ಆ್ಯಪ್ನಗರ

ಎಸ್‌ಕೆಡಿಆರ್‌ಡಿಪಿ ಸದಸ್ಯರಿಗೆ ಶೀಘ್ರ ಉಚಿತ ಆರೋಗ್ಯ ಶಿಬಿರ

ಸಿಂಡಿಕೇಟ್‌ ಬ್ಯಾಂಕ್‌ ವತಿಯಿಂದ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರ ಶೀಘ್ರವೇ ನಡೆಯಲಿದೆ.

Vijaya Karnataka 28 May 2019, 5:00 am
Vijaya Karnataka Web skdrp
ಉಡುಪಿ: ಸಿಂಡಿಕೇಟ್‌ ಬ್ಯಾಂಕ್‌ ವತಿಯಿಂದ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರ ಶೀಘ್ರವೇ ನಡೆಯಲಿದೆ.

ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮೃತ್ಯುಂಜಯ ಮಹಾಪಾತ್ರ, ಮಣಿಪಾಲ ವಲಯ ಕಚೇರಿ ಜನರಲ್‌ ಮ್ಯಾನೇಜರ್‌ ಭಾಸ್ಕರ ಹಂದೆ ಎಸ್‌ಡಿಎಂ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಆರೋಗ್ಯ ಶಿಬಿರದ ನಿಟ್ಟಿನಲ್ಲಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು.

ಎಸ್‌ಡಿಎಂ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಮಮತಾ ನವೀನ್‌ ಮಂಜೂರಾತಿ ಪತ್ರ ಸ್ವೀಕರಿಸಿ, ಎಸ್‌ಕೆಡಿಆರ್‌ಡಿಪಿ ಸದಸ್ಯರಿಗೆ ಉಚಿತ ಆರೋಗ್ಯ ಶಿಬಿರ(ಆರೋಗ್ಯ ಮೇಳ) ಆಯೋಜಿಸಲು ಪ್ರಾಯೋಜಕತ್ವದ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿ, ಕೃತಜ್ಞತೆ ಸಲ್ಲಿಸಿದರು.

ಶಿಬಿರ ಸೌಲಭ್ಯವೇನು? ಬೇಸಿಕ್‌ ಇನ್‌ವೆಸ್ಟಿಗೇಶನ್‌/ಚಿಕಿತ್ಸೆ, ಉಚಿತ ಹೆಲ್ತ್‌ ಕಾರ್ಡ್‌, ನೋಂದಣಿ/ದಾಖಲೀಕರಣ, ಉಚಿತ ಸಲಹೆ/ಪರೀಕ್ಷೆ, ಹೊರ ರೋಗಿ ವಿಭಾಗದಲ್ಲಿ ಖರೀದಿಸುವ ಔಷಧಿಗೆ ಎಸ್‌ಕೆಡಿಆರ್‌ಡಿಪಿ ಸದಸ್ಯರಿಗೆ ಶೇ.10ರಿಯಾಯಿತಿ, ಒಪಿಡಿ ಆಧರಿತ ಚಿಕಿತ್ಸೆಗೆ ಶೇ. 50 ರಿಯಾಯಿತಿ ಲಭ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ