. ಹಿಂದೂ ಧ್ವನಿಯನ್ನು ಹತ್ತಿಕ್ಕಲು ಸರಕಾರ ಸಾವಿರಾರು ಕೇಸ್ ಹಾಕಿದರೂ ಹಿಂದೂ ರಾಷ್ಟ್ರದ ಸ್ಥಾಪನೆ ತಡೆಯಲು ಯಾರ ಅಪ್ಪನಿಂದಲೂ ಸಾಧ್ಯವಿಲ್ಲ ಎಂದ ಪ್ರಮೋದ್ ಮುತಾಲಿಕ್.

Vijaya Karnataka Web 10 Feb 2019, 9:34 pm
ಉಡುಪಿ: ಸನಾತನ ಹಿಂದೂ ಧರ್ಮ, ದೇವರು, ಮಂದಿರವನ್ನು ವಿನಾ ಕಾರಣ ನಿಂದಿಸಿ ಅವಹೇಳನ ಮಾಡುವ ಬುದ್ಧಿಜೀವಿಗಳು ಅನ್ಯ ಧರ್ಮಿಯರ ಏಜೆಂಟರಾಗಿದ್ದು, ಕ್ರೈಸ್ತ, ಮುಸ್ಲಿಂರಿಂದ ಹಣ ಪಡೆದು ಈ ಕೃತ್ಯ ಮಾಡಿರುವುದಕ್ಕೆ ಸಾಕ್ಷಿಗಳಿವೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
Vijaya Karnataka Web Muthalik 1


ಹಿಂದೂ ಜನಜಾಗೃತಿ ಸಮತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಭಾನುವಾರ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.

ಹಿಂದೂ ಧರ್ಮವನ್ನು ಅವಹೇಳನ ಮಾಡುವ ಭಗವಾನ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಹಪಾಠಿಯಾಗಿದ್ದು, ಆತ ಆಡಿದ್ದೇ ಆಟ ನಡೆಯುತ್ತಿದೆ. ಆತನ ಬಂಧನವೂ ಆಗುತ್ತಿಲ್ಲ. ಅಪ್ಪ, ಅಮ್ಮ ಒಳ್ಳೆ ಕೆಲಸ ಮಾಡಲಿ ಅಂತ ಭಗವಾನ್ ಹೆಸರಿಟ್ಟರೆ ಆತನ ಸೈತಾನ್ ಕೆಲಸ ಮಾಡುತ್ತಿದ್ದಾನೆ.

ನನ್ನ ಮೇಲೆ 109 ಪ್ರಕರಣ ದಾಖಲಾಗಿವೆ. ನಾನು ಕೋರ್ಟ್ ನೆಪದಲ್ಲಿ ಊರು ಸುತ್ತಿ ಸಂಘಟನೆ ಮಾಡುತ್ತೇನೆ. ಹಿಂದೂ ಧ್ವನಿಯನ್ನು ಹತ್ತಿಕ್ಕಲು ಸರಕಾರ ಸಾವಿರಾರು ಕೇಸ್ ಹಾಕಿದರೂ ಹಿಂದೂ ರಾಷ್ಟ್ರದ ಸ್ಥಾಪನೆ ತಡೆಯಲು ಯಾರ ಅಪ್ಪನಿಂದಲೂ ಸಾಧ್ಯವಿಲ್ಲ ಎಂದರು.

ಮೂಡುಬಿದಿರೆ ಕರಿಂಜೆ ಶ್ರೀಲಕ್ಷ್ಮೀ ಸತ್ಯನಾರಾಯಣ ವೀರಾಂಜನೇಯ ಸ್ವಾಮಿ ದೇವಸ್ಥಾನದ ಶ್ರೀಮುಕ್ತಾನಂದ ಸ್ವಾಮೀಜಿ ಮಾತನಾಡಿ, ರಾಜಕೀಯ ನಾಯಕರಿಂದ ಭಾರತವನ್ನು ಜಗದ್ಗುರು ಮಾಡಲು ಸಾಧ್ಯವಾಗದೇ ಹೋದರೆ ಕೇಸರಿ ಶಾಲು ಧಾರಣೆ ಮಾಡಿರುವ ಹಿಂದೂಗಳೇ ಒಟ್ಟಾಗಿ ಭಾರತವನ್ನು ಜಗದ್ಗುರು ಮಾಡುತ್ತಾರೆ. ನಮ್ಮನ್ನು ಹತ್ತಿಕ್ಕುವ ಯಾವ ಕೃತ್ಯಕ್ಕೂ ನಾವು ಬಗ್ಗುವುದಿಲ್ಲ ಎಂದರು.

ಸನಾತನ ಸಂಸ್ಥೆ ಭಯೋತ್ಪಾದಕ ಸಂಸ್ಥೆಯಲ್ಲ. ಅದು ಹಿಂದೂಗಳಲ್ಲಿರುವ ಭಯವನ್ನು ನಿವಾರಿಸುವ ಸಂಸ್ಥೆ. ಹಿಂದೂಗಳು ಭಯೋತ್ಪಾದಕರಲ್ಲ. ಮತಾಂತರ ಮಾಡಿಲ್ಲ. ಯಾವ ದೇಶ, ಸಂಸ್ಕೃತಿಯ ಮೇಲೂ ದಾಳಿ ಮಾಡಿಲ್ಲ. ಈ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇ ಬೇಕು. ನಮ್ಮಂತಹ ಸಂತರಿಗೆ ರಾಮಮಂದಿರ ನಿರ್ಮಾಣವೇ ಅಚ್ಛೇದಿನ್ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ