ಆ್ಯಪ್ನಗರ

ಪೇಜಾವರ ಶ್ರೀಗಳ ಮಿದುಳು ನಿಷ್ಕ್ರಿಯ: ಜೀವರಕ್ಷಕ ಸಾಧನಗಳೇ ಆಧಾರ

ಉಡುಪಿಯ ಅಷ್ಟಮಠಗಳಲ್ಲೇ ಹಿರಿಯ ಯತಿಯಾದ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದರ(89) ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದ್ದು, ಮೆದುಳಿನಲ್ಲಿ ನಿಷ್ಕ್ರಿಯತೆ ಕಂಡುಬಂದಿದೆ ಎಂದು ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

Vijaya Karnataka Web 28 Dec 2019, 6:25 pm
ಉಡುಪಿ: ಉಡುಪಿಯ ಅಷ್ಟಮಠಗಳಲ್ಲೇ ಹಿರಿಯ ಯತಿಯಾದ ಪೇಜಾವರ ಶ್ರೀವಿಶ್ವೇಶ ತೀರ್ಥ ಶ್ರೀಪಾದರ(89) ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿದ್ದು, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
Vijaya Karnataka Web pejavara sri


ಶ್ರೀಗಳು ದಾಖಲಾಗಿರು ಆಸ್ಪತ್ರೆಯ ಬುಲೆಟಿನ್‌ ಹೊರಡಿಸಿದ್ದು, ಶ್ರೀಗಳು ಪ್ರಜ್ಞಾ ರಹಿತ ಸ್ಥಿತಿಯಲ್ಲಿಯೇ ಮುಂದುವರಿದಿದ್ದಾರೆ. ಇಂದಿಗೂ ಜೀವರಕ್ಷಕ ಸಾಧನಗಳ ಸಹಾಯದಲ್ಲಿ ಇದ್ದಾರೆ. ಅವರಿಗೆ ನಡೆಸಿದ ಪರೀಕ್ಷೆಗಳ ಪ್ರಕಾರ ಮೆದುಳಿನಲ್ಲಿ ನಿಷ್ಕ್ರಿಯತೆ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ನ್ಯುಮೋನಿಯಾ ಹಿನ್ನೆಲೆಯಲ್ಲಿ ಡಿ. 20 ರಂದು ಉಸಿರಾಟದ ಗಂಭೀರ ಸಮಸ್ಯೆಗಾಗಿ ಶ್ರೀಪಾದರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಆರೋಗ್ಯದಲ್ಲಿ ನಿರೀಕ್ಷೆಯ ಪ್ರಗತಿಯಾಗಿಲ್ಲ.

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡಿಲ್ಲ: ಶೋಭಾ ಕರಂದ್ಲಾಜೆ ಹೇಳಿಕೆ

ಹೊತ್ತಿನಿಂದ ಹೊತ್ತಿಗೆ ಚಿಕಿತ್ಸೆಗೆ ದೇಹದ ಪ್ರತಿಸ್ಪಂದನ ಕ್ಷೀಣವಾಗುತ್ತಿದೆ. ಪ್ರಜ್ಞಾಹೀನ ಸ್ಥಿತಿಯಲ್ಲೇ ಮುಂದುವರಿದಿರುವ ಶ್ರೀಪಾದರಿಗೆ ಜೀವರಕ್ಷಕ ಸಾಧನ ಮುಂದುವರಿದಿದೆ. ಮಿದುಳು ನಿರ್ಲಿಪ್ತವಾಗುತ್ತಿದೆ.

ಡಿ. 17ರಂದು ತಿರುಪತಿಯ ಶೀತ ಹವೆಯ ಪರಿಣಾಮದಿಂದ ಜ್ವರ ಬಾಧಗೆ ಒಳಗಾಗಿದ್ದ ಶ್ರೀಪಾದರು ಬೆಂಗಳೂರಿಗೆ ಬಂದು ಮಂಗಳೂರು, ರಾಮಕುಂಜ, ಪಾಜಕ, ರಾಜಾಂಗಣದ ಉಪನ್ಯಾಸಕ್ಕೆ ತೆರಳಿದ್ದರು.

ಉಡುಪಿಯ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾಗಬೇಕಿಂದಿದ್ದರೂ ನಾಳೆ ಬರುವುದಾಗಿ ತಿಳಿಸಿ ಮಠಕ್ಕೆ ಮರಳಿ ಅಡುಗೆ ಕೋಣೆಯಲ್ಲಿ ಜಪ ತಪ ಮಾಡಿದ್ದರು. ಡಿ. 20 ರ ಬೆಳಗ್ಗೆ ಉಸಿರಾದ ಗಂಭೀರ ಸಮಸ್ಯೆ ಎದುರಿಸಿ, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು.
ಡಾ. ಸುಧಾ ವಿದ್ಯಾಸಾಗರ ನೇತೃತ್ವದ ಆರು ತಜ್ಞ ವೈದ್ಯರ ತಂಡ ಶ್ರೀಪಾದರ ಚಿಕಿತ್ಸೆಯ ನಿಗಾ ವಹಿಸಿದ್ದು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ಇಬ್ಬರು ತಜ್ಞರೂ ಆಗಮಿಸಿದ್ದರು. ದಿಲ್ಲಿಯ ಏಮ್ಸ್ ವೈದ್ಯರ ಸಲಹೆಯನ್ನೂ ಕಾಲಕಾಲಕ್ಕೆ ಪಡೆಯಲಾಗುತ್ತಿತ್ತು. ಶುಕ್ರವಾರ ರಾತ್ರಿ ಎಂಆರ್‌ಐ ಸ್ಕ್ಯಾನ್ ನಡೆದಿತ್ತು.

ಶುಕ್ರವಾರ, ಶನಿವಾರದ ನಡುವೆ 24 ಗಂಟೆಗಳಲ್ಲಿ ಶ್ರೀಗಳ ಆರೋಗ್ಯಸ್ಥಿತಿಯಲ್ಲಿ ಯಾವುದೇ ಚೇತರಿಕೆಯಾಗದೆ ಮತ್ತಷ್ಟು ಕ್ಷೀಣವಾಗಿದೆ. ಏರ್ ಆ್ಯಂಬುಲೆನ್ಸ್ ಮೂಲಕ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಸ್ಥಳಾಂತರಿಸಲಾಗುವುದು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ